ಬನ್ನಂಜೆಯವರೊಡನೆ ಉಪವಾಸ

Author : ಮಲ್ಲೇಪುರಂ ಜಿ. ವೆಂಕಟೇಶ್‌

Pages 688

₹ 695.00




Year of Publication: 2022
Published by: ಅಂಕಿತ ಪುಸ್ತಕ
Address: ಪ್ರಕಾಶಕರು : ಅಂಕಿತ ಪುಸ್ತಕ, #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080 - 2661 7100 / 2661 7755

Synopsys

ಇಲ್ಲಿ ಹಲವರಿಗೆ ತಿಳಿಯದ ಅಪ್ಪನ ಮಗು ಮುಖವುಂಟು. ತೀರ ನಿಷ್ಟುರ ಸತ್ಯದ ಬನ್ನಂಜೆ ಇದ್ದಾರೆ. ಯಾವ ಲೋಕದ ದರ್ಶನಕ್ಕೂ ತೆರೆಯದ ಅಧ್ಯಾತ್ಮ ಹೇಳಿದ ಆಚಾರ್ಯರು ಇದ್ದಾರೆ. ಎಲ್ಲರನೂ ನಿಬ್ಬೆರಗು ಮಾಡಿ, ಜಾತಿ ಮತಗಳನ್ನು ಮೀರಿ, ದಲಿತ ಜನಾಂಗದೊಳಗೊಬ್ಬ ಸಂಸ್ಕೃತ ವಿದ್ವಾಂಸ ಹುಟ್ಟಲಿ ಅಂದು ನನ್ನ ಜನ್ಮ ಸಾರ್ಥಕ, ಎಂದು ಅರುವತ್ತರ ದಶಕದಲ್ಲಿ ಘೋಷಿಸಿದ ಗೋವಿಂದ ಇದ್ದಾರೆ. ನಿಜದ ನಡೆಯಲಿ ಅವಧೂತ ಪುತ್ತೂರು ಅಜ್ಜನ ಜೊತೆ ಹೆಜ್ಜೆ ಹಾಕಿದ ಪದಲೀಲೆಯನ್ನು ಸಾಕ್ಷೀಭೂತರೇ ಬಿತ್ತರಿಸಿ, ಆಚಾರ್ಯರು ನೆಲಕ್ಕೆ ಇಳಿದ ಸಂದೇಶವಾಹಕ ಎಂಬುದನು ಅರಳಿಸಿ ಕೊಟ್ಟ ಬನ್ನಂಜೆ ಗೋವಿಂದಾಚಾರ್ಯ ಇದ್ದಾರೆ. ಹದಿನೆಂಟರಿಂದ ಮೊನ್ನೆ ಆಚಾರ್ಯರು ಹೊರಡುವವರೆಗೂ ಒಡನಾಡಿಯಾಗಿ, ನಾಡಿನಾಡಿಗಳ ಬಡಿತದಲ್ಲೆಲ್ಲ ಜೊತೆ ಇದ್ದು, ಅವರನ್ನು ನೆನೆದ ಹಿರಿಯರೊಬ್ಬರು ಬರೆದ ಚಾರಿತ್ರಿಕ ದಾಖಲೆ ಇದೆ. ಈ ಪರಂಪರೆಯನ್ನು ಪರದೇಶಿಯಾಗಲು ಬಿಡದೆ, ವಿದೇಶೀಯರೆಲ್ಲ ಈ ಕಡೆ ತಿರುಗಿ ನೋಡುವಂತಾಗಿ ಆಚಾರ್ಯರಿಗೆ ಮಾರುಹೋಗಿ ಹುಡುಕಿ ಈ ನೆಲಕ್ಕೆ ಬಂದ ಅನ್ಯದೇಶೀಯರು ಕಂಡ ವಿಸ್ಮಯದ ದೇಸೀ ಬನ್ನಂಜೆ ಇದ್ದಾರೆ. ಗೊತ್ತಿರುವವರಿಗೆ ಗೊತ್ತೇ ಇಲ್ಲದ ಗೊತ್ತಿಲ್ಲದವನಿಗೆ ಗೊತ್ತಾಗಿಯೇ ಬಿಟ್ಟರು ಎಂಬಷ್ಟು ಆಪ್ತವಾಗುವ ಎಲ್ಲ ಗೊತ್ತುಗಳನ್ನು ಮತ್ತೆ ನೋಡಬೇಕು ಎನಿಸುವ, ಯಾವ ಗತ್ತೂ ಇಲ್ಲದ ಒಬ್ಬ ಸರಳಜೀವಿ ಬನ್ನಂಜೆ ಗೋವಿಂದಾಚಾರ್ಯರು, ಯಾರ ಗುತ್ತಿಗೆಗೂ ಸಿಗದೇ ಗುರಿಕಾರನಾದ ಅಪೂರ್ವ ವಿವರಗಳಿವೆ.

About the Author

ಮಲ್ಲೇಪುರಂ ಜಿ. ವೆಂಕಟೇಶ್‌
(05 June 1952)

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾಗಿದ್ದ ಮಲ್ಲೇಪುರಂ ಜಿ. ವೆಂಕಟೇಶ ಅವರು 1952, ಜೂನ್ 5ರಂದು ಬೆಂಗಳೂರು ಜಿಲ್ಲೆಯ ನೆಲಮಂಗಲದಲ್ಲಿ ಜನಿಸಿದರು. ತಂದೆ ಗಂಗಯ್ಯ, ತಾಯಿ ವೆಂಕಟಮ್ಮ. ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾಭ್ಯಾಸ ನೆಲಮಂಗಲದ ಸರ್ಕಾರಿ ಮತ್ತು ಹೈಯರ್‌ಸೆಕೆಂಡರಿ ಶಾಲೆ. ಮೊದಲ ಸಂಸ್ಕೃತ-ಕನ್ನಡ ಗುರುಗಳು ಎಸ್.ವಿ. ರಾಮಸ್ವಾಮಿ ಅಯ್ಯಂಗಾರ್. ಸಿದ್ಧಗಂಗಾ ಮಠದಲ್ಲಿ ಕನ್ನಡ ಪಂಡಿತ್ ಮತ್ತು ಸಂಸ್ಕೃತ ಅಲಂಕಾರವಿದ್ವತ್ ವ್ಯಾಸಂಗ. ವಿದ್ವಾನ್ ಬಿ. ವೆಂಕಟರಾಮಭಟ್ಟ,  ಇವರಲ್ಲಿ ಕಾವ್ಯಾಲಂಕಾರಗಳ ಅಧ್ಯಯನ. ಬೆಂಗಳೂರಿನ ಶ್ರೀರಾಮಕೃಷ್ಣಾಶ್ರಮದಲ್ಲಿ ಸ್ವಾಮಿ ಆದಿದೇವಾನಂದರಿAದ ಅದ್ವೈತ ವೇದಾಂತದ ಅನುಗ್ರಹ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ., ಮೂರನೇ ರ‍್ಯಾಂಕಿನೊಡನೆ ಕುವೆಂಪು ಚಿನ್ನದ ...

READ MORE

Related Books