ಮನದ ಮಾತು

Author : ರಾ.ಹ.ಕೊಂಡಕೇರ

Pages 96

₹ 90.00




Year of Publication: 2021
Published by: ಕೊಂಡಕೇರ ಪ್ರಕಾಶನ
Address: ಕೊಂಡಕೇರ ಪ್ರಕಾಶನ, ಬಾವಲತ್ತಿ, ಬೀಳಗಿ - ತಾಲ್ಲೂಕು, ಬಾಗಲಕೋಟೆ-ಜೆಲ್ಲೆ
Phone: 9632734683

Synopsys

ಮನದ ಮಾತು ರಾ.ಹ ಕೊಂಡಕೇರ ಅವರ ಕೃತಿಯಾಗಿದೆ. 'ಹಕ್ಕಿ ಚುಕ್ಕಿ’ ಹನಿಗವನ ಸಂಕಲನದ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಪ್ರವೇಶಿಸಿದ ರಾಮಪ್ಪ ಎಚ್‌. ಕೊಂಡಕೇರ ಅವರ ಎರಡನೇ ಹನಿಗವನ ಸಂಕಲನ 'ಮನದ ಮಾತು' ಸಾಹಿತ್ಯದಲ್ಲಿ ಬದುಕಿನ ಖುಷಿ ಇದೆ ಎನ್ನುವುದನ್ನು ಕಂಡುಕೊಂಡಿರುವ ರಾಮಪ್ಪನವರು. ಆ ಖಷಿಗಾಗಿಯೇ ಬರೆಯುತ್ತ ಬಂದವರು. ಬದುಕಿನ ಬರವಣಿಗೆಯಲ್ಲಿ ಸಿಕ್ಕ ಖುಷಿಯಮ್ಮ ಸಾಹಿತ್ಯದಲ್ಲಿ ಹಿಡಿದಿಡುವ ಪ್ರಯತ್ನದಲ್ಲಿ ಸಿಕ್ಕ ಸಾಲುಗಳೆ ಇಲ್ಲಿ ಹನಿಗಳಾಗಿವೆ. ನಮ್ಮ ದಿನನಿತ್ಯದ ಬದುಕಿನಲ್ಲಿ ನಡೆಯುವ ಸಂಗತಿಗಳನ್ನು ಕೆಲವೇ ಸಾಲುಗಳಲ್ಲಿ ಪರಿಣಾಮಕಾರಿಯಾಗಿ ಹಿಡಿದಿಟ್ಟರುವ ರಾಮಪ್ಪನವರು ಕನ್ನಡ ಸಾಹಿತ್ಯಲೋಕ ಕಾಣುತ್ತಿರುವ ಅಪರೂಪದ ಹನಿಗವಿಯಾಗಿದ್ದಾರೆ.

About the Author

ರಾ.ಹ.ಕೊಂಡಕೇರ

ಕವಿ ,ಲೇಖಕ ರಾ.ಹ.ಕೊಂಡಕೇರ(ರಾಮಪ್ಪ ಹಣಮಪ್ಪ ಕೊಂಡಕೇರ) ತಂದೆ ಹಣಮಪ್ಪ ,ತಾಯಿ ರಂಗವ್ವ . ಇವರು 8-6-1988 ರಂದು ಜನಿಸಿದರು.ಮೂಲತಃ ಇವರು ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಾವಲತ್ತಿ ಎಂಬ ಗ್ರಾಮದವರು. ಪ್ರಸ್ತುತ ಇವರು ಧಾರವಾಡದಲ್ಲಿ ರೈಲ್ವೆ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಡು ಹಲವಾರು ಮೌಲಿಕ ಕೃತಿಗಳನ್ನೂ ಹೊರತಂದಿದ್ದಾರೆ. ನಾಟಕ ರಚನೆ ಅಭಿನಯದ ಜೊತೆಗೆ ಒಳ್ಳೆಯ ಗಾಯಕರಾಗಿಯೂ ಗುರುತಿಸಿಕೊಂಡಿದ್ದಾರೆ.  ಕೃತಿಗಳು : ಹಕ್ಕಿ ಚುಕ್ಕಿ,ಮನದ ಮಾತು(ಹನಿಗವಿತೆಗಳು),ಶ್ರೀ ಲಕ್ಷ್ಮೀ ರಂಗನಾಥನ ಚರಿತ್ರೆ (ಸಂಶೋಧನಾ ಗ್ರಂಥ),ಮೆಟ್ಟಿನ ಪದಗಳು(ಸಂಪಾದಿತ ಕೃತಿ)ಇವು ಪ್ರಕಟಣೆಗೊಂಡಿವೆ. ಶ್ರೀರಂಗನ ಮಹಿಮೆ,ಹಲಗಲಿಯ ಬೇಡರು,ಸರಕಾರಿ ಶಾಲೆ(ನಾಟಕಗಳು) ...

READ MORE

Related Books