ಜೆನ್ ಹಾಯ್ಕುಗಳು

Author : ಟಿ.ಎನ್. ವಾಸುದೇವ ಮೂರ್ತಿ

Pages 172

₹ 150.00




Year of Publication: 2017
Published by: ವಂಶಿ ಪ್ರಕಾಶನ
Address: #4, ಗಾಯತ್ರಿ ಕಾಂಪ್ಲೆಕ್ಸ್, ಟಿ.ಬಿ.ಬಸ್ಟಾಂಡ್ ಹತ್ತಿರ, ಬಿ.ಚ್ ರೋಡ್, ಸುಭಾಷ್ ನಗರ್, ನೆಲಮಂಗಲ, ಬೆಂಗಳೂರು- 562123
Phone: 9916595916

Synopsys

ಜ್ಹೆನ್ ಹಾಯ್ಕುಗಳು - ಓಶೋ ವ್ಯಾಖ್ಯಾನದೊಂದಿಗೆ, ಈ ಕೃತಿಯನ್ನು ಟಿ.ಎನ್. ವಾಸುದೇವಮೂರ್ತಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಪ್ರಕೃತಿಯ ಮೂಲಧಾತುಗಳು ಪುನೀತವಾಗುವುದೇ ಶ್ರೇಷ್ಟ ಕವಿಗಳ ಕಾವ್ಯದಲ್ಲಿ. ಗ್ರಹಿಸಿದ ಭಾವಗಳನ್ನು ಎದೆಯ ಕುಲುಮೆಯಲ್ಲಿ ಹಾಯಿಸಿದಾಗ ಈಚೆಗೆ ಹೊಳೆಯುವ ಕಾವ್ಯ ಲೋಹ ಅದು ಪರುಷಮಣಿಯೇ ಆಗಬಲ್ಲದು. ಜ್ಹೆನ್ ಹಾಯ್ಕುಗಳು ಇಂಥ ಭಾವ ಕಣಿವೆಯಲ್ಲಿ ಹಾದು ಬಂದ ಝರಿಗಳು, ಬದುಕಿನ ಕೊರಕಲುಗಳನ್ನು ತಾಕಿಕೊಂಡು ಬಂದ ನದಿಯ ಹರಿವು. ಓಶೋ ಅವರ ಓದಿಗೆ ದಕ್ಕಿದ ಜ್ಹೆನ್ ಹಾಯ್ಕುಗಳು ಮತ್ತಷ್ಟು ಪ್ರಖರಗೊಳ್ಳುವುದು ಅವರ ವಿಶ್ಲೇಷಣೆಯ ಬೆಳಕಿನಿಂದ. ಹಾಗೆ ನೋಡಿದರೆ ಓಶೋ ಅವರು ಈ ಹಾಯ್ಕುಗಳ ಅರ್ಥವನು ಇದಮಿತ್ಥಂ ಎಂದು ಅಂತಿಮ ಷರಾ ಬರೆಯುವುದಿಲ್ಲ. ಬದಲಿಗೆ ಎಂದಿನಂತೆ ತಮ್ಮ ತುಂಟ ಮತ್ತು ಮೊನಚಾದ ಪ್ರಶ್ನೆಗಳನ್ನು ಹುಟ್ಟುಹಾಕುವಂತೆ ಬಗೆಯುತ್ತಾರೆ. 

ಇಲ್ಲಿನ ಹಾಯ್ಕುಗಳಲ್ಲಿ ಹರಿದಾಡಿರುವುದು ಜೀವಂತ ಕಾವ್ಯ ಮತ್ತು ಹೇಳಿದ್ದಕ್ಕಿಂತ ಹೇಳದೇ ಉಳಿವ ಮೌನದ ಶ್ರೇಷ್ಟತನ ಓಶೋ ಬಲ್ಲರು. ಮೌನದಾಚೆಯ ವಿಶ್ವಾತ್ಮಕ ತಥ್ಯವನ್ನು ಕಟ್ಟಿಕೊಡುವ ಹಾಯ್ಕು ಕವಿಗಳು ಆಯ್ಕೆ ಮಾಡಿಕೊಂಡಿರುವ ವಸ್ತುಗಳೇ ಇಲ್ಲಿ ಕುತೂಹಲಕರ. ಸಾಮಾನ್ಯರ ಕಣ್ಣಿಗೆ ಯಾವುದು ನಗಣ್ಯವೋ ಅದು ಈ ಕವಿಗಳಲ್ಲಿ ಜೀವಗಾಮಿನಿಯ ರೂಹಾಗಿ ಕಂಗೊಳಿಸಿದೆ. ಶಬ್ದಗಳ ಬಳಕೆಯ ವ್ಯಸನ ಮತ್ತು ಪದಗಳ ದುಂದುವೆಚ್ಚವನ್ನು ಈ ಹಾಯ್ಕುಗಳು ತಣ್ಣಗೆ ನಿರಾಕರಿಸುತ್ತವೆ ಎನ್ನುತ್ತಾರೆ ಲೇಖಕ ವಾಸುದೇವ ನಾಡಿಗ್.

ಟಿ.ಎನ್. ವಾಸುದೇವಮೂರ್ತಿ ಅವರ ಓದು ಅಧ್ಯಯನ ಮತ್ತು ಚಿಂತನೆಯ ಪರಿಕ್ರಮದ ಅನನ್ಯತೆಗಳ ಪಟ್ಟಿಗೆ ಈ ಕೃತಿ ಮತ್ತೆ ಸಾಕ್ಷಿಯಾಗುತ್ತದೆ ಎನ್ನಬಹುದು. ಕನ್ನಡ ಕಾವ್ಯದ ಈ ಹೊತ್ತಿನ ಅನೇಕ ಅಸಮಾಧಾನ ಮತ್ತು ತಕರಾರುಗಳ ಮಧ್ಯೆ ಈ ಕೃತಿ ಒಂದು ಪಠ್ಯ ಮಾಗ್ರವಾಗಿ ಗೋಚರಿಸುತ್ತದೆ. 

 

About the Author

ಟಿ.ಎನ್. ವಾಸುದೇವ ಮೂರ್ತಿ
(30 December 1974)

ಟಿ.ಎನ್.ವಾಸುದೇವ ಮೂರ್ತಿ ಅವರು ಕಿ.ರಂ.ನಾಗರಾಜ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ಅಲ್ಲಮ ಪ್ರಭುವಿನ ವಚನಗಳ ದಾರ್ಶನಿಕ ಮರುಚಿಂತನೆಯ ವಿಭಿನ್ನ ಸ್ವರೂಪಗಳು ಎಂಬ ಮಹಾಪ್ರಬಂಧಕ್ಕೆ ಹಂಪಿ ಕನ್ನದ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪ್ರಶಸ್ತಿ ಸಂದಿದೆ. ಬೆಂಗಳೂರು ವಿವಿಯಲ್ಲಿ ಕನ್ನಡ ಎಂ.ಎ (ತೌಲನಿಕ ಸಾಹಿತ್ಯ) ಪದವಿಯನ್ನು ಪಡೆದ ಮೇಲೆ ಬೆಂಗಳೂರಿನ ಹಲವು ಪ್ರಮುಖ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು. ನ್ಯಾಷನಲ್  ಕಾಲೇಜು, ಜೈನ್ ವಿಶ್ವವಿದ್ಯಾಲಯ ಕಾವ್ಯಮಂಡಲ ಮೊದಲಾದ ಕನ್ನಡ ಸ್ನಾತಕೋತ್ತರ ಕೇಂದ್ರಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಎಂ.ಎ. ಹಾಗೂ ಎಂ.ಫಿಲ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಓಶೋ ನೇರ ಶಿಷ್ಯರಾದ ಸ್ವಾಮಿ ಆನಂದ್ ಪ್ರಭಾವದಿಂದ ದೀಕ್ಷೆ ...

READ MORE

Related Books