ಬೈರಮಂಗಲ ರಾಮೇಗೌಡ
ಬೈರಮಂಗಲ ರಾಮೇಗೌಡರು ಪ್ರಗತಿಪರ ಚಿಂತಕ, ಲೇಖಕ, ಸಂಶೋಧಕ, ಸಂಘಟಕ, ಹೋರಾಟಗಾರ. ತಮ್ಮ ಮಾನವೀಯ ನಡವಳಿಕೆ, ಸಾಮಾಜಿಕ ಕಳಕಳಿ ರಾಮೇಗೌಡರನ್ನು ಬಂಡಾಯ ಲೇಖಕರನ್ನಾಗಿ ರೂಪಿಸಿದೆ. ಕನ್ನಡ ಸಾಹಿತ್ಯದ ಗಂಭೀರ ವಿದ್ಯಾರ್ಥಿಯಾದ ರಾಮೇಗೌಡರು ನಮ್ಮ ನಡುವಿನ ಜಾನಪದ ತಜ್ಞ , ಸಂಸ್ಕೃತಿ ಚಿಂತಕ. ಡಾ. ರಾಮೇಗೌಡರು ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿ ಛಾಪು ಮೂಡಿಸಿದ್ದಾರೆ. ಗ್ರಾಮಸಮಾಜ ಮತ್ತು ಗ್ರಾಮಸಂಸ್ಕೃತಿಯ ಬಗ್ಗೆ ವಿಶೇಷ ಪರಿಜ್ಞಾನವುಳ್ಳ ರಾಮೇಗೌಡರು ಈ ಬಗ್ಗೆ ತಮ್ಮ ಭಾಷಣ ಮತ್ತು ಬರವಣಿಗೆಯಿಂದ ಸಮಾಜದ ಕಣ್ತೆರೆಸುವ ಕೆಲಸ ಮಾಡುತ್ತಿದ್ದಾರೆ. ಕುವೆಂಪು ಕಾವ್ಯವನ್ನು ಸೂಕ್ಷ್ಮಗ್ರಾಹಿ ನೆಲೆಯಲ್ಲಿ ವಿವೇಚಿಸಿ ’ರಸಸಿದ್ಧಿ’ ಎಂಬ ಕುವೆಂಪುರವರ ಕಾವ್ಯ ವಿಮರ್ಶಾ ಕೃತಿಯನ್ನು ಹೊರತಂದಿದ್ದಾರೆ.