ಅರೆಮರುಳನ ಕಥಾಪ್ರಸಂಗ

Author : ಶ್ರೀಧರ್ ನಾಯಕ್

₹ 80.00




Year of Publication: 2022
Published by: ಗೀತಾಂಜಲಿ ಪಬ್ಲಿಕೇಷನ್ಸ್
Address: ನಂ. 60, 2ನೇ ಡಿ ಅಡ್ಡರಸ್ತೆ, 2ನೇ ಹಂತ, 3ನೇ ಬ್ಲಾಕ್, ನಾಗರಬಾವಿ, ಬೆಂಗಳೂರು- 560 072

Synopsys

ಲೇಖಕ ಶ್ರೀಧರ್ ನಾಯಕ್ ಅವರ ಹಾಸ್ಯ ಲೇಖನಗಳ ಸಂಕಲನ ಅರೆಮರುಳನ ಕಥಾಪ್ರಸಂಗ. ಮೂಲತಃ ಉಡುಪಿಯವರಾದ ಶ್ರೀಧರ್ ನಾಯಕ್‌ ಅವರ ಹಾಸ್ಯಲೇಖನಗಳ ವೈಶಿಷ್ಟ್ಯವೆಂದರೆ `ಆರೆಮರುಳ' ಎಂಬ ಪತ್ರಕರ್ತನೇ ಇಲ್ಲಿ ಮುಖ್ಯ ಪಾತ್ರವಾಗಿದ್ದಾನೆ. ನಾಯಕ್ ಅವರು ಸ್ವತಃ ಪತ್ರಕರ್ತರಾಗಿ ಕೆಲಸ ಮಾಡಿದ್ದರಿಂದ ಆಲೆಮರುಳನ ಪಾತ್ರಪೋಷಣೆ ಚೆನ್ನಾಗಿದೆ. ಚಿಕ್ಕ, ಚಿಕ್ಕ ವಾಕ್ಯಗಳು, ಸಂಭಾಷಣೆಯ ರೂಪದ ಇಲ್ಲಿನ ಬರಹಗಳು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ. ಪತ್ರಿಕೆ ಸೇರಿ ನಮ್ಮ ಸೃಜನಶೀಲ ಬರವಣಿಗೆ ಮಾಲಾಯಿತು ಎಂದು ದೂರುವ ಪತ್ರಕರ್ತರ ನಡುವ ಮಿತ್ರ ಶ್ರೀಧರ್ ನಾಯಕ್ ಒಂದು ಅಪವಾದವಾಗಿ ಕಾಣುತ್ತಾರೆ. ಇವರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಹಾಸ್ಯ ಲೇಖನಗಳು ಮೂಡಿಬರಲಿ ಎಂದು ಹಾರೈಸುತ್ತೇನೆ ಎಂಬುದಾಗಿ ಚುಟುಕು ಸಾಹಿತಿ ಎಚ್.ಡುಂಡಿರಾಜ್‌ ಕೃತಿಯ ಮುನ್ನುಡಿಯಲ್ಲಿ ಬರೆದಿದ್ದಾರೆ.

About the Author

ಶ್ರೀಧರ್ ನಾಯಕ್
(23 June 1956)

ಪತ್ರಕರ್ತ, ಲೇಖಕ ಶ್ರೀಧರ್ ನಾಯಕ್ ಅವರು 1956 ಜೂನ್‌ 23ರಂದು ಉಡುಪಿಯಲ್ಲಿ ಜನಿಸಿದರು. ಕಲ್ಬುರ್ಗಿ ಮತ್ತು ಹಾಸನದಲ್ಲಿ ಒಟ್ಟು ಹತ್ತು ವರ್ಷಗಳ ಕಾಲ ಜಿಲ್ಲಾ ವರದಿಗಾರರಾಗಿ ತಮ್ಮ ವಿಶೇಷ ವರದಿಗಳಿಂದ ಗಮನ ಸೆಳೆದವರು. 'ಪ್ರಜಾವಾಣಿ'ಯ ಸಂಪಾದಕೀಯ ವಿಭಾಗದಲ್ಲಿ ಮೂರು ದಶಕಗಳ ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕೃತಿಗಳು: ‘ನಿಗೂಢತೆಯ ಬೆನ್ನನೇರಿ ಹೊರಟಾಗ’ (ಕಿರುಕಾದಂಬರಿ), ‘ಸ್ಪಂದನ’ (ಲೇಖನಗಳ ಸಂಗ್ರಹ), ‘ಪತ್ರಿಕೋದ್ಯಮ : ಒಂದು ನೇರ ನೋಟ’  ...

READ MORE

Related Books