ಶಿವಶರಣರ ವಚನಗಳ ಓದು

Author : ಸಿ.ಪಿ. ನಾಗರಾಜ

Pages 128

₹ 100.00




Year of Publication: 2019
Published by: ನಾಗು ಸ್ಮಾರಕ ಪ್ರಕಾಶನ
Address: 75, ಎ ಬ್ಲಾಕ್, 5ನೇ ಅಡ್ಡರಸ್ತೆ, ಕೃಷ್ಣ ಗಾರ್ಡನ್‌, ಆರ್.ವಿ. ಕಾಲೇಜು ಪೋಸ್ಟ್‌, ಬೆಂಗಳೂರು-560059
Phone: 9986347521

Synopsys

ವಚನ ಚಳವಳಿಯ ಬಸವ, ಅಲ್ಲಮಪ್ರಭು, ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ ಹೀಗೆ ನೂರಾರು ಶಿವಶರಣರು ತಮ್ಮ ಜೀವನದ ಅನುಭವಗಳನ್ನು ವಚನಗಳ ಮೂಲಕ ಇಲ್ಲಿ ಅಭಿವ್ಯಕ್ತಿಸಿದ್ದಾರೆ. ವಚನ ಚಳವಳಿಯ ಭಾಗವಾಗಿದ್ದ ಎಲ್ಲರೂ ನಮಗೆ ಪರಿಚಿತರಲ್ಲ. ನೂರಾರು ಜನರು ತೆರೆಮರೆಯಲ್ಲಿ ಉಳಿದಿದ್ದಾರೆ. ಮೌಲಿಕ ವಿಚಾರಗಳನ್ನು ಪ್ರತಿಪಾದಿಸಿದ್ದರೂ ರೆಯಲ್ಲಿ ಉಳಿದ ಅಂಗಸೋಂಕಿನ ಲಿಂಗತಂದೆ, ಉರಿಲಿಂಗಿ ಪೆದ್ದಿ, ಕಂಬದ ಮಾರಿತಂದೆ, ಡಕ್ಕೆಯ ಬೊಮ್ಮಣ್ಣ, ತುರುಗಾಹಿ ರಾಮಣ್ಣ, ನಗೆಯ ಮಾರಿತಂದೆ ಇನ್ನು ಮುಂತಾದ ಶರಣರ ವಚನಗಳು ಹಾಗೂ ಅವುಗಳ ಅರ್ಥ ವಿಶ್ಲೇಷಣೆಯನ್ನು ಈ ಕೃತಿಯಲ್ಲಿ ನೀಡಲಾಗಿದೆ. 

About the Author

ಸಿ.ಪಿ. ನಾಗರಾಜ

ಬರಹಗಾರ ಸಿ.ಪಿ ನಾಗರಾಜು ಅವರು 1945ರಲ್ಲಿ ಪುಟ್ಟೇಗೌಡ-ಲಕ್ಷ್ಮೀ ದೇವಮ್ಮ ದಂಪತಿಯ ಮಗನಾಗಿ ಜನಿಸಿದರು. ಎಂ.ಎ, ಪಿಎಚ್.ಡಿ ವ್ಯಾಸಂಗ ಮಾಡಿ ಸ್ತುತ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುದ್ರಿತ ನಾಟಕ ಕೃತಿಗಳು: ಭಾಗೀರಥಿ, ಅಂಬೆ, ಹಾವು, ಅಂಗಿಬಟ್ಟೆ, ಒಂದು ರೂಪಾಯಿ, ಕಳ್ಳರಿದ್ದಾರೆ ಎಚ್ಚರಿಕೆ, ಹೆಣದ ಹಣ, ಮೂರು ಸಾಮಾಜಿಕ ನಾಟಕಗಳು. ಮುದ್ರಿತ ಗದ್ಯ ಕೃತಿಗಳು: ಕರಿಯನ ಪುರಾಣ, ಕನಕನ ಅವ್ವ, ಹಳ್ಳಿಗಾಡಿನ ರೂವಾರಿ, ಡಾ.ಬಂದೀಗೌಡ, ಆಣೆ ಪ್ರಮಾಣಗಳು, ಬಯ್ಗುಳ, ಸರ್ವಜ್ಞ ವಚನಗಳ ಓದು, ಅಲ್ಲಮ ವಚನಗಳ ಓದು, ಶಿವಶರಣೆಯರ ವಚನಗಳ ಓದು, ಶಿವಶರಣರ ವಚನಗಳ ಓದು, ಬಸವಣ್ಣನ ...

READ MORE

Related Books