ಉದಯ್ ಕುಮಾರ್ ಹಬ್ಬು
ಉದಯ್ ಕುಮಾರ್ ಹಬ್ಬು ಅವರು ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು. 1951 ಏಪ್ರಿಲ್ 21ರಂದು ಮಂಗಳೂರಿನ ಕಿನ್ನಿಗೋಳಿಯಲ್ಲಿ ಜನಿಸಿದರು. ಅವರ ಕವನ ಸಂಕಲನ, ಕಾದಂಬರಿ, ಮಕ್ಕಳ ಸಾಹಿತ್ಯ ರಚನೆ, ಧಾರ್ಮಿಕ ಕೃತಿ, ವ್ಯಕ್ತಿತ್ವ ವಿಕಸನ ಕೃತಿ ರಚನೆ, ತತ್ವಶಾಸ್ತ್ರಕ್ಕೆ ಸಂಬಂಧಿಸಿದ ಅಧ್ಯಯನ, ಕೃತಿ ರಚನೆ, ವಿಮರ್ಶಾ ಪುಸ್ತಕಗಳ ಪ್ರಕಟಣೆ, ಕಥಾ ಸಂಕಲನಗಳನ್ನು ರಚಿಸಿ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ. ಆಹಾರ ಸಂಸ್ಕೃತಿಗೆ ಸಂಬಂಧಿಸಿದಂತೆ ’ಲುಂಡೀರಿಯ’ ಎಂಬ ಮಕ್ಕಳ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ’ಪ್ರಾಚೀನ ಭಾರತೀಯ ತತ್ವ’ ಎಂಬ ಕೃತಿಯನ್ನು ಹೊರತಂದಿದ್ದಾರೆ.