ನಾರಿ ಅಂಕಣ

Author : ಸತ್ಯವತಿ ರಾಮನಾಥ

Pages 88

₹ 90.00




Published by: ಸಮೃದ್ಧ ಸಾಹಿತ್ಯ
Address: ಸಮೃದ್ಧ ಸಾಹಿತ್ಯ, ಬೆಂಗಳೂರು

Synopsys

`ನಾರಿ ಅಂಕಣ’ ಕೃತಿಯು ಸತ್ಯವತಿ ರಾಮನಾಥ್ ಅವರ ಲೇಖನಸಂಕಲನವಾಗಿದೆ. ಈ ಕೃತಿಯು ಸನಾತನ ಧರ್ಮದಲ್ಲಿ ನಾರಿಯನ್ನೂ ಸೇರಿಸಿಕೊಂಡು ಮನುಷ್ಯಮಾತ್ರನ ಗುರಿಯು ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಪುರುಷಾರ್ಥಗಳನ್ನು ಸಾಧಿಸುವುದೇ ಆಗಿದೆ. ವರ್ಣಾಶ್ರಮ ವ್ಯವಸ್ಥೆಯೂ, ಪ್ರವೃತ್ತಿ, ನಿವೃತ್ತಿ ಮಾರ್ಗಗಳ ನಿರೂಪಣೆಯೂ ಈ ಗುರಿಯನ್ನು ಸಾಧಿಸಲೆಂದೇ ಶಾಸ್ತ್ರಗಳಲ್ಲಿ ಮಾಡಲ್ಪಟ್ಟಿವೆ. ಮನುಷ್ಯನು ತನ್ನ ಜೀವನದ ಗುರಿಯನ್ನೂ, ಜೀವನ ಮಾಡುವ ಕ್ರಮವನ್ನೂ, ಮಾಡುವ ಕರ್ಮಗಳನ್ನೂ, ನೀತಿ ನಿಯಮಗಳನ್ನೂ ತಾನೇ ಸ್ವತಂತ್ರವಾಗಿ ಏರ್ಪಡಿಸಿಕೊಳ್ಳಬಹುದಾದರೂ, ಆ ಏರ್ಪಾಡು ಗಳು ಅವನಿಗಿರುವ ಮಿತಿಯಿಂದ ಅವನನ್ನು ಸ್ವಚ್ಛಂದಪ್ರವೃತ್ತಿಗೆ ನೂಕುತ್ತವೆ. ಪುರುಷಾರ್ಥಗಳ ರಹಸ್ಯವನ್ನೂ, ತಾನು ಮಾಡುವ ಪಾಪ ಪುಣ್ಯ ಕಾರ್ಯಗಳ ಫಲವನ್ನೂ ಶಾಸ್ತ್ರಾಧಾರವಿಲ್ಲದೇ ತಾನೇ ತಿಳಿದುಕೊಳ್ಳಲಾರ, ನಿರ್ಧರಿಸಿಕೊಳ್ಳಲಾರ. ಇದಕ್ಕೆ ಕಾರಣ ಕರ್ಮಗಳಿಗೆ ಫಲವು ಪ್ರತ್ಯಕ್ಷ ಅನುಮಾನ ಪ್ರಮಾಣಗಳಿಗೆ ಅಳವಡದ ಅತೀಂದ್ರಿಯ ವಿಷಯವಾಗಿದೆ. ಈ ಲೇಖನಗಳಲ್ಲಿ ತಿಳಿಸಿರುವ ನಾರಿಯ ಪವಿತ್ರ ಮಾತೃತಸ್ಥಾನವೂ, ಪಾತಿವ್ರತ್ಯವೂ, ವಿಧವೆಯ ಜೀವನ ಕ್ರಮವೂ, ಬಹುತೇಕ ಎಲ್ಲಾ ವಿಚಾರಗಳೂ ಸನಾತನಧರ್ಮದ ಬಗ್ಗೆ ವಿರೋಧವಿರುವವರಿಗೆ ಹಿಡಿಸಲಾರದು. ನಾರಿಯನ್ನು ಪುರುಷನ ಸೇವೆಗೂ, ಗುಲಾಮಗಿರಿಗೂ ನೂಕಿ ಕುಟುಂಬದ ಚೌಕಟ್ಟಿನಲ್ಲಿ, ಮನೆಯಲ್ಲಿ ಅವಳನ್ನು ಬಂಧಿಸುವ ತಂತ್ರಗಾರಿಕೆ ಇದು, ಈ ದೇಶದಲ್ಲಿ ಮುಂಚಿನಿಂದಲೂ ಹೀಗೆಯೇ ಬಂದಿದೆ ಎಂದು ಲೇಖಕಿ ತಿಳಿಸಿದ್ದಾರೆ.

About the Author

ಸತ್ಯವತಿ ರಾಮನಾಥ

ಲೇಖಕಿ ಸತ್ಯವತಿ ರಾಮನಾಥ ಅವರು 1951ರಲ್ಲಿ, ಹಾಸನ ಜಿಲ್ಲೆಯ ಮರಿತಮ್ಮನ ಹಳ್ಳಿ ಗ್ರಾಮದಲ್ಲಿ ಜನಿಸಿದರು. ತಂದೆ ಸೂರ್ಯನಾರಾಯಣಪ್ಪ ಮತ್ತು ತಾಯಿ ಅನಂತಲಕ್ಷ್ಮಿ. 1970ರಲ್ಲಿ ಬೆಂಗಳೂರು ವಿಶ್ವ ವಿದ್ಯಾನಿಲಯ ದಿಂದ ಬಿ.ಎಸ್ಸಿ.ಪದವಿಯನ್ನೂ, 1974ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಪ್ರಥಮ ಶ್ರೇಣಿಯಲ್ಲಿ ಸಂಸ್ಕೃತ ಭಾಷೆಯ ಎಂ.ಎ. ಪದವಿಯನ್ನೂ ಗಳಿಸಿದರು. ಅವರು ಸಂಸ್ಕೃತ ಅಧ್ಯಾಪಕರಾಗಿ ಅನೇಕ ಮಹಾವಿದ್ಯಾಲಯಗಳಲ್ಲಿ ಮೂವತ್ತು ವರ್ಷಕ್ಕೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿದ್ದಾರೆ. ಮೂರುದಶಕಗಳಿಂದಲೂ ಗಮಕ ಕಾವ್ಯವಾಚನಗಳಿಗೆ ವ್ಯಾಖ್ಯಾನ ನೀಡುವುದರ ಮೂಲಕ ಕನ್ನಡದ ವರಕವಿಗಳಾದ ರಾಘವಾಂಕ, ಕುಮಾರವ್ಯಾಸ, ಲಕ್ಷ್ಮೀಶ, ನರಹರಿ, ಕುವೆಂಪು ಮೊದಲಾದವರನ್ನು ಕೇಳುಗರಿಗೆ ಪರಿಚಯಿಸಿದ್ದಾರೆ. ಇವರ ಸಾವಿರಾರು ವ್ಯಾಖ್ಯಾನ ...

READ MORE

Related Books