ಚಾತಕ

Author : ಜರಗನಹಳ್ಳಿ ಶಿವಶಂಕರ್

Pages 157

₹ 160.00




Year of Publication: 2013
Published by: ಸ್ನೇಹ ಬುಕ್ ಹೌಸ್
Address: 165, 10ನೇ ಮುಖ್ಯರಸ್ತೆ, ಶ್ರೀನಗರ, ಬೆಂಗಳೂರು - 560050
Phone: 9845031335

Synopsys

‘ಚಾತಕ’ ಜರಗನಹಳ್ಳಿ ಶಿವಶಂಕರ್ ಅವರ ಕರ್ಮವೀರ ವಾರಪತ್ರಿಕಯಲ್ಲಿ ಪ್ರಕಟವಾದ ಅಂಕಣಬರಹಗಳ ಸಂಕಲನವಾಗಿದೆ. ಕೃತಿಯ ಕುರಿತು ಬೆನ್ನುಡಿಯಲ್ಲಿ ಡಾ. ಚೆನ್ನವೀರ ಕಣವಿ ಅವರು ಹೀಗೆ ಬರೆಯುತ್ತಾರೆ; ಮಾತಿನ ಚಮತ್ಕಾರಕ್ಕಿಂತ ಸತ್ಯ-ಸೌಂದರ್ಯದ ಆವಿಷ್ಕಾರವೇ ಕಾವ್ಯದ ಮುಖ್ಯ ಧ್ಯೇಯವಾಗಿರುವುದರಿಂದ ಪ್ರಕೃತಿ ಪರಿಸರದೊಂದಿಗೆ ಜೀವನಾನುಭವದ ಆಳವನ್ನು ಶೋಧಿಸಿ, ವ್ಯಂಗ್ಯ ವಿಡಂಬನೆಗೆ ಅಷ್ಟಾಗಿ ಹಾತೋರೆಯದೆ ಅರ್ಥಗರ್ಭಿತವಾಗಿ ಕಟ್ಟಿಕೊಡುವುದು ಶಿವಶಂಕರ್ ಅವರಿಗೆ ಸಾಧ್ಯವಾಗಿದೆ. ಜೇಡ ತನ್ನ ಒಡಲಿನಿಂದ ನೂಲು ತೆಗೆದು ಕಲಾತ್ಮಕವಾಗಿ ಬಲೆಯನ್ನು ಹೆಣೆಯದಂತೆ ಕೆಲವು ಕಂಗೊಳಿಸಿದರೆ. ಇನ್ನು ಕೆಲವು ಹಕ್ಕಿಗಳು ಗೂಡು ಕಟ್ಟಿ ತತ್ತಿ ಇಟ್ಟು ಮರಿ ಮಾಡಿದಂತೆ ಮನಸ್ಸನ್ನು ಮುದಗೊಳಿಸುತ್ತದೆ. ಎಲ್ಲಿಯೂ ಉಪದೇಶಕ್ಕೆಡೆಗೊಡದೆ, ಅವರಿವರನ್ನು ದ್ವೇಷದಿಂದ ಕಾಣದೆ, ಮುಖ ನೋಡಿ ಮಣೆ ಹಾಕದೆ ವಿಚಾರ ಪ್ರಚೋದನೆಯನ್ನು ಗುರಿಯಾಗಿಟ್ಟುಕೊಂಡ ಒಂದು ಬಗೆಯ ಮುಗ್ಧ ಸ್ನಿಗ್ಧ ಭಾವ ಇಲ್ಲಿಯ ಬರವಣಿಗೆಯ ವೈಶಿಷ್ಟ್ಯವೆನ್ನಬಹುದು.

About the Author

ಜರಗನಹಳ್ಳಿ ಶಿವಶಂಕರ್
(08 September 1949 - 05 May 2021)

ಜರಗನಹಳ್ಳಿ ಶಿವಶಂಕರ್ ಅವರು ಬೆಂಗಳೂರಿನ ಜರಗನಹಳ್ಳಿಯಲ್ಲಿ 1949 ಸೆಪ್ಟೆಂಬರ್ 8ರಂದು ಜನಿಸಿದರು.ಬಿ.ಕಾಂ ಪಧವಿದರರಾಗಿದ್ದ ಅವರು ಕೆನರಾ ಬ್ಯಾಂಕಿನಲ್ಲಿ 28 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ಸಾಹಿತ್ಯ ಒಲವಿನ ಕ್ಷೇತ್ರ. ಕನ್ನಡದ ಪ್ರಮುಖ ನಿಯತಕಾಲಿಕೆಗಳಲ್ಲಿ ಇವರ ಹನಿಗವಿತೆಗಳು, ಕವಿತೆಗಳು ಲೇಖನಗಳು ಪ್ರಕಟಗೊಳ್ಳುತ್ತಿದ್ದವು. ಪುಸ್ತಕ ಪ್ರಕಾಶನವೊಂದನ್ನು ಆರಂಭಿಸಿರುವ ಇವರು ಬರೆದ ಪ್ರಮುಖ ಕೃತಿಗಳೆಂದರೆ 'ಶುಭಾಂಗಿ ಝರಿ; ದೇವರ ನೆರಳು, ಎರೆಹುಳ, ಆಲಿಕಲ್ಲು ಮುಂತಾದವು. ಇವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅವರು 2021 ಮೇ 05 ರಂದು ಕೊರೋನಾ ಸೋಂಕಿಗೆ ಬಲಿಯಾಗಿ ನಿಧನರಾದರು. ಕೃತಿಗಳು: ಬುಗ್ಗೆ, ಮರಗಳೂ, ಮಳೆ, ಆಯ್ದ ಹನಿಗವಿತೆಗಳು, ವಚನ ಧ್ಯಾನ, ...

READ MORE

Related Books