ಗಂಧವತೀ ಪೃಥ್ವಿ' ಯಲ್ಲಿಯ ಹೆಚ್ಚಿನ ಕಥೆಗಳು ಜೀವನದಲ್ಲಿಯ ರಾಗ-ದ್ವೇಷಗಳು, ಅವುಗಳೊಂದಿಗೆ ತಳಕು ಹಾಕಿಕೊಂಡ೦ತಿರುವ ಋಣಾತ್ಮಕ ಗುಣಗಳಾದ ಸಂಶಯ, ಅದರಿಂದಾಗುವ ಅನಾಹುತಗಳು... ಇವೆಲ್ಲ ಭಾವನೆಗಳ ಸಹಜ ಅಭಿವ್ಯಕ್ತಿಯನ್ನೊಳಗೊಂಡಿವೆ . ಹೆಣ್ಣು ಗಂಧವತಿಯಾದ ಈ ಭೂಮಿಯಂತೆಯೇ ಜೀವನದ ಧನಾತ್ಮಕ ಗುಣಗಳು ಒಳಗೊಂಡಿರುವುದನ್ನು ಇಲ್ಲಿಯ ಅನೇಕ ಕಥೆಗಳಲ್ಲಿ ಕಾಣಬಹುದು.
ವಿಜಯಪುರದ ಪಿಯು ಕಾಲೇಜಿನಲ್ಲಿ ಕನ್ನಡ ಅರೆಕಾಲಿಕ ಉಪನ್ಯಾಸಕಿ ಆಗಿರುವ ಮಾಲತಿ ಮುದಕವಿ ಮೂರು ಕಥಾ ಸಂಕಲನ ಪ್ರಕಟಿಸಿದ್ದಾರೆ. ಮೂರು ಕಥಾಸಂಕಲನಗಳು: ಚಿತ್ತ ಚಿತ್ತಾರ ಗಂಧವತೀ ಪೃಥ್ವಿ ಜೀವನ ಸಂಧ್ಯಾ ರಾಗ ಒಂದು ಹಾಸ್ಯ ಸಂಕಲನ: ಹಾಸ್ಯ ರಂಗೋಲಿ(ಅಚ್ಚಿನಲ್ಲಿ) ಎರಡು ಸಂಭಾವನಾ ಗ್ರಂಥಗಳು: ಶುಭದಾ: ನೆನಪಿನ ಭಾವತರಂಗ ಮಂದಾಕಿನಿ ಪ್ರಕಟಿತ ಕೃತಿಗಳು. ಎಂ ಎ., ಬಿ ಎಡ್. ಪದವಿ ಪಡೆದಿರುವ ಅವರು ಸದ್ಯ ವಾರಪತ್ರಿಕೆ, ದಿನಪತ್ರಿಕೆ, ಮಾಸಪತ್ರಿಕೆಗಳಲ್ಲಿ ಲೇಖನ, ಕಥೆ , ಹಾಸ್ಯ ಲೇಖನ ಪ್ರಕಟಗೊಂಡಿವೆ. ಮರಾಠಿಯಿಂದ ಅನೇಕ ಕಥೆಗಳನ್ನು ಅನುವಾದ ಕೂಡ ಮಾಡಿದ್ದು, ಪ್ರಿಯಾಂಕಾ ಪತ್ರಿಕೆಯು ಪ್ರತಿ ವರ್ಷ ಏರ್ಪಡಿಸುವ ಬೆನಕ ...
READ MORE