About the Author

ಕುಮಾರ ಬೇಂದ್ರೆ ಜನನ 24-10-1977, ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ. ಪ್ರಾಥಮಿಕ ಶಿಕ್ಷಣವನ್ನು ಬೆಳ್ಳಟ್ಟಿಯಲ್ಲಿ ಪಡೆದರು. ಹುಬ್ಬಳ್ಳಿಯ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದಿಂದ ಚಿತ್ರಕಲಾ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ ಪಡೆದಿದ್ದಾರೆ.

ಇವರು ಹುಬ್ಬಳ್ಳಿ ನಿವಾಸಿಯಾಗಿದ್ದು 'ಉದಯವಾಣಿ' ಪತ್ರಿಕೆಯಲ್ಲಿ ಉಪಸಂಪಾದಕ ವೃತ್ತಿ, ಪತ್ನಿ ಅನುಪಮ, ಪುತ್ರರು ಚೇತನ, ಚಂದನ, ಎರಡು ದಶಕದಿಂದ ಸಾಹಿತ್ಯ ಕೃಷಿಯಲ್ಲಿ ಸಕ್ರಿಯರಾಗಿದ್ದಾರೆ.

ಕುಮಾರ ಬೇಂದ್ರೆ ಅವರ ಪ್ರಕಟಿತ ಕೃತಿಗಳು ಮಾದಪ್ಪನ ಸಾವು (೨೦೦೫) ಅದೃಶ್ಯ ಲೋಕದ ಮಾಯೆ (೨೦೦೭) ನಿರ್ವಾಣ (೨೦೧೧) ಗಾಂಧಿ ವೃತ್ತದ ದಂಗೆ (೨೦೧೨) ಮನಸೆಂಬ ಮಾಯಾವಿ (೨೦೧೭) ಕಥಾ ಸಂಕಲನವಾಗಿದೆ.  ತಲ್ಲಣ (೨೦೧೬), ನೆಲೆ (೨೦೧೧) ಜೋಗವ್ವ (೨೦೦೭) ಇವರ ಕಾದಂಬರಿಗಳಾಗಿವೆ. ಋಣ (೨೦೧೬). ಅಸ್ತಿತ್ವ (೨೦೧೮) ನಾಟಕಗಳನ್ನು ರಚಿಸಿದ್ದು, ಬಯಲು ಬೆರಗು (೨೦೧೭) ಕಾಲಯಾನ (೨೦೦೫) ತುಮುಲ (೨೦೦೦) ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಸಂತೆಗೆ ಬಂದವರು (೨೦೦೨) ಎಂಬ ನೀಳ್ಗತೆಯನ್ನೂ ರಚಿಸಿದ್ದಾರೆ.

ಇವರಿಗೆ ಸಂದ ಪುರಸ್ಕಾರ: 2006ರಲ್ಲಿ ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ನಡೆದ 'ಅಕ್ಕ ವಿಶ್ವ ಕನ್ನಡ ಸಮ್ಮೇಳನ'ದ ಅಂಗವಾಗಿ ನಡೆದ ಕಾದಂಬರಿ ಸ್ಪರ್ಧೆಯಲ್ಲಿ ದೊರಕಿತು. ಇವರ ’ಜೋಗವ್ವ' ಕಾದಂಬರಿಗೆ ಪುರಸ್ಕಾರ ದೊರಕಿದೆ. “ನಿರ್ವಾಣ' ಕಥಾ ಸಂಕಲನಕ್ಕೆ ರಾಜ್ಯ ಕನ್ನಡ ಸಾಹಿತ್ಯ ಪರಿಷತ್‌ನಿಂದ 'ವಾಸುದೇವಾ ಚಾರ್ಯ ದತ್ತಿ' ಪ್ರಶಸ್ತಿ, 'ಋಣ' ನಾಟಕಕ್ಕೆ ರಾಜ್ಯ ಕನ್ನಡ ಸಾಹಿತ್ಯ ಪರಿಷತ್‌ನಿಂದ 'ಕಾಕೋಳು ಸರೋಜಮ್ಮ ದತ್ತಿ' ಹಾಗೂ 'ಮನಸೆಂಬ ಮಾಯಾವಿ' ಆಯ್ದ ಕತೆಗಳ ಸಂಕಲನಕ್ಕೆ 'ಜಿ.ಎನ್. ಹೇಮರಾಜ ದತ್ತಿ ಪ್ರಶಸ್ತಿ, ಸಂಕ್ರಮಣ ಸಾಹಿತ್ಯ ಸ್ಪರ್ಧೆಯಲ್ಲಿ ಕಥಾ ಬಹುಮಾನ, ಮುಂಬಯಿಯ ಕನ್ನಡ ಮಾಸಿಕ “ಮೊಗವೀರ' ಆಯೋಜಿಸಿದ್ದ ರಾಷ್ಟ್ರಮಟ್ಟದ ಕಥಾ ಸ್ಪರ್ಧೆಯಲ್ಲಿ ಬಹುಮಾನ. 'ಉತ್ಥಾನ' ಮಾಸಿಕದ ಸಂಕ್ರಾಂತಿ ಕಥಾಸ್ಪರ್ಧೆಯಲ್ಲಿ ಬಹುಮಾನ, 'ಸಂಯುಕ್ತ ಕರ್ನಾಟಕ'ದ ವಾರ್ಷಿಕ ಕಥಾ ಸ್ಪರ್ಧೆಯಲ್ಲಿ ಬಹುಮಾನ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ರಾಜ್ಯೋತ್ಸವದ ಶ್ರೇಷ್ಠ ಕಾವ್ಯ ಪುರಸ್ಕಾರ ಇವರಿಗೆ ಸಂದಿದೆ.

 

ಕುಮಾರ ಬೇಂದ್ರೆ

(24 Oct 1977)

BY THE AUTHOR