ಅರ್ಥಶಾಸ್ತ್ರ

Author : ಕು.ಶಿ. ಹರಿದಾಸ ಭಟ್ಟ

Pages 323

₹ 6.00




Year of Publication: 1952
Published by: ಕಾವ್ಯಾಲಯ ಪ್ರಕಾಶನ
Address: ಮೈಸೂರು

Synopsys

ಸಾಹಿತಿ ಕು.ಶಿ. ಹರಿದಾಸ ಭಟ್ಟರು ಬರೆದ ಕೃತಿ-ಅರ್ಥಶಾಸ್ತ್ರ. ಜನಸಾಮಾನ್ಯರ ತಿಳಿವಳಿಕೆಗಾಗಿ ಬರೆದ ಅರ್ಥಶಾಸ್ತ್ರದ ಕೃತಿ ಇದು. ಅರ್ಥಶಾಸ್ತ್ರ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಆದರೆ, ಅದರ ಮೂಲ ಸ್ವರೂಪಗಳ ಹಿನ್ನೆಲೆಯಲ್ಲಿ ಅರ್ಥಶಾಸ್ತ್ರದ ಓಘವನ್ನು ತಿಳಿಯಬಹುದು. ಜನಸಾಮಾನ್ಯರಿಗೂ ಅರ್ಥಶಾಸ್ತ್ರವನ್ನು ಹೇಗೆ ತಿಳಿಸಬೇಕು ಎಂಬ ಸೂಕ್ಷ್ಮತೆಯಿಂದ ಈ ಕೃತಿ ರಚಿಸಿದೆ ಎಂದು ಲೇಖಕರು ಹೇಳಿದ್ದಾರೆ. ನಿರುದ್ಯೋಗ, ಪೂಣೋದ್ಯೋಗ, ಹಣದ ಬೇಡಿಕೆ, ಪೂರೈಕೆ, ಗೇಣಿ, ಕೂಲಿ, ಮೌಲ್ಯ ಮೀಮಾಂಸೆ, ಉತ್ಪಾದನೆ, ಬಂಡವಾಳ, ಅನುಭೋಗ, ಜನಸಂಖ್ಯೆ ಹೀಗೆ ಮೂಲ ಪರಿಕಲ್ಪನೆಗಳ ಹಿನ್ನೆಲೆಯಲ್ಲಿ ಅರ್ಥಶಾಸ್ತ್ರದ ಪೂರ್ಣರೂಪವನ್ನು ತಿಳಿಯಪಡಿಸಲಾಗಿದೆ.

About the Author

ಕು.ಶಿ. ಹರಿದಾಸ ಭಟ್ಟ
(17 March 1924 - 20 August 2000)

ಲೇಖಕ ಕು.ಶಿ. ಹರಿದಾಸ ಭಟ್ಟರು ಮೂಲತಃ ಉಡುಪಿಯವರು. ಇವರು ಜನಿಸಿದ್ದು 1924 ಮಾರ್ಚ್‌ 17ರಂದು. ಮದ್ರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಉಡುಪಿಯ ಎಂಜಿಎಂ (ಮಹಾತ್ಮಗಾಂಧಿ ಮೆಮೋರಿಯಲ್‌ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಉಪನ್ಯಾಸಕರಾಗಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದರು.  ಇಂಗ್ಲೆಂಡ್‌, ಅಮೆರಿಕಾ, ರಷ್ಯಾ ಮುಂತಾದ ರಾಷ್ಟ್ರಗಳಿಗೆ ಭೇಟಿ ನೀಡಿದ್ದ ಇವರು ಮೂರು ಪ್ರವಾಸ ಕಥನಗಳನ್ನು ಬರೆದಿದ್ದಾರೆ. ಘಂಟಮಾರಾ, ಅವ್ಯಕ್ತಮಾನವ, ನಡುಹಗಲಿನ ಕಗ್ಗತ್ತಲೆ, ಲೋಕಾಭಿರಾಮ(ಮೂರು ಸಂಪುಟಗಳು) ಇತಾಲಿಯ ನಾನು ಕಂಡಂತೆ. ಜಗದಗಲ, ಒಮ್ಮೆ ರಶಿಯಾ ಇನ್ನೊಮ್ಮೆ ಇತಾಲಿಯ. ರಂಗಾಯಣ ಇವರ ಪ್ರಮುಖ ಕೃತಿಗಳು. ಇವರಿಗೆ ...

READ MORE

Related Books