ಋಣ

Author : ಕುಮಾರ ಬೇಂದ್ರೆ

Pages 88

₹ 65.00




Year of Publication: 2016
Published by: ದಾಕ್ಷಾಯಿನಿ ಪ್ರಕಾಶನ
Address: # 149/1, ಎಫ್131, ವೀಣೇಶಾಮಣ್ಣ ರಸ್ತೆ, ಮೈಸೂರು- 570 004

Synopsys

‘ಋಣ’ ಲೇಖಕ ಕುಮಾರ ಬೇಂದ್ರೆ ಅವರ ನಾಟಕ. ತಂದೆ-ಮಕ್ಕಳ ಸಂಬಂಧ ಪರಸ್ಪರರ ನಡುವಿನ ಒಂದು ಋಣ, ತಿಳುವಳಿಕೆಯ ವ್ಯತ್ಯಾಸದಿಂದ ಎರಡನೇ ತಲೆಮಾರಿನ ಮಕ್ಕಳು ತಂದೆಯನ್ನು ದೂರ ಮಾಡುತ್ತಾರೆ. ಅದಕ್ಕೆ ಇನ್ನೊಂದು ಕಾರಣ ಮಕ್ಕಳು ಇರುವ ಆರ್ಥಿಕ ಸ್ಥಿತಿ, ಕೆಟ್ಟ ಬುದ್ದಿಯಿಂದ ಬಂದ ಬಡತನ, ವಿಷಮ ಮನಸ್ಥಿತಿಯಿಂದ ಆಗುವ ಹಣದ ಕೊರತೆ, ತಂದೆಯ ಕುರಿತ ಹೊಣೆ ಮರೆಸುತ್ತದೆ. ಆದರೆ ಹೆಣ್ಣುಮಗಳು ತಂದೆಯ ಋಣದ ಬಗ್ಗೆ ಕೃತಜ್ಞಳೂ ಭಾವುಕಳೂ ಆಗಿರುತ್ತಾಳೆ, ಅಂತಹ ಮಗಳು ಕತೆಯ ಕೇಂದ್ರವಾಗಿ ನಾಟಕ ಮುಂದುವರೆಯುತ್ತದೆ. 

About the Author

ಕುಮಾರ ಬೇಂದ್ರೆ
(24 October 1977)

ಕುಮಾರ ಬೇಂದ್ರೆ ಜನನ 24-10-1977, ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ. ಪ್ರಾಥಮಿಕ ಶಿಕ್ಷಣವನ್ನು ಬೆಳ್ಳಟ್ಟಿಯಲ್ಲಿ ಪಡೆದರು. ಹುಬ್ಬಳ್ಳಿಯ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದಿಂದ ಚಿತ್ರಕಲಾ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ ಪಡೆದಿದ್ದಾರೆ. ಇವರು ಹುಬ್ಬಳ್ಳಿ ನಿವಾಸಿಯಾಗಿದ್ದು 'ಉದಯವಾಣಿ' ಪತ್ರಿಕೆಯಲ್ಲಿ ಉಪಸಂಪಾದಕ ವೃತ್ತಿ, ಪತ್ನಿ ಅನುಪಮ, ಪುತ್ರರು ಚೇತನ, ಚಂದನ, ಎರಡು ದಶಕದಿಂದ ಸಾಹಿತ್ಯ ಕೃಷಿಯಲ್ಲಿ ಸಕ್ರಿಯರಾಗಿದ್ದಾರೆ. ಕುಮಾರ ಬೇಂದ್ರೆ ಅವರ ಪ್ರಕಟಿತ ಕೃತಿಗಳು ಮಾದಪ್ಪನ ಸಾವು (೨೦೦೫) ಅದೃಶ್ಯ ಲೋಕದ ಮಾಯೆ (೨೦೦೭) ನಿರ್ವಾಣ (೨೦೧೧) ಗಾಂಧಿ ವೃತ್ತದ ದಂಗೆ (೨೦೧೨) ...

READ MORE

Related Books