Story/Poem

ಗೀತಾ ವಸಂತ

ಗೀತಾ ವಸಂತ- ಕವಯತ್ರಿ, ಕಥೆಗಾರ್ತಿ ಮತ್ತು ವಿಮರ್ಶಕಿ. ಗೀತಾ ಅವರು ಹುಟ್ಟಿದ್ದು ಶಿರಸಿಯ ಎಕ್ಕಂಬಿ ಸಮೀಪದ ಕಾಡನಡುವಿನ ಒಂಟಿಮನೆ ಕಾಟೀಮನೆಯಲ್ಲಿ 1976 ಏಪ್ರಿಲ್ 20 ರಂದು  . ಈಗ ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಚೌಕಟ್ಟಿನಾಚೆಯವರು’ ಇವರ ಪ್ರಮುಖ ಕಥಾ ಸಂಕಲನ. ’ಹೊಸಿಲಾಚೆ ಹೊಸ ಬದುಕು , ಪರಿಮಳದ ಬೀಜ’ ಗೀತಾ ವಸಂತ ಅವರ ಕವನಸಂಕಲನಗಳು. ಬೆಳಕಿನ ಬೀಜ, ಬೇಂದ್ರೆ ಕಾವ್ಯ - ಅವಧೂತ ಪ್ರಜ್ಞೆ, ಹೊಸ ದಿಗಂತದ ಹೊಸದಾರಿ ಇವರ ಪ್ರಮುಖ ವಿಮರ್ಶಾ ಕೃತಿಗಳು, ಸ್ವಾತಂತ್ರ್ಯೋತ್ತರ ಕಥನ ಸಾಹಿತ್ಯದಲ್ಲಿ ಸ್ತ್ರೀವಾದಿ ಚಿಂತನೆಗಳು ಅವರ ಮಹಾಪ್ರಬಂಧ. ಪಾಟೀಲಪುಟ್ಟಪ್ಪ ಕಥಾ ಪ್ರಶಸ್ತಿ, ದೇವಾಂಗನಾ ಶಾಸ್ತ್ರಿ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ರತ್ನಮ್ಮ ಹೆಗಡೆ ಪ್ರಶಸ್ತಿಗಳು ದೊರೆತಿವೆ.

More About Author

Story/Poem

ಭವಚಕ್ರ

ಭವಚಕ್ರ ಪ್ರವರ್ತಿನೀ ಪಾದಪದ್ಮಗಳ ಮೇಲೆ ಪೀಠವೇರಿ ಮಾಟವಾಗಿ ಕುಳಿತು ರಂಗೋಲಿ ಬಿಡಿಸುತ್ತಾಳೆ ಅವಳು ಅಂಗಳದ ಬೆಳಕಿಗೆ ಸಗಣ ಸಾರಿಸಿ ಕತ್ತಲ ಬಳಿದು ಚೆಲ್ಲಾಪಿಲ್ಲಿ ಚುಕ್ಕೆಯೂರಿದ್ದಾಳೆ; ನೋಟಕ್ಕೆ ಬೆರಗು ಬೆರೆಸಿದ್ದಾಳೆ. ನೋಡನೋಡುತ್ತ ಬಿಂದುಗಳು ಕೂಡುತ್ತ ಚಲಿಸುತ್ತಿವೆ ಚಕ್ರವಾಗಿ...

Read More...

ಆವಿಯಾಗಿದೆ ಭಾಷೆ

  ಮಗ; ಅಮ್ಮಾ ನಾಳೆಯಿಂದ ನಾನಿರುವುದಿಲ್ಲ ನೀನು ನಗುತ್ತಾ ಇರು ನಿನ್ನೆಯೂ ಅಳುತ್ತಿದ್ದೆ ನೀನು ವೇದನೆಯಲ್ಲಿ ಅದ್ದಿದ ಒದ್ದೆ ಕಣ್ಣು ಉಬ್ಬುಬ್ಬಿ ಏರಿಳಿವ ಕೊರಳಸೆರೆ ಕಣ್ಣ ಕಿಟಕಿಯಲ್ಲಿ ಕಾಣುತ್ತಿತ್ತು. ಅದು ಕನಸೇ ಇರಬೇಕು ಬಿಚ್ಚಿದ ಹೆರಳಲ್ಲಿ ಮುಚ್ಚಿದ ನಿನ್ನ ಮುಖ ಒಮ್...

Read More...