ಸಬರದ ಬೀದಿ ನಾಟಕಗಳು

Author : ಬಸವರಾಜ ಸಬರದ



Year of Publication: 2022
Published by: ಚಾರುಮತಿ ಪ್ರಕಾಶನ
Address: # 224, 4ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಚಾಮರಾಜಪೇಟೆ, ಬೆಂಗಳೂರು - 560018
Phone: 94482 35553

Synopsys

ರೈತರ ಆತ್ಮಹತ್ಯೆಯ ವಸ್ತುವನ್ನಾಧರಿಸಿ ರಚಿತವಾದ ಕೃತಿ ಲೇಖಕ ಬಸವರಾಜ ಸಬರದ ಅವರ ‘ಸಬರದ ಬೀದಿ ನಾಟಕಗಳು’. ಸಾಲದ ಹೆಣ, ಹಿಂದುಳಿದ ವರ್ಗಗಳ ಮಹಿಳೆಯರಿಗೆ ರಾಜಕೀಯ ಅಧಿಕಾರ ಬಂದಾಗ ಸಮಾಜ ಅವರನ್ನು ನೋಡುವ ಪರಿ ವಿವರಿಸುವ ‘ಹನುಮಾಯಣ’, ‘ರಂಪಾಯಣ’, ‘ಹನುಮನಾಯಕ’ದಂಥಹ ನಾಟಕಗಳು ಓದುಗರಿಗೆ ತೀರಾ ಹತ್ತಿರವಾಗುತ್ತವೆ. 12 ನಾಟಕಗಳು ಈ ಕೃತಿಯಲ್ಲಿವೆ. ದೇಸಿ ಸೊಗಡಿನ ಹಾಡುಗಳು ಇಲ್ಲಿದ್ದು, ಮನರಂಜನೆ, ಆಕ್ರೋಶ, ಸಂದೇಶ ಎಲ್ಲವನ್ನೂ ಮಿಳಿತಗೊಳಿಸಿ ಹೊಸೆದ ನಾಟಕಗಳು ಈ ಕೃತಿಯಲ್ಲಿವೆ. ಬೀದಿ ನಾಟಕ ಆಸಕ್ತರಿಗೆ, ರಂಗಕರ್ಮಿಗಳಿಗೆ, ವಿದ್ಯಾರ್ಥಿಗಳಿಗೆ ಉಪಯೋಗವಾಗಬಲ್ಲ ಕೃತಿ ಇದಾಗಿದೆ. ಸಮುದಾಯ ಸಂಘಟನೆಯ ಜಾಥಾಗಳ ಸಂದರ್ಭದಲ್ಲಿ, ಜನ ಜಾಗೃತಿ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸಲೆಂದೇ ಬರೆದ ನಾಟಕಗಳ ಗುಚ್ಛ ಸಬರದ ಬೀದಿ ನಾಟಕಗಳು.

About the Author

ಬಸವರಾಜ ಸಬರದ
(20 June 1954)

ಬಸವರಾಜ ಸಬರದ ಅವರು ಮೂಲತಃ ಕೊಪ್ಪಳ ಜಿಲ್ಲೆ ಯಲಬುರ್ಗ ತಾಲ್ಲೂಕಿನ ಕುಕನೂರಿನವರು. ಹುಟ್ಟಿದ್ದು 1954 ಜೂನ್‌ 20ರಂದು. ತಾಯಿ ಬಸಮ್ಮ, ತಂದೆ ಬಸಪ್ಪ ಸಬರದ. ಹುಟ್ಟೂರು ಕುಕನೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಪದವಿ ಪಡೆದರು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಇವರು ಹಲವಾರು ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ.  ಶೈಕ್ಷಣಿಕವಾಗಿ ಮಾತ್ರವಲ್ಲದೇ ದೇವದಾಸಿ ವಿಮೋಚನಾ ಹೋರಾಟ, ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ, ಅಸ್ಪೃಶ್ಯತಾ ನಿವಾರಣೆ, ದಲಿತ-ಬಂಡಾಯ ಚಳವಳಿ ಮುಂತಾದ ಸಾಮಾಜಿಕ ಹೋರಾಟಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.   ನನ್ನವರ ಹಾಡು, ಹೋರಾಟ, ...

READ MORE

Related Books