Date: 01-08-2021
Location: ಶಹಾಪುರ, ಯಾದಗಿರಿ ಜಿಲ್ಲೆ
ಯಾದಗಿರಿ ಜಿಲ್ಲೆಯ ಶಹಾಪುರದ ಸಂಧ್ಯಾ ಸಾಹಿತ್ಯ ವೇದಿಕೆಯು 16 ವರ್ಷದೊಳಗಿನ ಬಾಲ ಬರಹಗಾರರಿಗೆ ಕೊಡಮಾಡುವ ಪ್ರತಿಷ್ಠಿತ 'ವಿದ್ಯಾಸಾಗರ ಬಾಲ ಪುರಸ್ಕಾರ' ಕ್ಕಾಗಿ ಅರ್ಜಿ ಆಹ್ವಾನಿಸಿದೆ.
ಎಳೆಯ ವಯಸ್ಸಿನಲ್ಲಿ ಅಪಾರ ಪ್ರತಿಭೆ ತೋರಿ ಕಣ್ಮರೆಯಾದ ಬಾಲ ಕವಿ 'ವಿದ್ಯಾಸಾಗರ ಕುಕ್ಕುಂದಾ' ಅವರ ನೆನಪಿನಲ್ಲಿ ಕಳೆದ 22 ವರ್ಷದಿಂದ ಈ ಪ್ರಶಸ್ತಿ ಕೊಡಮಾಡುತ್ತಿದ್ದು, ಪುರಸ್ಕಾರವು 5 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಕಳೆದ ಅಕ್ಟೋಬರ್ ತಿಂಗಳಿನಿಂದ ಇಲ್ಲಿಯ ತನಕ ಬರೆದಿರುವ ಒಂದು ಸಂಕಲನಕ್ಕಾಗುವಷ್ಟು ಪ್ರಕಟಿತ ಅಥವಾ ಅಪ್ರಕಟಿತ ಕನ್ನಡ ಬರಹಗಳನ್ನು ಕಳುಹಿಸಬಹುದು. ಕತೆ, ಕವಿತೆ, ಲಲಿತ ಬರಹ, ಪ್ರವಾಸ ಕಥನ, ನಾಟಕ ಹೀಗೆ ಯಾವುದೇ ಪ್ರಕಾರದಲ್ಲೂ ಬರವಣಿಗೆ ಇರಬಹುದು.
2021ರ ಅಕ್ಟೋಬರ್ 10 ರೊಳಗಾಗಿ ಬರಹಗಳನ್ನು ಕಳುಹಿಸಬಹುದು. ಜನ್ಮದಿನಾಂಕ ದೃಢೀಕರಣ ಪತ್ರ ಮತ್ತು ಫೋಟೋ ಜೊತೆಗೆ ಬರಹಗಳನ್ನು ಈ ವಿಳಾಸಕ್ಕೆ ತಲುಪಿಸಬೇಕು.
ರವಿ ಹಿರೇಮಠ, ಅಧ್ಯಕ್ಷರು, ಸಂಧ್ಯಾ ಸಾಹಿತ್ಯ ವೇದಿಕೆ, ಅಮೃತ ನಿವಾಸ, ಸಿ.ಬಿ.ಕಮಾನಿನ ಹತ್ತಿರ, ಶಹಾಪುರ -585 223 (ಯಾದಗಿರಿ ಜಿಲ್ಲೆ)., ಹೆಚ್ಚಿನ ಮಾಹಿತಿಗಾಗಿ 9448651520/ 9986590894 ಸಂಪರ್ಕಿಸುವಂತೆ ವೇದಿಕೆ ಸಂಚಾಲಕ ರಾಜಶೇಖರ ಕುಕ್ಕುಂದಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...
ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...
©2024 Book Brahma Private Limited.