Date: 27-01-2023
Location: ಬೆಂಗಳೂರು
ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಸೌಹಾರ್ದ ಭಾರತವು ಗಣರಾಜೋತ್ಸವ ಕಾರ್ಯಕ್ರಮ ಆಯೋಜಿಸಿತ್ತು. ಕಾವ್ಯ ಸಾಮರಸ್ಯ, ಭಾರತದ ವೈವಿಧ್ಯತೆಯ ಕಲ್ಪನೆ ಕುರಿತು ಚರ್ಚೆ, ಲೈಂಗಿಕ ಅಲ್ಪಸಂಖ್ಯಾತರ ಬದುಕು ವಿಷಯದ ಕುರಿತು ಸಂವಾದ ಹಾಗೂ ಛಾಯಾಚಿತ್ರ ಮತ್ತು ಕಲಾ ಪ್ರದರ್ಶನ ನಡೆಯಿತು.
"ದೇಶದಲ್ಲಿ ಇಂದು ದ್ವೇಷ ಭಾಷಣಕ್ಕೆ ಮಾತ್ರವಲ್ಲ, ಧರ್ಮ-ಧರ್ಮಗಳ ನಡುವೆ ಕಂದಕ ಸೃಷ್ಟಿ ಮಾಡುವ ಶಕ್ತಿಗಳು ಮುನ್ನೆಲೆ ಬಂದಿವೆ. ಈ ಸಂದರ್ಭದಲ್ಲಿ ನಿಜವಾದ ಗಣರಾಜ್ಯವು ದ್ವೇಷ ವಾದದ ಭಾರತವನ್ನು ಹಿಮ್ಮೆಟ್ಟಿಸುವ ಮೂಲಕ ನಿಜವಾದ ಪ್ರಜಾಪ್ರಭುತ್ವವನ್ನು ಸ್ಥಾಪಿಸಬೇಕು. ಸೌಹಾರ್ದ ಇದಕ್ಕೆ ಬುನಾದಿ ಅಗಬೇಕು" ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ಜಾತ್ಯಾತೀತ ದೇಶವಾಗಬೇಕು: ಒಂದು ಧರ್ಮವನ್ನು ನಂಬಿಯೂ ಜಾತ್ಯಾತೀತವಾಗಿ ಬದುಕುವುದು ಹೇಗೆ ಎಂಬುದನ್ನು ಗಾಂಧಿ ಮತ್ತು ವಿವೇಕಾನಂದರು ತಿಳಿಸಿಕೊಟ್ಟಿದ್ದಾರೆ. ಇವರಿಬ್ಬರೂ ಹಿಂದು ಧರ್ಮಕ್ಕೆ ನಿಷ್ಟರಾಗಿದ್ದರು. ಆದರೆ ಅವರು ಹಿಂದು ಧಾರ್ಮಿಕ ಮೂಲಭೂತವಾದಿಗಳಾಗಿರಲಿಲ್ಲ, ಹಿಂದು ಧರ್ಮದ ಒಳವಿರ್ಮಶಕರಂತೆ ಅವರು ಕೆಲಸ ಮಾಡಿದ್ದಾರೆ. ಹೀಗಾಗಿ, ಭಾರತ ಜಾತ್ಯಾತೀತ ದೇಶವಾಗಬೇಕು ಎಂದು ಬರಗೂರು ರಾಮಚಂದ್ರಪ್ಪ ಆಶಯಪಟ್ಟಿದ್ದಾರೆ.
ಕಾರ್ಯಕ್ರಮದ ಫೋಟೋಗಳು...
ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...
ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...
©2024 Book Brahma Private Limited.