ಕುರುಬರು ಆಳಿದ ವಿಜಯ ನಗರ ಸಾಮ್ರಾಜ್ಯ

Author : ಚಂದ್ರಕಾಂತ ಬಿಜ್ಜರಗಿ

Pages 224

₹ 230.00




Year of Publication: 2017
Published by: ಶೈಲಚಂದ್ರ ಪ್ರಕಾಶನ
Address: ದರ್ಗಾ, ಸೆಂಟ್ರಲ್‌ ಜೈಲ್ ಹತ್ತಿರ, ವಿಜಯಪುರ 586103
Phone: 9448336151

Synopsys

ಸಂಗಮ ವಂಶದ ಹಕ್ಕ-ಬುಕ್ಕರು ವಿಜಯನಗರ ಸಮ್ರಾಜ್ಯ ಸ್ಥಾಪಕರು ಎಂಬ ಸಂಗತಿ ಪ್ರಚಾರ ಜನರಲ್ಲಿದೆ. ವಿಜಯನಗರವನ್ನು ಆಳಿದ ಸಾಳುವ, ತುಳುವ ಮತ್ತು ಅರವೀಡು ವಂಶಗಳೂ ಕುರುಬ ಜಾತಿಗೆ ಸೇರುತ್ತವೆ ಎಂಬ ಅಂಶವನ್ನು ಈ ಕೃತಿ ಪ್ರತಿಪಾದಿಸುತ್ತದೆ. ಬೇಡರ ಕುಲಕಸುಬು ಕುರಿಪಾಲನೆಯೇ ಆಗಿತ್ತು. ಬೇಢ ಎಂದರೆ ಕುರಿ; ಬೇಢಗಳನ್ನು ಕಾಯುವವರು ಬೇಢರು. ಬೇಡರು ಅಲೆಮಾರಿ ಕುರಿಗಾರರು. ಕುರುಬರು ಸ್ಥಾನಿಕ ಕುರಿಗಾರರು. ವೃತ್ತಿಯಲ್ಲಿ ಬೇಡರು-ಕುರುಬರು ಸಹೋದರಸಂಬಂಧಿಗಳು ಎನ್ನುವ ಲೇಖಕರು ಮುಮ್ಮಡಿ ಸಿಂಗೆ ನಾಯಕ, ಕಂಪಿಲರಾಯ ಮತ್ತು ಕುಮಾರರಾಮ ಇವರು ಮೂಲದಲ್ಲಿ ಕುರುಬರೇ ಆಗಿದ್ದಾರೆ ಎಂದು ಪ್ರತಿಪಾದಿಸುತ್ತಾರೆ. ವಿಜಾತಿ ಸ್ತ್ರೀಯರ ಸಂಬಂಧದಿಂದ ಜಾತಿಸಂಕರತೆ ಆಗಿ ಕುರುಬರು ಬೇಡರನ್ನು ದೂರ ಇಟ್ಟರು. ಆ ನಂತರ ಬೇಡ-ಕುರುಬರಲ್ಲಿ ಭೇದಗಳು ಕಂಡುಬಂದವು ಎಂದು ವಿವರಿಸುತ್ತಾರೆ.

About the Author

ಚಂದ್ರಕಾಂತ ಬಿಜ್ಜರಗಿ
(27 September 1949)

ಸಾಹಿತಿ, ಸಂಶೋಧಕ ಮತ್ತು ಪತ್ರಕರ್ತರಾಗಿರುವ ಚಂದ್ರಕಾಂತ ಬಿಜ್ಜರಗಿ ಅವರು ವಿದ್ಯುನ್ಮಾನ ವ್ಯವಹಾರ ಕ್ಷೇತ್ರದಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜಯಪುರ ನಿವಾಸಿಗಳು. ವಿದ್ಯುನ್ಮಾನ ವಿಷಯದಲ್ಲಿ ಡಿಪ್ಲೋಮಾ ಪಡೆದಿದ್ದಾರೆ. ಜ್ಯೋತಿಷ್ಯ ಶಾಸ್ತ್ರ ಮತ್ತು ಸಮ್ಮೋಹನ ಶಾಸ್ತ್ರದಲ್ಲಿ ಅವರಿಗೆ ವಿಶೇಷ ಆಸಕ್ತಿ. ಅವರು ’ಕುರುಬ ದರ್ಪಣ’ ವಾರಪತ್ರಿಕೆಯ ಸಂಪಾದಕರು.  ವಿಜಯಪುರ ಜಿಲ್ಲಾ ಕುರಿ ಸಾಕಾಣಿಕೆ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷರು & ಹಾಲಿ ನಿರ್ದೇಶಕರು. ಕನಕದಾಸರ ಕುರಿತ ಸಾಕಷ್ಟು ಬಿಡಿ ಲೇಖನಗಳು ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳಲ್ಲಿ ಮತ್ತು ಸಂಘ-ಸಂಸ್ಥೆಗಳು ಪ್ರಕಟಿಸಿದ ಸ್ಮರಣಸಂಚಿಕೆಗಳಲ್ಲಿ ಪ್ರಕಟವಾಗಿವೆ. ಕೃತಿಗಳು: ಬಳ್ಳಾರಿ ಪಾಳೆಗಾರ ಬಾಲದ ಹನುಮಪ್ಪ ನಾಯಕ, ಕುರುಬರ ಹೆಜ್ಜೆಗಳು, ಜ್ಯೋರ್ತಿವಿಜ್ಞಾನ, ವಿಜಯನಗರ ಸಾಮ್ರಾಜ್ಯ, ...

READ MORE

Related Books