Date: 15-09-2019
Location: ಧಾರವಾಡ
ಸಂಗಾತ ಸಾಹಿತ್ಯ ತ್ರೈಮಾಸಿಕವು ಯುವ ಬರಹಗಾರರಿಗೆ ಕಥಾಸ್ಪರ್ಧೆಯನ್ನು ಏರ್ಪಡಿಸಿದೆ. 35 ವರ್ಷ ವಯೋಮಿತಿಯೊಳಗಿನವರು ಈ ಸ್ಪಧೆಯಲ್ಲಿ ಭಾಗವಹಿಸಬಹುದಾಗಿದ್ದು, ಕಥೆಗಳಿಗೆ ಪದಮಿತಿ ಇರುವುದಿಲ್ಲ.
ಈ ಸ್ಪರ್ಧೆಗೆ ಕೆಲವು ನಿಯಮಾವಳಿಗಳಿದ್ದು, ಸ್ಪರ್ಧೆಗೆ ಕಳುಹಿಸುವ ಕಥೆ ಈ ಮೊದಲು ಎಲ್ಲಿಯೂ ಪ್ರಕಟವಾಗಿರಕೂಡದು. ಒಬ್ಬರು ಒಂದು ಕಥೆಯನ್ನು ಮಾತ್ರ ಕಳುಹಿಸಬಹುದು. ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕಥೆಯ ಜೊತೆ ಜನ್ಮ ದಿನಾಂಕ ದೃಢೀಕರಣ ಪತ್ರ ಇರುವ ಸ್ವವಿವರ ಪತ್ರ ಕಡ್ಡಾಯ. ಇ-ಮೇಲ್ ಮೂಲಕವೇ ಕಥೆಯನ್ನು ಕಳುಹಿಸಬೇಕು. ಅಂಚೆಯ ಮೂಲಕ ಬಂದ ಕಥೆಯನ್ನು ಸ್ವೀಕರಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಬಹುಮಾನಿತ ಕಥೆಗೆ 10000 ರೂ ಹಾಗೂ ಒಪ್ಪಿತ ಕಥೆಗಳಿಗೆ ತಲಾ 5000 ರೂ ಬಹುಮಾನವಿರುತ್ತದೆ. ಕಥೆಗಳನ್ನು ಕಳುಹಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 15.
ಇ-ಮೇಲ್: sangaata2018@gmail.com
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9341757653
ಬೆಂಗಳೂರು: ಲೇಖಿಕಾ ಸಾಹಿತ್ಯ ವೇದಿಕೆ- ಹಿರಿಯ ಲೇಖಕಿ ವಾಣಿಯವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ `ವಾಣಿ ಕೌಟುಂಬಿಕ ಕಥಾ ...
ಬೆಂಗಳೂರು: ಕರ್ನಾಟಕ ರಂಗ ಪರಿಷತ್ತು ಕೇಂದ್ರ ಸಮಿತಿ ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಯನ ರಾಜ...
ಬೆಂಗಳೂರು: ಅಂಕಿತ ಪುಸ್ತಕದ ವತಿಯಿಂದ ಪದ್ಮರಾಜ ದಂಡಾವತಿ ಅವರ ‘ಉಳಿದಾವ ನೆನಪು’ ಪತ್ರಕರ್ತನ ವೃತ್ತಿ ಜೀವನ...
©2024 Book Brahma Private Limited.