ಸಂಗಾತ ಪುಸ್ತಕ ಪ್ರಕಾಶನದ 2020ರ ಸಾಲಿನ ಚಿ.ಶ್ರೀನಿವಾಸರಾಜು ಕಾವ್ಯ ಪುರಸ್ಕಾರ, ಕುವೆಂಪು ಯುವ ಕವಿ ಪ್ರಶಸ್ತಿ, ಕಾವ್ಯ ಮನೆ ಕಾವ್ಯ ಪುರಸ್ಕಾರ, ಎನ್ಕೆ ಕಾವ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, 2021ನೇ ಸಾಲಿನ ಅವ್ವ ಪ್ರಶಸ್ತಿ ಲಭಿಸಿದೆ.
ನಿನ್ನ ಅಮಲಿನಲ್ಲಿ ಕಳೆದು ಹೋದ ಎಷ್ಟೋ ಕವಿತೆಗಳು ಹಿಂತಿರುಗಲೇ ಇಲ್ಲ,
ಬಹುಶಃ ನನ್ನದೆಯ ವಿಳಾಸ ಮರೆತಿರಬಹುದು.
ನನ್ನೂರಿಗೆ ಒಂದಿಷ್ಟು ಬಿಸಿಲಾದರೂ ಕಳಿಸಿ ಕೊಡು,
ಚಳಿಗಾಲದ ನಿನ್ನ ನೆನಪಿಗೆ ಬಿಸಿಯಾದರೂ ತಾಕಲಿ
ಹೂ ಬಿಟ್ಟ ಮಳೆ ಹನಿಗೆ ನಿನ್ನ ಘಮಲಿನ ತೇವವಾದರೂ ಸೋಕಲಿ!
ಸುಟ್ಟು ಕರಕಲಾ...
ಒಂದು ಗಾಢವಾದ ಮೌನ ಗಲಾಟೆ ಮಾಡುತ್ತಿದೆ,
ನಮ್ಮಿಬ್ಬರ ಎದೆಯ ಗೂಡಲಿ.
ನೆನ್ನೆ ಹುಟ್ಟಿದ ಸೂರ್ಯ
ಇಂದು ಇದ್ದಿಲಾಗಿರಲು, ದೀಪದೆಣ್ಣೆಗೂ ಸಾವಿನ ತವಕ.
ಮಾತು ಹುಟ್ಟುವ ತನಕ ಬಿಗಿದಿಡು ಬಸಿರನು, ಲೋಕ ಹುಟ್ಟದ ಹಾಗೆ !
ತೊಟ್ಟು ಕಳಚುವ ಆಟದಲಿ ಬೆರಳುಗಳೇ ಸವೆಯಲಿ,
ಬೀದಿಗೊಂದು...