ಶ್ರೀ ರಾಮಕೃಷ್ಣ ಲೀಲಾಪ್ರಸಂಗ

Author : ಟಿ.ಎಸ್. ವೆಂಕಣ್ಣಯ್ಯ

Pages 142

₹ 1.00




Year of Publication: 1923
Published by: ಎನ್. ವೆಂಕಟೇಶಯ್ಯಂಗಾರ್
Address: ಬೆಂಗಳೂರು

Synopsys

ಶ್ರೀ ಸ್ವಾಮಿ ಶಾರದಾನಂದ ಅವರು ಬಂಗಾಳಿಯಲ್ಲಿ ರಚಿಸಿದ ಕೃತಿಯನ್ನು ಪ್ರೊ. ಟಿ.ಎಸ್. ವೆಂಕಣ್ಣಯ್ಯ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿಯೇ-ಶ್ರೀ ರಾಮಕೃಷ್ಣ ಲೀಲಾಪ್ರಸಂಗ. ರಾಮಕೃಷ್ಣರ ಪರಮಹಂಸರ ಬಾಲ್ಯ, ಯೌವನ ಹಾಗೂ ಸಂತ ಜೀವನದ ವಿವಿಧ ಹಂತಗಳನ್ನು ತುಂಬಾ ಸರಳವಾಗಿ ಬರೆದಿರುವುದು ಮಾತ್ರವಲ್ಲ; ಪರಮಹಂಸರ ಉನ್ನತ ಆದರ್ಶ, ಅಧ್ಯಾತ್ಮಿಕ ಬೋಧನೆ, ಧಾರ್ಮಿಕ ಜೀವನ ಎಲ್ಲವನ್ನು ಸುಂದರವಾಗಿ ಹಾಗೂ ಪರಿಣಾಮಕಾರಿಯಾಗಿ ಚಿತ್ರಿಸಿದ ಕೃತಿ.

About the Author

ಟಿ.ಎಸ್. ವೆಂಕಣ್ಣಯ್ಯ
(01 October 1885 - 28 February 1939)

ಲೇಖಕ, ಅನುವಾದಕ ಟಿ.ಎಸ್. ವೆಂಕಣ್ಣಯ್ಯನವರು (ಜನನ:01-10-1885) ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳೇಕೆರೆ ತಾಲ್ಲೂಕಿನ ತಳಕು ಗ್ರಾಮದಲ್ಲಿ. ಮೈಸೂರಿನಲ್ಲಿ ಕನ್ನಡ, ತೆಲುಗು ಸಾಹಿತ್ಯಾಧ್ಯಯನ ಮಾಡಿ, ಮದರಾಸು ವಿಶ್ವವಿದ್ಯಾಲಯದಿಂದ 1914ರಲ್ಲಿ ಎಂ.ಎ. ಪದವಿ ಪಡೆದರು. ಉದ್ಯೋಗಕ್ಕಾಗಿ ಸೇರಿದ್ದು ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ಉಪಾಧ್ಯಾಯರಾಗಿ. ಬೆಂಗಳೂರು ಸೇಂಟ್ ಜೋಸೆಫ್ ಕಾಲೇಜು, ದೊಡ್ಡಬಳ್ಳಾಪುರ ಮುಂತಾದೆಡೆ ಶಿಕ್ಷಕ ವೃತ್ತಿ. ಬಹುಭಾಷಾ ವಿಶಾರದರು ಅವರು ಕನ್ನಡ, ತೆಲುಗು, ತಮಿಳು, ಸಂಸ್ಕೃತ, ಬಂಗಾಳಿ ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದಾರೆ. ’ಶ್ರೀ ರಾಮಕೃಷ್ಣ ಲೀಲಾ ಪ್ರಸಂಗದ ಭಾಗ, ರವೀಂದ್ರರ ಪ್ರಬಂಧಗಳನ್ನಾಧರಿಸಿ ಬರೆದ ‘ಪ್ರಾಚೀನ ಸಾಹಿತ್ಯ’ ಅನುವಾದ ಕೃತಿಗಳು. ’ಹರಿಹರನ ...

READ MORE

Related Books