ಲೇಖಕಿ ಭಾರತಿ ಕೊಲ್ಲರಮಜಲು ಮೂಲತಃ ಪುತ್ತೂರಿನ ಮಣಿಯ ಕೃಷಿ ಕುಟುಂಬದವರು. ಕತೆ, ಕವನ, ರುಬಾಯಿ, ಗಝಲ್, ಮುಕ್ತಕಗಳು, ಪರಿಸರ ಪ್ರೇರಿತ ಕೃತಿಗಳ ರಚನೆಯ ಜೊತೆಗೆ, ಶಾಸ್ತ್ರೀಯ ಸಂಗೀತ ಅವರ ಆಸಕ್ತಿಯ ಕ್ಷೇತ್ರ.
ಪಿಡಿದ ಕರಗಳು ಹೇಳ ಬಯಸಿದ
ಹಿಡಿತ ಬಿಡದಿರು ಗೆಳೆಯನೆ
ನಡುವೆ ಅಂತರ ಬೇಡದಿರಲದು
ನಡೆವೆ ಸನಿಹಕೆ ಹೃದಯವೆ
ನೆಟ್ಟ ನೋಟದಿ ಎಲ್ಲ ಅರಿತೆನು
ಕೊಟ್ಟು ಪಡೆಯುವ ಭಾಷೆಯ
ಮಧುರ ಭಾವಕೆ ಸೋತು ನಿಂತಿಹೆ
ಅಧರ ಕಂಪನವರಿಯದೆ
ಹಳೆಯ ನೆನಪಿನ ಗುಂಗಿನೊಡನೆಯೆ
ಬೆಳೆದು ನಿಂತಿದೆ ಗೆಳೆತನ
ಬಾಳಿನುದ...