ಮಂಜು ಮುಸುಕಿದ ಹಾದಿ

Author : ವಿದ್ಯಾ ರೆಡ್ಡಿ

Pages 122

₹ 130.00




Year of Publication: 2021
Published by: ಬಿಂದು ಲಲಿತ ಕಲೆ ಹಾಗೂ ಜಾನಪದ ಅಧ್ಯಯನ ಕೇಂದ್ರ
Address: ಗೋಕಾಕ, ಜಿಲ್ಲೆ ಬೆಳಗಾವಿ
Phone: 9242252521

Synopsys

ಲೇಖಕಿ ವಿದ್ಯಾ ರೆಡ್ಡಿ ಅವರ ’ಮಂಜು ಮುಸುಕಿದ ಹಾಡು’ ಅಂಜೂರ ಪ್ರಶಸ್ತಿ ಪಡೆದ ಕಾದಂಬರಿಯಾಗಿದೆ. ಜೀವಪರ ನಿಲುವಿನ ದನಿ ಹಾಗೂ ಸಂಕೇತಗಳು ಎದ್ದು ಕಾಣುತ್ತವೆ. ಕಾದಂಬರಿಗೆ ಮುನ್ನುಡಿ ಬರೆದಿರುವ ಲೇಖಕ ಪ್ರೊ. ಸಂಗಮೇಶ ಗುಜಗೊಂಡ ಅವರು, ‘ಸುಂದರ ಬದುಕಿನ ಹಂಬಲ ಮಿಂಚಿನ ಗೋಚಲಾಗಿ ಕಾಣುತ್ತವೆ. ವಸ್ತುವು ತುಂಬಾ ಭರವಸೆಯನ್ನು ಮೂಡಿಸಿದ್ದು,ಸ್ತ್ರೀ ಶೋಷಣೆಯ ಸುತ್ತ ಕತೆಯನ್ನು ಹೆಣೆದುಕೊಂಡಿದೆ. ವಸ್ತುವನ್ನು ಸುಂದರವಾಗಿ ವಿನ್ಯಾಸಗೊಳಿಸಿ, ಓದುಗರಿಗೆ ಮುದ ನೀಡುವಂತೆ ಲೇಖಕಿಯ ಬರವಣಿಗೆಯಿದೆ. ಅವರು ಮೊದಲ ಹೆಜ್ಜೆಯಲ್ಲಿ ಯಶದ ಗುರುತನ್ನು ಮೂಡಿಸಿದ್ದಾರೆ. ಇಲ್ಲಿ ಕಾವ್ಯ, ಗದ್ಯ ಎರಡರಲ್ಲಿಯೂ ಸೃಜನ ಲವಲವಿಕೆಯನ್ನು ಕಾಣಬಹುದು. ಯಾವುದೇ ಬರವಣಿಗೆಗೆ ಚಿಂತನ ಮಂಥನಗಳು ಮೂಲವಾಗಿದ್ದು-ಬೇರು, ಭಾಷೆ -ಬರವಣಿಗೆಗೆ ಆಪ್ತವಾಗಿದೆ’ ಎಂದು ಪ್ರಶಂಸಿಸಿದ್ದಾರೆ. 

About the Author

ವಿದ್ಯಾ ರೆಡ್ಡಿ

ಲೇಖಕಿ ವಿದ್ಯಾ ರೆಡ್ಡಿ ಅವರು ಕವಿಯತ್ರಿ. ಉತ್ತಮ ವಾಗ್ಮಿ. ಭಾಷೆ ಹಾಗೂ ಸಂಸ್ಕೃತಿಯ ಉದ್ದೀಪನ,  ಮಹಿಳೆ ಮತ್ತು ಮಕ್ಕಳ ಹಕ್ಕುಗಳ ಕಾಳಜಿ: ಇವರ ವಿಶೇಷ ಒಲವುಗಳು. ಸಾಂಸ್ಕೃತಿಕ ಸಾಮಾಜಿಕ ಕಾರ್ಯಗಳಿಗಾಗಿ ಹಲವು ಗೌರವ ಪುರಸ್ಕಾರಗಳು ಇವರಿಗೆ ಸಂದಿವೆ. ಪ್ರಸ್ತುತ ಗೋಕಾಕದ ಸತೀಶ ಶುಗರ್‍ಸ್ ಅಕಾಡೆಮಿ ಪದವಿ ಕಾಲೇಜಿನಲ್ಲಿ ಸೇವಾನಿರತರು. ಕೃತಿಗಳು: ಮಂಜು ಮುಸುಕಿದ ಹಾದಿ (ಕಾದಂಬರಿ) ,ಅಂದಗಾತಿ(ಕವನಸಂಕಲನ) ...

READ MORE

Related Books