ವಿಶ್ವವಿಖ್ಯಾತ ನೈಸರ್ಗಿಕ ವಿಕೋಪಗಳು

Author : ಟಿ. ಆರ್. ಅನಂತರಾಮು

Pages 96

₹ 28.00




Year of Publication: 1999
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001, ದೂರವಾಣ : 080 22161913

Synopsys

ಭೂವಿಜ್ಞಾನಿ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರ ವೈಜ್ಞಾನಿಕ ಕೃತಿ ‘ವಿಶ್ವವಿಖ್ಯಾತ ನೈಸರ್ಗಿಕ ವಿಕೋಪಗಳು’ ಭೂಮಿ ಎಲ್ಲವನ್ನೂ ಸಹಿಸಿಕೊಳ್ಳುತ್ತದೆ ಎಂದು ಭಾವಿಸಿ ಭೂಮಿಯನ್ನು ಕ್ಷಮಯಾಧರಿತ್ರಿ ಎಂದು ಪ್ರಾಚೀನರು ಕರೆದರು. ಆದರೆ ಭೂಮಿಯ ಅನೇಕ ವಿದ್ಯಮಾನಗಳನ್ನು ಗಮನಿಸಿದರೆ ಅದರ ಇನ್ನೊಂದು ಮುಖದ ಪರಿಚಯವಾಗುತ್ತದೆ. ಭೂಕಂಪನ, ಜ್ವಾಲಾಮುಖಿ, ಚಂಡಮಾರುತ, ಅತಿವೃಷ್ಟಿ, ಅನಾವೃಷ್ಟಿ, ಭೂಕುಸಿತ, ಬರ ಇವೆಲ್ಲವೂ ಪ್ರಕೃತಿಯಲ್ಲಿ ಆಗಾಗ ತಲೆದೋರುವ ವೈಪರೀತ್ಯಗಳೇ. ಕೆಲವು ವಿಕೋಪಗಳನ್ನು ನಾವು ಮುಂದಾಗಿಯೇ ಅರಿಯಬಹುದು. ಆದರೆ ಕೆಲವನ್ನು ಅರ್ಥಮಾಡಿಕೊಳ್ಳುವುದಕ್ಕೆ ವಿಜ್ಞಾನಿಗಳು ಈಗಲೂ ಪ್ರಯತ್ನಿಸುತ್ತಿದ್ದಾರೆ.

ಪ್ರತಿ ವರ್ಷ ಸಾವಿರಾರು ಭೂಕಂಪನಗಳಿಂದ ಭೂಮಿ ತತ್ತರಿಸುತ್ತದೆ, ಆದರೆ ನಮ್ಮ ಅನುಭವಕ್ಕೆ ಬರುವುದು ತುಂಬ ಕಡಿಮೆ. ಹಾಗೆಯೇ ಕೆಲವು ಜ್ವಾಲಾಮುಖಿಗಳು ದೊಡ್ಡ ಪ್ರಮಾಣದಲ್ಲಿ ಮಾನವನ ಜೀವಹಾನಿ ಮತ್ತು ಆಸ್ತಿಹಾನಿ ಮಾಡುವುದುಂಟು. ಸುನಾಮಿ ಅಪ್ಪಳಿಸಿದರೆ ಕಡಲ ತೀರದ ನಗರಗಳು ನೆಲ ಕಚ್ಚುತ್ತವೆ. ಹಿಂದೂ ಮಹಾಸಾಗರದಲ್ಲಂತೂ ಪ್ರತಿ ವರ್ಷವೂ ಹತ್ತಾರು ಚಂಡಮಾರುತಗಳು ಹುಟ್ಟುತ್ತವೆ. ಅತಿವೃಷ್ಟಿ ಮತ್ತು ಅನಾವೃಷ್ಟಿ ಪ್ರಾಚೀನ ಕಾಲದಿಂದಲೂ ಕಾಡುತ್ತಲೇ ಇರುವ ನೈಸರ್ಗಿಕ ವಿಕೋಪಗಳು. ಹಿಮಾಲಯದಲ್ಲಿ ಮಳೆಗಾಲ ಬಂತೆಂದರೆ ದೊಡ್ಡ ಪ್ರಮಾಣದಲ್ಲಿ ಭೂಕುಸಿತವಾಗಿ ಸಂಚಾರವನ್ನೆ ಸ್ತಬ್ಧ ಮಾಡುತ್ತದೆ. ಇಂಥ ನೈಸರ್ಗಿಕ ವಿಕೋಪಗಳನ್ನು ಕುರಿತು ಈ ಪುಸ್ತಕದಲ್ಲಿ ಸಾಮಾನ್ಯರೂ ಅರಿಯಬೇಕಾದ ಎಲ್ಲ ಮಾಹಿತಿಗಳೂ ಇವೆ.

About the Author

ಟಿ. ಆರ್. ಅನಂತರಾಮು
(03 August 1949)

ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರು ಜನಿಸಿದ್ದು 1949 ಆಗಸ್ಟ್ 3ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ.ತಾಳಗುಂದ ರಾಮಣ್ಣ ಅನಂತರಾಮು ಅವರ ಪೂರ್ಣ ಹೆಸರು. ಸಿರಾದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಸಿರಾದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಆನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎನ್ಸಿ(ಜಿಯಾಲಜಿ) ಪದವಿ ಪಡೆದಿದ್ದಾರೆ.  ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತನ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.  ...

READ MORE

Related Books