Date: 28-03-2024
Location: ಬೆಂಗಳೂರು
ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅನಿವಾಸಿ ಲೇಖಕ ಶಿಕಾಗೋದ ರವಿ ಹಂಜ್ ಅವರ ಇಂಗ್ಲಿಷ್ ಕೃತಿ "ರ ಠ ಈ ಕ" ಬುಧವಾರದಂದು ಬೆಂಗಳೂರಿನ ಮಲ್ಲೇಶ್ವರಂನ ಕ್ಲಬ್ಬಿನಲ್ಲಿ ಬಿಡುಗಡೆಯಾಯಿತು.
ಕೃತಿಯನ್ನು ಲೋಕರ್ಪಾಣೆಗೊಳಿಸಿ ಮಾತನಾಡಿದ ಖ್ಯಾತ ವಕೀಲ ಎಂ. ವಿ. ರೇವಣಸಿದ್ದಯ್ಯ, "ಪ್ರಾದೇಶಿಕ ಭಾಷೆಯ ಕೃತಿಗಳನ್ನು ಇಂಗ್ಲೀಷಿನಂತಹ ಜಾಗತಿಕ ಭಾಷೆಗಳಿಗೆ ಅನುವಾದಿಸುವಾಗ ಅಥವಾ ಆ ಭಾಷೆಯಲ್ಲಿ ಸೃಷ್ಠಿಸುವಾಗ ಯಾವ ರೀತಿಯಲ್ಲಿ ಇಲ್ಲಿನ ಪ್ರಾದೇಶಿಕ ನುಡಿಗಟ್ಟು, ಭಾಷಾಶೈಲಿ, ಒಡಪುಗಳನ್ನು ಜಾಗತಿಕಗೊಳಿಸಬೇಕು ಎಂಬುದಕ್ಕೆ ಈ ಕೃತಿ ಒಂದು ಮಾದರಿಯಾಗಿದೆ. ನಾನು ಈ ಕೃತಿಯನ್ನು ಮೂರು ವರ್ಷಗಳ ಹಿಂದೆಯೇ ಕನ್ನಡದಲ್ಲಿ ಓದಿದ್ದೆ. ಅದು ದಾವಣಗೆರೆಯ ಎಲ್ಲಾ ಭಾಷಾರಸಸ್ವಾದಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿತ್ತು. ಹಾಗಾಗಿ ಈ ಕೃತಿಯ ಇಂಗ್ಲಿಷ್ ಅನುವಾದ ಹೇಗಿರಬಹುದು ಎಂಬ ಸಹಜ ಕುತೂಹಲವಿತ್ತು. ರವಿಯವರು "ರ ಠ ಈ ಕ" ವನ್ನು ನನ್ನ ಊಹೆಗೆ ಮೀರಿ ಇನ್ನಷ್ಟು ಸ್ವಾರಸ್ಯಕರವಾಗಿ ಇಂಗ್ಲಿಷಿನಲ್ಲಿ ಸೆರೆ ಹಿಡಿದಿದ್ದಾರೆ," ಎಂದರು.
ಚೆನ್ನೈ ಫರ್ಟಿಲಿಟಿ ಸೆಂಟರ್ಸ್ ನ ಡಾ. ಗೌತಮ್ ಹಂಜಿ ಕೃತಿಯ ಕುರಿತು ಮಾತನಾಡಿ, "ಈ ಕೃತಿಯ ಹಲವಾರು ಘಟನೆಗಳಿಗೆ ನಾನು ಸಾಕ್ಷಿಯಾಗಿದ್ದೆ. ಆದರೆ ಎಂದೋ ಮರೆತುಹೋಗಿದ್ದ ಘಟನೆಗಳು ಈ ಕೃತಿಯನ್ನು ಓದಿದಾಗ ನೆನ್ನೆ ಮೊನ್ನೆಯಷ್ಟೇ ನಡೆದಂತೆ ಮತ್ತೆ ಕಣ್ಣ ಮುಂದೆ ಚಿತ್ರಗಟ್ಟಿದವು. ನಿಜಕ್ಕೂ ಕನ್ನಡ ಕೃತಿಗಳನ್ನು ಇಂಗ್ಲಿಷ್ ಭಾಷೆಗೆ ಭಾಷಾಂತರಿಸುವ ರೀತಿ ಹೇಗಿರಬೇಕು ಎಂಬುದಕ್ಕೆ ಈ ಕೃತಿ ಒಂದು ಮಾದರಿಯಾಗಿದೆ," ಎನ್ನುತ್ತಾ ತಮ್ಮ ದಾವಣಗೆರೆಯ ನೆನಪುಗಳನ್ನು ಸ್ಮರಿಸಿಕೊಂಡರು.
ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮಲ್ಲೇಶಪ್ಪ, ಪ್ರಕಾಶಕ ಸಂವಹನ ಲೋಕಪ್ಪ ಮತ್ತು ಲೇಖಕ ರವಿ ಹಂಜ್ ಉಪಸ್ಥಿತರಿದ್ದರು.
ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...
ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...
©2024 Book Brahma Private Limited.