About the Author

ಸದ್ಯ ಬೆಂಗಳೂರಿನ ಸೃಷ್ಟಿ ಇನ್ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಆ್ಯಂಡ್ ಟೆಕ್ನಾಲಜಿಯಲ್ಲಿ ಬೋಧಕರಾಗಿರಾಗಿರುವ ಕೇಶವ ಮಳಗಿ ಅವರು ಮೂಲತಃ ಬಳ್ಳಾರಿ ಜಿಲ್ಲೆಯವರು. ಕನ್ನಡದ ಪ್ರಮುಖ ಕಥೆಗಾರರಲ್ಲಿ ಒಬ್ಬರಾಗಿರುವ ಮಳಗಿ ಅವರು 80ರ ದಶಕದಲ್ಲಿ ತಮ್ಮ ಬರವಣಿಗೆ ಆರಂಭಿಸಿದರು. ತಮ್ಮ ವಿಶಿಷ್ಟ ನುಡಿಗಟ್ಟು, ಶೈಲಿ, ದನಿ ಬನಿಯ ಕತೆಗಳಿಂದ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ಮಳಗಿ ಅವರು ಜನಸಾಮಾನ್ಯರು ಬದುಕನ್ನು ಘನತೆ, ಪ್ರೀತಿಯಿಂದ ಜೀವಿಸುವ ರೀತಿಯನ್ನು ಕತೆಗಳಲ್ಲಿ ಚಿತ್ರಿಸುತ್ತಾರೆ. ಆಪ್ತವಾಗಿ ಕತೆ ಹೇಳುವಂತೆ ಬರೆಯುವ ಮಳಗಿ ಅವರ 'ಕಡಲ ತೆರೆಗೆ ದಂಡೆ', 'ಮಾಗಿ ಮೂವತ್ತೈದು', 'ವೆನ್ನೆಲ ದೊರೆಸಾನಿ', 'ಹೊಳೆ ಬದಿಯ ಬೆಳಗು' ಸಂಕಲನಗಳು ಪ್ರಕಟವಾಗಿವೆ. 'ಕುಂಕುಮ ಭೂಮಿ', 'ಅಂಗಧ ಧರೆ' ಅವರ ಕಾದಂಬರಿಗಳಾದರೆ 'ನೇರಳೆ ಮರ' ರೂಪಕ ಲೋಕ ಕಥನ ನಿರೂಪಿಸುತ್ತದೆ. ಸೊಗಸಾದ ರೀತಿಯಲ್ಲಿ ಅನುವಾದ ಮಾಡಿರುವ ಮಳಗಿ ಅವರು 'ಬೋರಿಸ್ ಪಾಸ್ತರ್‌ನಾಕ್: ವಾಚಿಕೆ', “ನೀಲಿ ಕಡಲ ಹಕ್ಕಿ' (ಕತೆಗಳು), 'ಮದನೋತ್ಸವ' (ಕಾದಂಬರಿ), 'ಸಂಕಥನ' (ಫ್ರೆಂಚ್ ಸಾಹಿತ್ಯ, ಸಮಾಜ, ಸಂಸ್ಕೃತಿ, ಸಾಹಿತ್ಯ ವಿಮರ್ಶೆ), 'ಕಡಲಾಚೆಯ ಚೆಲುವೆ' (ಫ್ರೆಂಚ್ ಕಥೆಗಳು), ಆಲ್ಬರ್ಟ್‌ ಕಾಮು (ತರುಣ ವಾಚಿಕೆ) ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ‘ಅಕಥ ಕಥಾ’ ಅವರ ಮತ್ತೊಂದು ಕತಾ ಸಂಕಲನ 2020ರಲ್ಲಿ ಪ್ರಕಟವಾಗಿದೆ. 

ಕೇಶವ ಮಳಗಿ

Awards

BY THE AUTHOR