About the Author

ಸಾಹಿತಿ, ಸಂಶೋಧಕ ಮತ್ತು ಪತ್ರಕರ್ತರಾಗಿರುವ ಚಂದ್ರಕಾಂತ ಬಿಜ್ಜರಗಿ ಅವರು ವಿದ್ಯುನ್ಮಾನ ವ್ಯವಹಾರ ಕ್ಷೇತ್ರದಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜಯಪುರ ನಿವಾಸಿಗಳು. ವಿದ್ಯುನ್ಮಾನ ವಿಷಯದಲ್ಲಿ ಡಿಪ್ಲೋಮಾ ಪಡೆದಿದ್ದಾರೆ. ಜ್ಯೋತಿಷ್ಯ ಶಾಸ್ತ್ರ ಮತ್ತು ಸಮ್ಮೋಹನ ಶಾಸ್ತ್ರದಲ್ಲಿ ಅವರಿಗೆ ವಿಶೇಷ ಆಸಕ್ತಿ. ಅವರು ’ಕುರುಬ ದರ್ಪಣ’ ವಾರಪತ್ರಿಕೆಯ ಸಂಪಾದಕರು.  ವಿಜಯಪುರ ಜಿಲ್ಲಾ ಕುರಿ ಸಾಕಾಣಿಕೆ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷರು & ಹಾಲಿ ನಿರ್ದೇಶಕರು. ಕನಕದಾಸರ ಕುರಿತ ಸಾಕಷ್ಟು ಬಿಡಿ ಲೇಖನಗಳು ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳಲ್ಲಿ ಮತ್ತು ಸಂಘ-ಸಂಸ್ಥೆಗಳು ಪ್ರಕಟಿಸಿದ ಸ್ಮರಣಸಂಚಿಕೆಗಳಲ್ಲಿ ಪ್ರಕಟವಾಗಿವೆ.

ಕೃತಿಗಳು: ಬಳ್ಳಾರಿ ಪಾಳೆಗಾರ ಬಾಲದ ಹನುಮಪ್ಪ ನಾಯಕ, ಕುರುಬರ ಹೆಜ್ಜೆಗಳು, ಜ್ಯೋರ್ತಿವಿಜ್ಞಾನ, ವಿಜಯನಗರ ಸಾಮ್ರಾಜ್ಯ, ಕುರುಬರ ಕುಲಗುರು ರೇವಣಸಿದ್ಧ, ದಾರ್ಶನಿಕ ಕವಿ ಕನಕದಾಸರು, ಹಾಲುಮತ ಸನಾತನ ಧರ್ಮ, ಸೊನ್ನಲಗಿಯ ಸಿದ್ಧರಾಮ, ಅಹಿಲ್ಯಾಬಾಯಿ ಹೋಳಕರ್, ವರವಿ ಕುರಗಾರ ಮೋನಪ್ಪಯ್ಯ, ಶಿವನಲಿಂಗ, ವೀರಶೈವ ಮತಕ್ಕೆ ಒಡೆಯರ ಕೊಡುಗೆ, ಬೀರದೇವರ ಅವತಾರಗಳು, ಕುರುಬ ದರ್ಪಣ, ರಾಮಾಯಣ-ಭಾರತ-ಪುರಾಣ ಪ್ರಶ್ನಾವಳಿ, ಹಾಲುಮತ ರತ್ನಗಳು, ಸಿದ್ಧರ ಸಿದ್ಧ ರೇವಣಸಿದ್ಧ, ಕಲೆ ಮತ್ತು ಕ್ರೀಡೆ, ಕುರುಬರ ಕುಲಪುತ್ರ ಚಂದ್ರಗುಪ್ತ ಮೌರ್ಯ, 

ಚಂದ್ರಕಾಂತ ಬಿಜ್ಜರಗಿ

(27 Sep 1949)

Awards