Date: 13-09-2019
Location: ಬೆಂಗಳೂರು
ನಗರದಲ್ಲಿ ಗುರುವಾರ ನಡೆದ ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ಸುಸ್ಥಿರ ಶಕ್ತಿಯ ಪಾತ್ರ ಮತ್ತು ಸವಾಲುಗಳು ಚರ್ಚಾ ಕಾರ್ಯಕ್ರಮವನ್ನು ಭೂ ವಿಜ್ಞಾನಿ ಅನಂತರಾಮು ಅವರು ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಭವಿಷ್ಯದ ಕ್ಲೀನ್ ಎನರ್ಜಿ ಸೋಲಾರ್ ಶಕ್ತಿಯಾಗಿದೆ. ಈ ಹಿಂದಿನ ಸರ್ಕಾರ ಸೋಲಾರ್ ಶಕ್ತಿ ಬಳಕೆಗೆ ಉತ್ತೇಜನ ನೀಡಿತ್ತು. ಆದರೆ ಇಂದಿನ ಸರ್ಕಾರ ಕೆಲ ನಿಬಂಧನೆಗಳಿವೆ ಎನ್ನುತ್ತಾ ಯೋಜನೆಯನ್ನು ಬದಲಾಯಿಸುತ್ತಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಸೆಲ್ಕೋ ಫೌಂಡೇಶನ್ ಮತ್ತು ಭಾರತೀಯ ವಿದ್ಯಾಭವನದ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಧ್ಯಮದಲ್ಲಿ ಸುಸ್ತಿರ ಶಕ್ತಿಯ ಪಾತ್ರದ ಕುರಿತು ಪತ್ರಕರ್ತರಾದ ನಾಗೇಶ್ ಹೆಗಡೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿ.ಎನ್.ಮೋಹನ್, ಎನ್.ಎಸ್.ಶ್ರೀಧರ ಮೂರ್ತಿ, ಗಾಣಧಾಳು ಶ್ರೀಕಂಠ, ಡಾ.ನಿರ್ಮಲಾ ಎಲಿಗಾರ್, ರೋಹಿತ್ ಬಿ.ಆರ್. ಮಾಲತಿ ಹೆಗಡೆ ಮುಂತಾದವರು ಅಭಿವೃದ್ಧಿ ಪತ್ರಿಕೋದ್ಯಮ, ಪರಿಸರ ಪತ್ರಕೋದ್ಯಮ ಹಾಗೂ ಸುಸ್ಥಿರ ಶಕ್ತಿಯ ಬಳಕೆ ಕುರಿತು ಚರ್ಚಿಸಿದರು.
ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...
ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...
©2024 Book Brahma Private Limited.