ಸ್ತ್ರೀವಾದ : ಅಂಚಿನಿಂದ ಕೇಂದ್ರದೆಡೆಗೆ

Author : ಎಚ್.ಎಸ್. ಶ್ರೀಮತಿ

Pages 332

₹ 290.00




Year of Publication: 2020
Published by: ಸಂಗಾತ ಪುಸ್ತಕ
Address: ರಾಜೂರ ಅಂಚೆ, ಗಜೇಂದ್ರಗಡ ತಾಲ್ಲೂಕು, ಗದಗ ಜಿಲ್ಲೆ- 582114
Phone: 9341757653

Synopsys

‘ಸ್ತ್ರೀವಾದ : ಅಂಚಿನಿಂದ ಕೇಂದ್ರದೆಡೆಗೆ’ ಅಮೆರಿಕಾದ ಸ್ತ್ರೀವಾದಿ ಬರಹಗಾರ್ತಿ ಬೆಲ್ ಹುಕ್ಸ್ ಅವರ ಫೆಮಿನಿಸ್ಟ್ ಥಿಯರಿ: ಫ್ರಂ ಮಾರ್ಜಿನ್ ಟು ಸೆಂಟರ್ ಎಂಬ ಬರಹದ ಕನ್ನಡಾನುವಾದ. ಹಿರಿಯ ಚಿಂತಕಿ, ಲೇಖಕಿ ಎಚ್.ಎಸ್. ಶ್ರೀಮತಿ ಅವರು ಈ ಮಹತ್ವದ ಬರಹವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಬೆಲ್ ಹುಕ್ಸ್ ಸ್ತ್ರೀವಾದವನ್ನು ನಿರ್ವಚಿಸುವ ಕ್ರಮ ಇಲ್ಲಿ ವಿನೂತವಾಗಿದೆ. ಪುರುಷರೊಂದಿಗೆ ಸಮಾನತೆ, ಸಮಾನ ಹಕ್ಕುಗಳು ಎಂಬುದನ್ನಷ್ಟೇ ಗುರಿಯಾಗಿಸಿಕೊಂಡು ಹೋರಾಡುತೇತಾ ಬಂದ ಸಾಂಪ್ರದಾಯಿಕ ಸ್ತ್ರೀವಾದದ ಬಗೆಗೆ ತಕರಾರುಗಳನ್ನು ಎತ್ತುತ್ತಲೇ ಪರ್ಯಾಯಗಳನ್ನು ಸೂಚಿಸುತ್ತಾರೆ. ಸ್ತ್ರೀವಾದದ ಬಗೆಗಿದ್ದ ನಮ್ಮ ಕಲ್ಪನೆಯನ್ನು, ಆಲೋಚನೆಗಳನ್ನು ಈ ಕೃತಿ ಬದಲು ಮಾಡುತ್ತಲೇ ಪುನರಾವಲೋಕನಕ್ಕೆ ಈ ಕೃತಿ ಸಜ್ಜುಗೊಳಿಸುತ್ತದೆ.

About the Author

ಎಚ್.ಎಸ್. ಶ್ರೀಮತಿ
(25 February 1950)

ಸ್ತ್ರೀವಾದಿ ಲೇಖಕಿ, ಚಿಂತಕಿ ಎಚ್.ಎಸ್.ಶ್ರೀಮತಿ ಅವರು ಜನಿಸಿದ್ದು 1950 ಫೆಬ್ರುವರಿ 25ರಂದು ಬೆಂಗಳೂರಿನ ಹೊಸಕೋಟೆಯಲ್ಲಿ. ತಂದೆ ಎಚ್.ಕೆ.ಸೂರ್ಯನಾರಾಯಣ ಶಾಸ್ತ್ರಿ, ತಾಯಿ ಲಲಿತ. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಇವರು ಕನ್ನಡ ಸಾಹಿತ್ಯಕ್ಕೆ ಇವರು ನೀಡಿರುವ ಕೊಡುಗೆ ಅಪಾರ.  ಇವರು ಅನುವಾದಿಸಿರುವ ಪ್ರಮುಖ ಕೃತಿಗಳೆಂದರೆ ಸೆಕೆಂಡ್ ಸೆಕ್ಸ್‌, ಆಧುನಿಕ ಭಾರತದಲ್ಲಿ ಮಹಿಳೆ, ಬೇಟೆ, ತಾಯಿ, ರುಡಾಲಿ, ದೋಪ್ದಿ ಮತ್ತು ಇತರ ಕಥೆಗಳು, ವೇದಗಳಲ್ಲಿ ಏನಿದೆ, ಪ್ರಾಚೀನ ಭಾರತದ ಚರಿತ್ರೆ ಮುಂತಾದವು. ಮಹಾಶ್ವೇತಾದೇವಿಯವರ ಕುರಿತು ಜೀವನ ಚರಿತ್ರೆಯನ್ನು ಬರೆದಿದ್ದಾರೆ. ಇವರು ಸಂಪಾದನೆ ಮಾಡಿರುವ ಕೃತಿಗಳೆಂದರೆ ಕನ್ನಡ ...

READ MORE

Reviews

ನ್ಯಾಯ ಪಥ-  (22- ಸೆಪ್ಟೆಂಬರ್‌-2021)

ಬೆಲ್‌ಹುಕ್ಸ್- ಸ್ತ್ರೀವಾದ: ಅಂಚಿನಿಂದ ಕೇಂದ್ರದೆಡೆಗೆ ಒಪ್ಪಿತ ಮಾದರಿಯನ್ನು ಪ್ರಶ್ನಿಸಿ ಹೊಸ ಸ್ತ್ರೀವಾದಕ್ಕೆ ಅಣಿಗೊಳಿಸುವ ಚಿಂತನೆ

ಬೆಲ್ ಹುಕ್ಸ್ ಅಮೆರಿಕದ ಲೇಖಕಿ, ಪ್ರಾಧ್ಯಾಪಕಿ, ಸ್ತ್ರೀವಾದಿ ಹಾಗೂ ಸಾಮಾಜಿಕ ಕಾರ್ಯಕರ್ತೆ, ಇವರ ಬರೆವಣಿಗೆಯು ಜನಾಂಗ, ಬಂಡವಾಳಶಾಹಿ, ಲಿಂಗ ವಿಭಜನೆಯನ್ನು ಒಳಗೊಂಡ ಚಿಂತನೆಯಿಂದ ಕೂಡಿರುವಂತದ್ದು, ಅಮೆರಿಕದಲ್ಲಿ ಶೋಷಿತ ಕಪ್ಪು ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ಮಾಡಿದವರು. ಇವರ 'ಫೆಮಿನಿಸ್ಟ್ ಥಿಯರಿ: ಪಂ ಮಾರ್ಜಿನ್ ಟು ಸೆಂಟರ್' ಎಂಬ ಪುಸ್ತಕವನ್ನು ಹೆಚ್‌.ಎಸ್. ಶ್ರೀಮತಿಯವರು 'ವಾದ: ಅಂಚಿನಿಂದ ಕೇಂದ್ರದೆಡೆಗೆ' ಎಂದು ಕನ್ನಡಕ್ಕೆ ತಂದಿದ್ದಾರೆ. “ಇದನ್ನು ಕೇವಲ ಸಾಂಪ್ರದಾಯಿಕವಾಗಿ ಅನುವಾದಿಸದೆ ಅಲ್ಲಲ್ಲಿ ವಿಸ್ತರಣೆ, ಸಂಗ್ರಹ ಮಾಡಿರುವುದಾಗಿ” ಹೇಳಿಕೊಂಡಿದ್ದಾರೆ. ಇದಕ್ಕೆ 'ಕನ್ನಡದ ಓದು' ಎಂದು ಕರೆದಿದ್ದಾರೆ. ಹೀಗಾಗಿ ಇದು ವಿಸ್ಕೃತವಾಗಿ ಕನ್ನಡ ವೈಚಾರಿಕ ಓದಿಗೆ ತೆರೆದುಕೊಳ್ಳುತ್ತದೆ.

ಸಮಾಜದಲ್ಲಿ ಚಾಲ್ತಿಯಲ್ಲಿರುವ ಲೈಂಗಿಕ ರಾಜಕಾರಣದ ಪ್ರಮುಖ ವಿಷಯಗಳ ಪರಿಶೀಲನೆ, ಲೈಂಗಿಕತೆಯ ಗಡಿಗಳ ಅನ್ವೇಷಣೆ, ಸ್ತ್ರೀವಾದಿ ಸಿದ್ಧಾಂತ ವಿಸ್ತರಿಸಿಕೊಳ್ಳಬೇಕಾದ ಅಗತ್ಯತೆಯನ್ನು ಹಲವು ಒಳನೋಟಗಳ ಮೂಲಕ ಈ ಕೃತಿ ಚರ್ಚಿಸುತ್ತದೆ. ಸಮಕಾಲೀನ ಸೀವಾದಿ ಚಳವಳಿಯು ದಮನಿತ ಕಪ್ಪು ಮಹಿಳೆಯರನ್ನು ಅಂಚಿನಿಂದ ಮುಖ್ಯವಾಹಿನಿಗೆ ತರಬೇಕಾಗಿದೆ. ಅದರ ಮೂಲಕ ಹೊಸ ಮನ್ವಂತರಕ್ಕೆ ನಾಂದಿ ಹಾಡುವುದು ಮುಖ್ಯ ಉದ್ದೇಶವಾಗಬೇಕು. ಸಮಕಾಲೀನ ಸ್ತ್ರೀವಾದವು ಬಿಳಿಯರಲ್ಲದ ಅಂದರೆ ಕಪ್ಪುವರ್ಣೀಯರ ಹಾಗೂ ಮಧ್ಯಮವರ್ಗದ ಅನುಭವವನ್ನು ಪರಿಗಣಿಸದೇ ರೂಪಗೊಂಡಿದೆ. ಭೂಮಿಯ ಜೊತೆ ಅನನ್ಯ `ಸಂಬಂಧವನ್ನು ಹೊಂದಿರುವ ಕಪ್ಪು ಮಹಿಳೆಯರು ದಿನನಿತ್ಯದ ಬದುಕಿನಲ್ಲಿ ತಾರತಮ್ಯ, ಶೋಷಣೆಗಳನ್ನು ಅನುಭವಿಸುತ್ತಿದ್ದಾರೆ. ಆದರೆ ಅದಕ್ಕೆ ಪ್ರತಿಯಾಗಿ ಅವರು ಯಾರಿಗೂ ಈ ಬಗೆಯ ಭೇದಭಾವಗಳನ್ನು ತೋರಿಸುವುದಿಲ್ಲ. ನೀವಾದಿ ಚಳವಳಿ ಈ ದಮನಿತ ಸಮುದಾಯದ ಪರವಾಗಿ ಕೆಲಸ ಮಾಡಬೇಕಿತ್ತು. ಅದು ಕೇವಲ ಶ್ರೀಮಂತ ಬಿಳಿಯ ಹೆಂಗಸರ ಶಾಲಾಗಿದೆ, ಹಾಗಾಗಿ ಬೆಲ್ ಹಕ್ ಅವರು ಸ್ತ್ರೀವಾದಿ ಚಳವಳಿಯನ್ನು ಸತ್ವಯುತವಾಗಿ ಕಟ್ಟುವ ಆಕಾಂಕ್ಷೆಯಿಂದ, ವಿಮೋಚನೆಯ ಆದರ್ಶದಲ್ಲಿ " ಅಂತಹ ಚಳವಳಿಗೆ ಒತ್ತು ಕೊಡುವುದು ಅತ್ಯಂತ ಮೌಲಿಕವಾದ ಕೆಲಸವೆಂದು ತೀರ್ಮಾನಿಸುತ್ತಾರೆ.

ಸ್ತ್ರೀವಾದದ ಬಗ್ಗೆ ಈಗಾಗಲೇ ಜಾರಿಯಲ್ಲಿರುವ ಹಾಗೂ ಸಾರ್ವತ್ರಿಕವಾಗಿ ಸ್ವೀಕಾರಾರ್ಹವಾಗಿರುವ ವ್ಯಾಖ್ಯಾನಗಳು ಬೇರೆಬೇರೆಯಾಗಿರುವುದರಿಂದ ಅವುಗಳನ್ನು ನಿರ್ಣಯಿಸುವುದು ಕಷ್ಟಕರವಾಗಿದೆ. ಇದರಿಂದ ಸ್ತ್ರೀವಾದವನ್ನು ಪೂರ್ಣ ಪ್ರಮಾಣದಲ್ಲಿ ಸಾಧಿಸಲು ಸೀವಾದಿಗಳು ಇನ್ನಿಲ್ಲದ ಪರಿಪಾಟಲನ್ನು ಪಡುತ್ತಿದ್ದಾರೆ, ವಾಸ್ತವದಲ್ಲಿ ಎಲ್ಲಾ ಸ್ತ್ರೀವಾದಿಗಳ ಗುರಿ ಲೈಂಗಿಕ ದಬ್ಬಾಳಿಕೆಯ ನಿರ್ಮೂಲನೆಯಾಗಬೇಕು ಎಂದಾಗಬೇಕು, ಇದು ಎಲ್ಲಾ ವಯಸ್ಸಿನ ಮರುಷರು ಹಾಗೂ ಮಹಿಳೆಯ- ರಿಗೆ ಪ್ರಯೋಜನವನ್ನು ನೀಡುತ್ತದೆ, ಬೆಲ್ ಮಾಕ್ಸ್‌ರವರ ಈ ಬಗೆಯ ಚಿಂಶನೆಗಳು ಜಗತ್ತಿನ ಎಲ್ಲಾ ಸಂಸ್ಕೃತಿಗಳಿಗೂ ಅನ್ವಯಿಸುವುದರಿಂದ ಇದರ ಬಗ್ಗೆ ಗಂಭೀರ ಚಿಂತನೆಯಾಗಬೇಕಿದೆ.

ಸಾಂಸ್ಕೃತಿಕ ದಬ್ಬಾಳಿಕೆಯು ಕಟ್ಟಿರುವ ಹುಸಿ ಪರಿಕಲ್ಪನೆಯಾದ "ನಾವೆಲ್ಲರೂ ಸಂತ್ರಸ್ತರೇ, ಅದಕ್ಕೆ ಮರುಷನೇ ಕಾರಣ” ಎಂಬ ಸುಳ್ಳು ಭ್ರಮೆಗಳಿಂದ ಸೀವಾದಿಗಳು ಹೊರಬರಬೇಕಾಗಿದೆ. ಲೈಂಗಿಕತಾವಾದಿ ದಮನಗಳನ್ನು ಕೊನೆಗಾಣಿಸುವ ಸ್ತ್ರೀವಾದ ಮುಂಚೂಣಿಗೆ ಬರಬೇಕಾಗಿದೆ. ಈ ನಿನಲ್ಲಿ ಮಹಿಳೆಯರಿಗೆ ರಾಜಕೀಯ ಅಧಿಕಾರ ಸಿಗಬೇಕು ಎಂಬ ಅಪೇಕ್ಷೆ, ಸಮಾಜದಲ್ಲಿ ಮಹಿಳೆಯರ ಬಗೆಗಿನ ಪೂರ್ವಾಗ್ರಹಗಳನ್ನು ದುರ್ಬಲಗೊಳಿಸುತ್ತದೆ. ಅದರಲ್ಲೂ ಒಬ್ಬ ಶತ್ರುಗಳು, ಮಿತ್ರರು, ಅವರನ್ನು ಸಾರ್ವತ್ರಿಕವಾಗಿ ದೂರ ಇಡಬೇಕು ಎಂಬ ಆಲೋಚನೆಗಳನ್ನು ಪುನರ್ ಪರಿಶೀಲಿಸಬೇಕಾದ ಅಗತ್ಯತೆಯನ್ನು ಸಾರುತ್ತದೆ. ಏಕೆಂದರೆ ಮಹಿಳೆಯರಂತೆ ಮರುಷರು ಲಿಂಗಭೇದಭಾವದಿಂದ ಅನೇಕ ರೀತಿಯಲ್ಲಿ ಬಲಿಯಾಗುತ್ತಾರೆ ಎಂಬ ಸತ್ಯವನ್ನು ಬೆಲ್ ಹುಕ್ಸ್ ಅವರು ತಿಳಿಸಿಕೊಡುತ್ತಾರೆ. ಸ್ತ್ರೀವಾದಿ ಚಳುವಳಿಗಳು ಮರುಷರು ಮತ್ತು ಮಹಿಳೆಯರ ಜೀವನವನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿವೆ. ಆದರೆ ಈ ಚಳವಳಿಗಳು ರೂಪುಗೊಂಡಿರುವುದು ಪುರುಷರೊಂದಿಗಿನ ಸಮಾನತೆ ಸಾಧಿಸುವುದಕ್ಕೆ ಮಾತ್ರ ಎಂಬ ಮಿತಿಯನ್ನು ಮೀರಬೇಕಿದೆ.

ಸಮಕಾಲೀನ ಜೀವನದಲ್ಲಿ ಸ್ತ್ರೀವಾದಿ ಸಿದ್ಧಾಂತದ ಪರಿಶೋಧನೆ, ಬೆಳವಣಿಗೆ, ಅದನ್ನು ಅನುಷ್ಠಾನಕ್ಕೆ ತರುವ ವಿಧಾನಗಳನ್ನು ಈ ಕೃತಿಯು ಅನ್ವೇಷಿಸುತ್ತದೆ. ಅಧಿಕಾರದ ಮೌಲ್ಯವನ್ನು ಮರು ವ್ಯಾಖ್ಯಾನಿಸುವುದು, ಕಪ್ಪು ಮಹಿಳೆಯ- ರಿಗೆ ಸರಿಯಾದ ಶಿಕ್ಷಣವನ್ನು ನೀಡುವುದು, ಲಿಂಗಾಧಾರಿತ ಹಿಂಸೆಯನ್ನು ಕೊನೆಗೊಳಿಸುವುದು, ಸ್ತ್ರೀ-ಪುರುಷರಿಬ್ಬರೂ ಸಮಾನವಾಗಿ ಮಕ್ಕಳನ್ನು ಸಾಕುವ ಜವಾಬ್ದಾರಿಯನ್ನು ನಿರ್ವಹಿಸುವುದರ ಮೂಲಕ ಮಕ್ಕಳ ಪೋಷಣೆಗೆ ಸಂಬಂಧಿಸಿದಂತೆ ಹೊಸ ವಿಧಾನಗಳನ್ನು ವಿಕಸಿಸುವುದು, ಸಮಾಜದಲ್ಲಿ ಈಗಾಗಲೇ ಹೆಚ್ಚು ಮಾನ್ಯತೆಯನ್ನು ಪಡೆದುಕೊಂಡಿರುವ ಒತ್ತಾಯದ ಭಿನ್ನಲಿಂಗ್ ಲೈಂಗಿಕಶಾವಾದವನ್ನು ಕಡ್ಡಾಯಗೊಳಿಸದೆ, ಲೈಂಗಿಕತಾ ಆಯ್ಕೆಗಳು ಸಂಪೂರ್ಣವಾಗಿ ವ್ಯಕ್ತಿ ಸಂಬಂಧಿತ, ಅಂದರೆ ದ್ವಿಲಿಂಗಿ, ಸಲಿಂಗಿ, ಭಿನ್ನಲಿಂಗಿ, ಮುಂತಾಗಿ ಯಾವುದೇ ಬಗೆಯ ಲೈಂಗಿಕ ಸಂಬಂಧದ ಸ್ವಾತಂತ್ರ್ಯವನ್ನು ಕೊಟ್ಟು ಲೈಂಗಿಕ ಗಡಿಗಳನ್ನು ದಾಟುವುದು- ಈ ಬಗೆಯ ಹೊಸ ಆಲೋಚನೆಗಳ ಮೂಲಕ ಬೆಲೆ ಹುಕ್ಸ್ ಅವರು ಸ್ತ್ರೀವಾದಿ ಸಿದ್ಧಾಂತವನ್ನು ವಿಸ್ತರಿಸುವ ಬಗೆಯನ್ನು ತಿಳಿಸಿಕೊಡುತ್ತಾರೆ.

ಸಮಾಜದಲ್ಲಿ ರೂಪಾಂತರವು ಒಂದು ಸಹಜ ಪ್ರಕ್ರಿಯೆ ಎಂದು ಸೂಚಿಸಿ, ಇಲ್ಲಿ ಚರ್ಚಿಸಿರುವ ಎಲ್ಲ ಮೌಲ್ಯಗಳನ್ನು ಒಟ್ಟುಗೂಡಿಸುವ ಪ್ರಯತ್ನವನ್ನು ಈ ಕೃತಿಯ ಕೊನೆಯಲ್ಲಿ ಮಾಡಲಾಗಿದೆ. ವಾಸ್ತವದಲ್ಲಿ ಎಲ್ಲ ಪುರುಷರು, ಮಹಿಳೆಯರು, ಸಂಪ್ರದಾಯವಾದಿಗಳು, ಉದಾರವಾದಿಗಳು, ಶೈಕ್ಷಣಿಕ ಚಿಂತಕರು ಒಂದಲ್ಲಾ ಒಂದು ರೀತಿಯಲ್ಲಿ ಬಂಡವಾಳಶಾಹಿ, ಸಾಮ್ರಾಜ್ಯಶಾಹಿ, ಸೆಕ್ಸಿಸ್ಟ್ ಸಮಾಜದ ಶೋಷಣೆಯ ನಿಯಮಗಳ ಪ್ರಕಾರ ಬದುಕಿದ್ದಾರೆ. ಎಲ್ಲರೂ ಮೊದಲು ಇದನ್ನು ಒಪ್ಪಿಕೊಂಡು ಈ ಪರಿಸ್ಥಿತಿಗೆ ಕಾರಣವಾದ ನಂಬಿಕೆ, ವ್ಯವಸ್ಥೆಗಳನ್ನು ಬದಲಿಸಲು ಕೆಲಸ ಮಾಡಬೇಕಿದೆ. ಆಗ ಮಾತ್ರ ಪ್ರಯೋಜನಕಾರಿಯಾದ ಸ್ತ್ರೀವಾದಿ  ಚಳುವಳಿ ರೂಪುಗೊಳ್ಳುತ್ತದೆ ಹಾಗೂ ಮಹಿಳೆಯ- ರಿಗೆ ಅಧಿಕಾರ ಸಿಗಬಹುದಾದ ಎಲ್ಲಾ ಸಾಧ್ಯತೆಗಳು ತೆರೆದುಕೊಳ್ಳುವಂತೆ ಮಾಡುತ್ತದೆ' ಎಂದು ಬೆಲ್ ಹುಕ್ಸ್ ಅವರು ಬಲವಾಗಿ ವಾದಿಸುತ್ತಾರೆ.

ಸ್ತ್ರೀವಾದಿ ಚಳವಳಿಯು ಮಹಿಳೆಯರ ಬಡತನದ ಸಮಸ್ಯೆಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿದ್ದರೆ ವಿಭಿನ್ನ ಸಾಂಸ್ಕೃತಿಕ ನೆಲೆಗಟ್ಟಿನ ಕುಲ ಸಮುದಾಯಗಳನ್ನು ಒಂದು ಮಾಡಬಹುದಿತ್ತು. ಸ್ತ್ರೀವಾದಿಗಳಿಂದ ಆಲಕ್ಷಿಸಲ್ಪಟ್ಟ ಬಡ ಕಪ್ಪು ಮಹಿಳೆಯರು ಶೋಷಣೆ, ದಬ್ಬಾಳಿಕೆಗೆ ಒಳಗಾಗಿದ್ದರೂ ಕೂಡ ಸ್ಥಾಪಿತ ಪ್ರಬಲ ಸ್ತ್ರೀವಾದಿ ನಂಬಿಕೆ, ವ್ಯಾಖ್ಯಾನಗಳನ್ನು ತಿರಸ್ಕರಿಸಬಹುದೆಂಬ ಸತ್ಯವನ್ನು ತಿಳಿದುಕೊಳ್ಳಬೇಕು. ಇದು ಅವರ ಮೂಲಭೂತ ವೈಯಕ್ತಿಕ ಶಕ್ತಿ ಎಂದು ಅರಿತುಕೊಳ್ಳಬೇಕಿದೆ. ಆಗ ಸಮಾಜದಲ್ಲಿ  ಮುಂದಿನ ತಲೆಮಾರಿಗಾದರೂ ಶೋಷಣೆ, ದಬ್ಬಾಳಿಕೆ ಕಡಿಮೆಯಾಗುವ ಸಾಧ್ಯತೆಗಳಿವೆ. ಅಂದರೆ ದಮನಕ್ಕೆ ಒಳಗಾಗುತ್ತಿದ್ದೇವೆ ಎಂಬ ಪ್ರಶ್ನೆ ಅವರಲ್ಲಿ ಬಂದರೆ, ಸಹಜವಾಗಿ ವಿಮೋಚನಾ ಮಾರ್ಗವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಲೈಂಗಿಕವಾದಿ ಶೋಷಣೆ ಮತ್ತು ದಮನಗಳನ್ನು ಎದುರಿಸಿ ನಿಲ್ಲಬಹುದು ಎಂಬ ನಂಬಿಕೆ ಮಹಿಳೆಯರಲ್ಲಿ ಮೂಡುವಂತೆ ಮಾಡುವುದು. ಸ್ತ್ರೀವಾದದ ಮುಖ್ಯ ಗುರಿಯಾಗಬೇಕು. ಇಂತಹ ಅನೇಕ ಹೊಸ ವಿಚಾರಗಳ ಬಗ್ಗೆ ಬೆಲೆ ಹುಕ್ಸ್ ಅವರು ಈ ಕೃತಿಯಲ್ಲಿ ತಿಳಿಸಿಕೊಡುತ್ತಾರೆ.

ಸ್ತ್ರೀಯು ಪುರುಷನಿಗೆ ಹೆದರಿ ಬದುಕುವ ಮನಸ್ಥಿತಿಯಿಂದ ಹೊರಬರಬೇಕಿದೆ. ಶೋಷಣೆ, ದಬ್ಬಾಳಿಕೆ, ಅತ್ಯಾಚಾರಗಳಂತಹ ಪ್ರಕರಣಗಳು ಕಡಿಮೆಯಾಗಬೇಕಾದರೆ ವೇಶ್ಯಯರಿಗಿರುವ ಧೈರ್ಯ ಸಾಮಾನ್ಯ ಮಹಿಳೆಗೆ ಬರಬೇಕಿದೆ. ಸ್ತ್ರೀ ಸಮಾನತಾವಾದ ಹೋರಾಟದಲ್ಲಿ ಸ್ತ್ರೀ-ಪುರುಷ ರಿಬ್ಬರೂ ಸಕ್ರಿಯವಾಗಿ ಭಾಗವಹಿಸಬೇಕು. ಈ ನಿಟ್ಟಿನಲ್ಲಿ ಪರಂಪರಾಗತವಾಗಿ ಸಮಾಜವನ್ನು ನೋಡಿಕೊಂಡು ಬಂದ ಬಗೆಯನ್ನು ಬದಲಾಯಿಸಬೇಕಿದೆ. 'ಪುರುಷ ಪ್ರಧಾನ ಸಮಾಜ' ಭ್ರಮೆಯಿಂದ ಭವಿಷ್ಯದ ಜಗತ್ತು ಚಳುವಳಿ ರೂಪುಗೊಳ್ಳುತ್ತದೆ ಹಾಗೂ ಮಹಿಳೆಯ- ರಿಗೆ ಅಧಿಕಾರ ಸಿಗಬಹುದಾದ ಎಲ್ಲಾ ಸಾಧ್ಯತೆಗಳು ತೆರೆದುಕೊಳ್ಳುವಂತೆ ಮಾಡುತ್ತದೆ' ಎಂದು ಬೆಲ್ ಹುಕ್ಸ್ ಅವರು ಬಲವಾಗಿ ವಾದಿಸುತ್ತಾರೆ. ಹೆಣ್ಣುನೋಟದಿಂದ ನೋಡಬೇಕಾದ ಅವಶ್ಯಕತೆ ಇದೆ, ಈ ಕುರಿತಂತೆ ಬೆಲ್‌ಹುಕ್ಸ್ ಅವರು ಈ ಕೃತಿಯಲ್ಲಿ ಚರ್ಚಿಸಿರುವುದು ಸಮಂಜಸವಾಗಿದೆ. 

ಒಟ್ಟಿನಲ್ಲಿ ಈ ಕೃತಿಯು ಕಪ್ಪು ಮತ್ತು ಬಿಳಿಸ್ತೀವಾದಿಗಳ ನಡುವಿನ ಸಂಘರ್ಷವನ್ನು ಬಹಳ ಸೂಕ್ಷ್ಮತೆಯಿಂದ ಹೆಣೆದಿದೆ. ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಪುರುಷ ಹಾಗೂ ಮಹಿಳೆ ಸಮಾನವಾಗಿ ಹಂಚಿಕೊಳ್ಳಬೇಕೆಂದು ಕರೆ ನೀಡಿರುವುದು ಸ್ವೀಕಾರಾರ್ಹ ಸಲಹೆಯಾಗಿದೆ. ಆದರೂ ತಮ್ಮ ಮನೆಯ ದುಡಿಮೆಯಿಂದ ಮುಕ್ತಗೊಂಡ ಬಹುಪಾಲು ಮಹಿಳೆಯರು ವೃತ್ತಿಯಲ್ಲಿ ಬಿಳಿ ಪುರುಷನೊಂದಿಗೆ ಸಮಾನವಾಗಿ ಪ್ರವೇಶವನ್ನು ಪಡೆದುಕೊಂಡರೆ ಮಕ್ಕಳ ಪೋಷಣೆ ಹಾಗೂ ಮನೆಯ ನಿರ್ವಹಣೆಯ ಜವಾಬ್ದಾರಿ ನಿರ್ವಹಿಸುವ ಬಗ್ಗೆ ಚರ್ಚಿಸದಿರುವುದು, ಮನೆಗಳಿಲ್ಲದ ಮಹಿಳೆಯರ ದಿನನಿತ್ಯದ ಅಗತ್ಯತೆಯ ಬಗ್ಗೆ ಮೂಡಿರದ ಚರ್ಚೆ- ಹೀಗೆ ಸರಳ ಸಂಗತಿಗಳಾದರೂ ಸಹಜವಾಗಿ ಒಂದಷ್ಟು ಪ್ರಶ್ನೆಗಳು ಹಾಗೆಯೇ ಉಳಿದುಬಿಡುತ್ತದೆ.

ಪಾಶ್ಚಿಮಾತ್ಯ ಸಮಾಜವು ಶೋಷಣೆ, ದಬ್ಬಾಳಿಕೆ, ಅತ್ಯಾಚಾರಗಳನ್ನು ವರ್ಗ, ವರ್ಣದ ಹಿನ್ನೆಲೆಯಲ್ಲಿ ಗಮನಿಸುತ್ತದೆ, ಜಾತಿವ್ಯವಸ್ಥೆಯು ತಾಂಡವವಾಡುತ್ತಿರುವ ನಮ್ಮ ಭಾರತದ ಸಂಸ್ಕೃತಿಯಲ್ಲಿ ಎಲ್ಲವನ್ನು ಜಾತಿ ಹಿನ್ನೆಲೆಯಲ್ಲಿಯೇ ನೋಡಲಾಗುತ್ತದೆ. ಒಪ್ಪಿತ ಚೌಕಟ್ಟನ್ನು ಮೀರಿ ನಮ್ಮ ಸಮಾಜವನ್ನು ಬೇರೆಬೇರೆ ದೃಷ್ಟಿಕೋನಗಳಿಂದ ನೋಡಬೇಕಾದ ಅಗತ್ಯತೆ ಇದೆ, ನಮ್ಮ ಸಂಸ್ಕೃತಿಯಲ್ಲಿ ಮಹಿಳೆಯರ ಶೋಷಣೆ ನಿಲ್ಲಬೇಕಾದರೆ ಪಶ್ಚಿಮದ ವಿಮೋಚನೆಯ ಪರಿಕಲ್ಪನೆ ಅಗತ್ಯವೂ ಇದೆ, ಕನ್ನಡದ ಪ್ರಸಿದ್ಧ ಕವಿ ಸಿದ್ದಯ್ಯ ಪುರಾಣಿಕರ ಕವನದಲ್ಲಿ ಕಪ್ಪು ಮಹಿಳೆಯು “ನಾ ಕರಿಯಳೆಂದು

ನೀ ಜರಿಯಬೇಡ, ಬಿಳಿ ಗೆಳತಿ ಗರ್ವದಿಂದ. ಕಪ್ಪಿಗಿಂತ ಬಿಳಿ ಬಣ್ಣ ಹೆಚ್ಚು ಹೇಳ್ತಾವ ಹಿರಿಮೆಯಿಂದ" ಎಂದು ತನ್ನ ಅಸ್ತಿತ್ವದ ಬಗ್ಗೆ ತಾತ್ಸಾರ ಮನೋಭಾವನೆ ಹೊಂದಿರುವ ಬಿಳಿ ಮಹಿಳೆಗೆ ನೇರವಾಗಿ ವರ್ಣ ತಾರತಮ್ಯದ ಬಗ್ಗೆ ಕೇಳುವುದರ ಮೂಲಕ ಸಮಾಜದ ಧೋರಣೆಯನ್ನು ಪ್ರಶ್ನಿಸುತ್ತಾಳೆ. ಆದರೆ ಇದು ಸಾರ್ವತ್ರಿಕವಾದ ಗಟ್ಟಿದ್ದ ಯಾಗಬೇಕು. ನಮ್ಮ ಸ್ಥಳೀಯ ಶ್ರೀವಾದಿ ಚಿಂತನೆಯನ್ನು ವರ್ಣ, ವರ್ಗದ ಹಿನ್ನೆಲೆಯಲ್ಲಿಯೂ ಗಮನಿಸಬೇಕಾದ ಅಗತ್ಯತೆ ಇದೆ. ಹೆಚ್. ಎಸ್.ಶ್ರೀಮತಿಯವರ ಈ ಅನುವಾದಿತ ಕೃತಿ ಕನ್ನಡದಲ್ಲಿ ಸ್ತ್ರೀವಾದವನ್ನು ಬೇರೆ ಆಯಾಮದಲ್ಲಿ ನೋಡುವ ಪರಿಯನ್ನು ಹೇಳಿಕೊಡುತ್ತದೆ ಹಾಗೂ ಮಹಿಳೆ ಶೋಷಣೆ, ದಬ್ಬಾಳಿಕೆಯಿಂದ ಹೊರಬರುವ ವಿಮೋಚನಾ ಮಾರ್ಗವನ್ನು ತಿಳಿಸಿಕೊಡುತ್ತದೆ. ಹಾಗಾಗಿ ನಮ್ಮ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಈ ಬಗೆಯ ಸ್ತ್ರೀವಾದಿ ಚಿಂತನೆಯ ಅವಶ್ಯಕತೆ ಇದೆ.

-ರಿಯಾಜ್‌ ಪಾಷ

Related Books