ಅಸ್ತಿತ್ವ (ನಾಟಕ)

Author : ಕುಮಾರ ಬೇಂದ್ರೆ

Pages 90

₹ 100.00




Year of Publication: 2018
Published by: ಸಾಗರಿ ಪ್ರಕಾಶನ
Address: # 275/ಎಫ್ 6-1, ಮೊದಲ ಮಹಡಿ, 4 ನೇ ವೆಸ್ಟ್ ಕ್ರಾಸ್, ಉತ್ತರಾಧಿಮುಟದ ರಸ್ತೆ, ಮೈಸೂರು - 570 004

Synopsys

‘ಅಸ್ತಿತ್ವ’ ಕುಮಾರ ಬೇಂದ್ರೆ ಅವರ ನಾಟಕ. ಕಥೆ, ಕಾದಂಬರಿ, ಕವಿತೆಗಳ ಮೂಲಕ ಈಗಾಗಲೇ ಜನಮಾನಸದಲ್ಲಿ ಉಳಿದ ಕುಮಾರ ಬೇಂದ್ರೆ ಅವರು ನಾಟಕಕಾರ ಹಾಗೂ ಪತ್ರಕರ್ತರೂ ಹೌದು. ಅವರ ಮೊದಲ ನಾಟಕ ಕೃತಿ 'ಋಣಕ್ಕೆ ರಾಜ್ಯ ಸಾಹಿತ್ಯ ಪರಿಷತ್‌ ದತ್ತಿ ಪ್ರಶಸ್ತಿ ಲಭಿಸಿದ್ದು, ಟಿಲಿಚಿತ್ರವಾಗಿ ಕೂಡ ಪ್ರದರ್ಶನ ಕಂಡು ಜನಮನ್ನಣೆ ಗಳಿಸಿದೆ. ಇಲ್ಲಿರುವ "ಅಸ್ತಿತ್ವ ಹಾಗೂ 'ಹಸಿವು' ನಾಟಕಗಳ ವಸ್ತು ಗಂಭೀರವಾದವು. ನಿಸರ್ಗ ಮನುಷ್ಯನಿಗೆ ಏನೆಲ್ಲ ಕೊಟ್ಟಿದೆ. ಆದರೆ ಮನುಜ ಅದನ್ನು ಸಹಜ-ಸರಳ ಸ್ವರೂಪದಲ್ಲಿ ಅನುಭವಿಸದೇ ನಾಗರಿಕ ಸಮಾಜವೆಂಬ ಮೋಹ ಸೃಷ್ಟಿಸಿಕೊಂಡು, ವರ್ಣ-ವರ್ಗ, ಜಾತಿ-ಮತ, ಅಧಿಕಾರ-ಅಂಹಕಾರ ಹಾಗೂ ರಾಕ್ಷಸಿ ಪ್ರವೃತ್ತಿಗಳನ್ನೇ ವೈಭವೀಕರಿಸುತ್ತ ತನ್ನ ಮೂಲ ಸ್ವರೂಪವನ್ನೇ ಮರೆತಿದಾನೆ.

ಸಮಾಜದಲ್ಲಿ ಅಸಮಾನತೆ, ಬಡತನ, ಸಂಘರ್ಷ, ಅಶಾಂತಿ ಸೃಷ್ಟಿಸಿ ಅದರಿಂದ ಹೊರಬರಲಾರದೇ ಹಿಂಸೆ ಅನುಭವಿಸುತ್ತಿದ್ದಾನೆ. ಇಂತಹ ವ್ಯವಸ್ಥೆಯಲ್ಲಿ ಒಬ್ಬ ಅಸಹಾಯಕ ವ್ಯಕ್ತಿ ಒಂದು ಕುಟುಂಬ ತನ್ನ ಅಸ್ತಿತ್ವಕ್ಕಾಗಿ ಹಂಬಲಿಸುವ ಪರಿ ಇಲ್ಲಿ ದಾಖಲಾಗಿದೆ. ಇಂತಹ ವಿಷಮ ವ್ಯವಸ್ಥೆಯ ವಿರುದ್ಧ ರೋಷವಿದೆ, ಪ್ರತಿಭಟನೆಯಿದೆ, ವಿಷಾದವಿದೆ. ಆದರೆ ವಾಸ್ತವದಲ್ಲಿ ಪ್ರತಿಯೊಂದು ಜೀವಿ ಇರುವಷ್ಟು ಕಾಲ ತನ್ನ ಅಸ್ತಿತ್ವಕ್ಕಾಗಿಯೇ ಹೋರಾಟ ಮಾಡುವುದು ಎಂಬ ದನಿಯನ್ನು ಈ ಕೃತಿಯು ನೀಡುತ್ತದೆ. ಅದನ್ನು ಲೇಖಕರು ಸಹಜ ದೃಶ್ಯ ಹಾಗೂ ಸಂಭಾಷಣೆ ಮೂಲಕ ಕಟ್ಟಿಕೊಟ್ಟಿದಾರೆ, ರಂಗ ಪ್ರಯೋಗಕ್ಕೆ ಹೊಸ ಪಠ್ಯ ಹುಡುಕುತ್ತಿರುವವರಿಗೆ ಇದು ಸೂಕ್ತ ಕೃತಿ. 

About the Author

ಕುಮಾರ ಬೇಂದ್ರೆ
(24 October 1977)

ಕುಮಾರ ಬೇಂದ್ರೆ ಜನನ 24-10-1977, ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ. ಪ್ರಾಥಮಿಕ ಶಿಕ್ಷಣವನ್ನು ಬೆಳ್ಳಟ್ಟಿಯಲ್ಲಿ ಪಡೆದರು. ಹುಬ್ಬಳ್ಳಿಯ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದಿಂದ ಚಿತ್ರಕಲಾ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ ಪಡೆದಿದ್ದಾರೆ. ಇವರು ಹುಬ್ಬಳ್ಳಿ ನಿವಾಸಿಯಾಗಿದ್ದು 'ಉದಯವಾಣಿ' ಪತ್ರಿಕೆಯಲ್ಲಿ ಉಪಸಂಪಾದಕ ವೃತ್ತಿ, ಪತ್ನಿ ಅನುಪಮ, ಪುತ್ರರು ಚೇತನ, ಚಂದನ, ಎರಡು ದಶಕದಿಂದ ಸಾಹಿತ್ಯ ಕೃಷಿಯಲ್ಲಿ ಸಕ್ರಿಯರಾಗಿದ್ದಾರೆ. ಕುಮಾರ ಬೇಂದ್ರೆ ಅವರ ಪ್ರಕಟಿತ ಕೃತಿಗಳು ಮಾದಪ್ಪನ ಸಾವು (೨೦೦೫) ಅದೃಶ್ಯ ಲೋಕದ ಮಾಯೆ (೨೦೦೭) ನಿರ್ವಾಣ (೨೦೧೧) ಗಾಂಧಿ ವೃತ್ತದ ದಂಗೆ (೨೦೧೨) ...

READ MORE

Related Books