About the Author

ಲೇಖಕಿ ಮಾಲತಿ ಮುದಕವಿ ಅವರು ಎಂ ಎ., ಬಿ ಎಡ್ ಪದವೀಧರರು. ನಿವೃತ್ತ ಕನ್ನಡ ಉಪನ್ಯಾಸಕಿ. ಕರ್ನಾಟಕ ರಾಜ್ಯ ಮಟ್ಟದ ‘ನಗೆಮುಗುಳು’ ಏರ್ಪಡಿಸಿದ್ದ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ಹಾಗೂ ಮುಂಬೈ ಕನ್ನಡಿಗರ ಹಾಸ್ಯ ಲೇಖನ ಸ್ಪರ್ಧೆಯಲ್ಲಿಯೂ ಪ್ರಥಮ ಬಹುಮಾನ. ಸುಧಾ ಯುಗಾದಿ 2016ರ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ತೃತೀಯ ಬಹುಮಾನ. ಆಕಾಶವಾಣಿಯಲ್ಲಿ ಕೂಡ ಅನೇಕ ಚರ್ಚೆಗಳು, ನಾಟಕ ರಚನೆ, ವಿಮರ್ಶೆ, ಪ್ರಬಂಧ ವಾಚನ ಕಾರ್ಯ ಕ್ರಮಗಳಲ್ಲಿ ಭಾಗವಹಿಸುವಿಕೆ.  ಶ್ರೀ ಬಸವರಾಜ ಕಟ್ಟಿಮನಿಯವರ ಶತಮಾನೋತ್ಸವದ ಪ್ರಯುಕ್ತ 'ಸಾಹಿತ್ಯಶ್ರೀ' ಎಂಬ ಪುರಸ್ಕಾರ. ಲೇಖಿಕಾ ಸಾಹಿತ್ಯ ವೇದಿಕೆಯ 2020ರ ಎರಡು ರಾಜ್ಯ ಮಟ್ಟದ ಸ್ಪರ್ಧೆಗಳಾದ ಲೇಖಿಕಾಶ್ರೀ 2020 ಸಾಹಿತ್ಯ ಪ್ರಶಸ್ತಿಯು ಇವರ ಜೀವನ ಸಂಧ್ಯಾರಾಗ ಕಥಾಸಂಕಲನಕ್ಕೆ ಹಾಗೂ ಹಾಗೂ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ದೊರೆತಿದೆ. ಪ್ರತಿಲಿಪಿ ಕಥಾ ಸ್ಪರ್ಧೆಯಲ್ಲಿ ಕೂಡ ಮೂರು ಬಾರಿ ಬಹುಮಾನ ಪಡೆದಿದ್ದಾರೆ.  ಪ್ರಿಯಾಂಕಾ ಪತ್ರಿಕೆಯು ಪ್ರತಿ ವರ್ಷ ಏರ್ಪಡಿಸುವ ಬೆನಕ ಅನುವಾದಿತ ಕಥಾಸ್ಪರ್ಧೆಯಲ್ಲಿ ಮೂರು ಬಾರಿ ಮೊದಲ, ಎರಡು ಬಾರಿ ದ್ವಿತೀಯ, ಒಂದು ಬಾರಿ ತೃತೀಯ ಹಾಗೂ ಸಮಾಧಾನಕರ ಬಹುಮಾನ ಪಡೆದಿದ್ದಾರೆ. .

ಕೃತಿಗಳು: (ಕಥಾಸಂಕಲನಗಳು), ಚಿತ್ತ ಚಿತ್ತಾರ ಗಂಧವತೀ ಪೃಥ್ವಿ ಜೀವನ ಸಂಧ್ಯಾ ರಾಗ ಪ್ರೇಮ ಸಾಫಲ್ಯ ಹಾಗೂ ಇತರ ಕಥೆಗಳು ಮಾನಿನಿಯ ಮನದಳಲು, (ಹಾಸ್ಯ ಸಂಕಲನ) ಹಾಸ್ಯ ರಂಗೋಲಿ,ವಿಮರ್ಶಾತ್ಮಕ ಸಮೀಕ್ಷೆ ನಿತ್ಯ ಜೀವನದಲ್ಲಿ ಭಗವದ್ಗೀತೆ ಮರಾಠಿಯಿಂದ 6 ಪುಸ್ತಕಗಳನ್ನು ಕನ್ನಡಕ್ಕೆ ಅನುವಾದ: ಬೃಹತ್ ಅನುವಾದಿತ ಕಾದಂಬರಿ ಮೇನಕಾ, ಎರಡು ಸಂಭಾವನಾ ಗ್ರಂಥಗಳು: ಶುಭದಾ: ನೆನಪಿನ ಭಾವತರಂಗ ಮಂದಾಕಿನಿ, ಇತರ ಹೊತ್ತಿಗೆಗಳಾದ ಅಶೋಕ ಅಲೆಕ್ಸಾಂಡರ್, ಜೆ ಕೃಷ್ಣಮೂರ್ತಿ ಶ್ಯಾಮನ ಅವ್ವ ಗೆ ಸಾಕ್ಷಿ.

 

ಮಾಲತಿ ಮುದಕವಿ

(10 Apr 1950)