ವಚನಕ್ರಾಂತಿ

Author : ಶಿವಮೂರ್ತಿ ಮುರುಘರಾಜೇಂದ್ರ

Pages 40

₹ 20.00




Year of Publication: 1994
Published by: ಜಗದ್ಗುರು ಮುರುಘರಾಜೇಂದ್ರ ಗ್ರಂಥಮಾಲೆ
Address: ಶ್ರೀ ಬೃಹನ್ಮಠ, ಚಿತ್ರದುರ್ಗ.

Synopsys

'ವಚನಕ್ರಾಂತಿ' ಶಿವಮೂರ್ತಿ ಮುರುಘಾರಾಜೇಂದ್ರ ಶರಣರ ವಚನಗಳ ಸಂಕಲನ. ಶರಣರು ಸಮಾಜದಲ್ಲಿಯ ಅನ್ಯಾಯ-ಅಕ್ರಮಗಳು, ಅಸಹಾಯಕರ ಮೇಲಿನ ದೌರ್ಜನ್ಯಗಳು, ಜಾತೀಯತೆ, ಭ್ರಷ್ಟಾಚಾರ, ಡಂಭಾಚಾರ, ಸ್ತ್ರೀಶೋಷಣೆ, ಅನಕ್ಷರತೆಯ ಕಂಡು ಪರಿಹಾರಗಳನ್ನು ಚಿಂತಿಸಿದ ಫಲಶೃತಿಯ ಅಕ್ಷರರೂಪವೇ ವಚನಗಳು.
ಶರಣರು ಆಧ್ಯಾತ್ಮಿಕ, ಧಾರ್ಮಿಕ ಕಾರ್ಯಗಳ ಭಾಗವಾಗಿಯೆ ಸಮಾಜ ಸುಧಾರಣ ಕಾರ್ಯಗಳನ್ನು ಕೈಗೊಳ್ಳುತ್ತಾರೆ. ಸುಧಾರಣೆಗೆ ಪ್ರವಚನ ಸಾಹಿತ್ಯಿಕ ಲೇಖನ ಚಿಂತನ ಬರಹಗಳ ಜೊತೆಗೆ ವಚನಗಳನ್ನುಪರಿಣಾಮಕಾರಿಯಾಗಿ ಬಳಸುತ್ತಿದ್ದಾರೆ. "ಬಸವಪ್ರಿಯ ಮುರುಘರಾಜೇಂದ್ರಪ್ರಭು"ಎಂಬ ವಚನಾಂಕಿತದಲ್ಲಿ ಜಗದ್ಗುರು ಶಿವಮುರ್ತಿ ಮುರುಘರಾಜೇಂದ್ರರು ರಚಿಸಿದ 107 ವಚನಗಳು ಈ ಸಂಕಲನದಲ್ಲಿದೆ.

 

About the Author

ಶಿವಮೂರ್ತಿ ಮುರುಘರಾಜೇಂದ್ರ

ಚಿತ್ರದುರ್ಗ ಮುರುಘಾಮಠದ ಪೀಠಾಧಿಪತಿಗಳಾದ ಶಿವಮೂರ್ತಿ ಮುರುಘರಾಜೇಂದ್ರ ಶರಣರು ಲೇಖಕ- ಚಿಂತಕರು. ಬೃಹನ್ಮಠದ ಈಗಿನ ಪಟ್ಟಾಧಿಪತಿಗಳಾಗಿರುವ ಮುರುಘಾ ಶರಣರ ನೇತೃತ್ವದಲ್ಲಿ ಹಲವು ಶಿಕ್ಷಣ ಸಂಸ್ಥೆಗಳು ನಡೆಯುತ್ತಿವೆ. ಪ್ರಗತಿಪರ ವಿಚಾರ ಧಾರೆಯ ಮುರುಘಾ ಶರಣರು ಮೂಢನಂಬಿಕೆಗಳ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಬಸವ ತತ್ವದ ಅನುಯಾಯಿ ಆಗಿರುವ ಅವರು ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ...

READ MORE

Related Books