ಸರ್ವಜ್ಞ ವಚನಗಳ ಓದು

Author : ಸಿ.ಪಿ. ನಾಗರಾಜ

Pages 102

₹ 75.00




Published by: ನಾಗು ಸ್ಟಾರಕ ಪ್ರಕಾಶನ
Address: ನಾಗು ಸ್ಟಾರಕ ಪ್ರಕಾಶನ, ಬೆಂಗಳೂರು

Synopsys

ಸರ್ವಜ್ಞನ ಹೆಸರು ಕೆಳದವರು ಕನ್ನಡದಲ್ಲಿ ವಿರಳ,ಸರ್ವಜ್ಞ ಯಾರು ಎನ್ನುವ ಪ್ರಶ್ನೆಗೆ ಸಂಶೋಧಕರಲ್ಲೇ ಭಿನ್ನಾಭಿಪ್ರಾಯಗಳಿವೆ.ಸರ್ವಜ್ಞನ ಹೆಸರಲ್ಲಿ ಅನೇಕರು ಬರೆದು ಸೇರಿಸಿದ ವಚನಗಳು ಇವಾಗಿರಬಹುದಾ ಎನ್ನುವ ಚರ್ಚೆಗಳೂ ಇವೆ. 400 ವರ್ಷಗಳ ಹಿಂದೆ ಸರ್ವಜ್ಞನಿದ್ದ ಎನ್ನುವುದೂ ಒಂದು ಊಹೆಯೇ ಆಗಿದೆ. ಅವನ ವ್ಯಕ್ತಿಗತ ವಿವರಗಳಿಗಿಂತಲೂ ಸರ್ವಜ್ಞನ ವಚನಗಳು ಹೆಚ್ಚಿನ ಪ್ರಾಮುಖ್ಯ ಪಡೆದಿದೆ. ವಚನಗಳನ್ನು ಜನ ಸಾಮಾನ್ಯರು ಅರ್ಥ ಮಾಡಿಕೊಳ್ಳಲುಸಹಕಾರಿಯಾಗಿದೆ. ಈ ಪುಸ್ತಕವನ್ನು ಕನ್ನಡ ಉಪನ್ಯಾಸಕರಾದ ಸಿ.ಪಿ.ನಾಗರಾಜ ರಚಿಸಿದ್ದಾರೆ. ಸುಮಾರು 90 ವಚನಗಳ ತಿರುಳನ್ನು ಸರಳ ಕನ್ನಡದಲ್ಲಿ ವಿವರಿಸಿದ್ದಾರೆ. ವಚನದ ಪ್ರತಿ ಪದ ಮತ್ತು ಸಾಲನ್ನೂ ಅರ್ಥವತ್ತಾಗಿ ಸಮಾನ್ಯ ಜನರಿಗೆ ಆರ್ಥವಾಗುವ ರೀತಿಯಲ್ಲಿ ವಿವರಿಸಲಾಗಿದೆ.

About the Author

ಸಿ.ಪಿ. ನಾಗರಾಜ

ಬರಹಗಾರ ಸಿ.ಪಿ ನಾಗರಾಜು ಅವರು 1945ರಲ್ಲಿ ಪುಟ್ಟೇಗೌಡ-ಲಕ್ಷ್ಮೀ ದೇವಮ್ಮ ದಂಪತಿಯ ಮಗನಾಗಿ ಜನಿಸಿದರು. ಎಂ.ಎ, ಪಿಎಚ್.ಡಿ ವ್ಯಾಸಂಗ ಮಾಡಿ ಸ್ತುತ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುದ್ರಿತ ನಾಟಕ ಕೃತಿಗಳು: ಭಾಗೀರಥಿ, ಅಂಬೆ, ಹಾವು, ಅಂಗಿಬಟ್ಟೆ, ಒಂದು ರೂಪಾಯಿ, ಕಳ್ಳರಿದ್ದಾರೆ ಎಚ್ಚರಿಕೆ, ಹೆಣದ ಹಣ, ಮೂರು ಸಾಮಾಜಿಕ ನಾಟಕಗಳು. ಮುದ್ರಿತ ಗದ್ಯ ಕೃತಿಗಳು: ಕರಿಯನ ಪುರಾಣ, ಕನಕನ ಅವ್ವ, ಹಳ್ಳಿಗಾಡಿನ ರೂವಾರಿ, ಡಾ.ಬಂದೀಗೌಡ, ಆಣೆ ಪ್ರಮಾಣಗಳು, ಬಯ್ಗುಳ, ಸರ್ವಜ್ಞ ವಚನಗಳ ಓದು, ಅಲ್ಲಮ ವಚನಗಳ ಓದು, ಶಿವಶರಣೆಯರ ವಚನಗಳ ಓದು, ಶಿವಶರಣರ ವಚನಗಳ ಓದು, ಬಸವಣ್ಣನ ...

READ MORE

Related Books