ದುರ್ಗಾವತಿ

Author : ಕೆ.ಬಿ. ಪ್ರಭುಪ್ರಸಾದ್

Pages 120

₹ 15.00




Year of Publication: 1974
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019.
Phone: 9945036300

Synopsys

ದುರ್ಗಾವತಿ ಪುಸ್ತಕವನ್ನು ಲೇಖಕ ಕೆ.ಬಿ. ಪ್ರಭುಪ್ರಸಾದ್‌ ಅವರು ರಚಿಸಿದ್ದಾರೆ. ಚಿಕ್ಕ ಸಂಸ್ಥಾನದ ದೊಡ್ಡ ರಾಣಿ. ಮನೆಗೆ ಬೆಳಕು, ಪ್ರಜೆಗಳಿಗೆ ತಾಯಿ, ರಾಜ್ಯಕ್ಕೆ ರಕ್ಷೆ. ಮೊಗಲ್ ಸೈನ್ಯವನ್ನೆ ದಿಟ್ಟತನದಿಂದ ಎದುರಿಸಿ, ಸ್ವಾತಂತ್ರ್ಯ ಆತ್ಮಗೌರವಗಳಿಗಾಗಿ ಪ್ರಾಣವನ್ನೇ ಅರ್ಪಿಸಿದ ಧೀರೆ ಎಂದು ದುರ್ಗಾವತಿ ಕುರಿತಾಗಿ ಇಲ್ಲಿ ವರ್ಣಿಸಲಾಗಿದೆ. ರಾಣಿ ದುರ್ಗಾವತಿಯ ಬಾಲ್ಯದ ದಿನಗಳು, ಬದುಕಿನ ಏರಿಳಿತಗಳು, ಯುದ್ಧ ಸನ್ನವೇಶಗಳು, ನಡತೆ, ಧೈರ್ಯ, ಪ್ರಜೆಗಳೊಂದಿಗೆ ಹೊಂದಿದ ಅವಿನಾಭಾವ ಸಂಬಂಧ ಹೀಗೆ ಆಕೆಯ ಬದುಕಿನ ವಿವಿಧ ಘಟ್ಟಗಳನ್ನು ಲೇಖಕರು ಈ ಪುಸ್ತಕದಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ.

About the Author

ಕೆ.ಬಿ. ಪ್ರಭುಪ್ರಸಾದ್
(27 December 1929)

ಸುಗಮ ಸಂಗೀತ ಗಾಯಕ ಪ್ರಭುಪ್ರಸಾದರು ಮೂಲತಃ ದಾವಣಗೆರೆಯವರು. ತಂದೆ ಬಿ.ಎಸ್. ಕುರುವತ್ತಿ ಮತ್ತು ತಾಯಿ ಸರ್ವಮಂಗಳಾ. ದಾವಣಗೆರೆಯಲ್ಲಿಯೇ ಪ್ರಾರಂಭಿಕ ಶಿಕ್ಷಣ, ನಂತರ ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು. ಸಾಂಗ್ಲಿಯ ವಿಲಿಂಗ್‌ಡನ್ ಕಾಲೇಜಿನಲ್ಲಿ ಅಧ್ಯಯನ ನಡೆಸಿ (ಮುಂಬೈ ವಿ.ವಿ.) ಎಂ.ಎ. ಪೂರ್ಣಗೊಳಿಸಿದರು. ಶಿವಮೊಗ್ಗ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ಯುವರಾಜ ಕಾಲೇಜಿನಲ್ಲಿ ರೀಡರ್ ಆಗಿ, ಮಹಾರಾಣಿ ಕಾಲೇಜಿನಲ್ಲಿ ಪ್ರೊಫೆಸರಾಗಿ, ಚಿತ್ರದುರ್ಗ, ತುಮಕೂರಿನ ಸರಕಾರಿ ಪ್ರಥಮ ದರ್ಜೆ ಸೈನ್ಸ್ ಕಾಲೇಜು, ಮಹಾರಾಣಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಸುಗಮ ಸಂಗೀತ ಗಾಯಕರಾಗಿ, ಸಾಹಿತ್ಯ, ಸಂಗೀತ, ನಾಟಕ, ಹಾಸ್ಯ ಹವ್ಯಾಸಗಳಾಗಿವೆ. ದೇಗುಲಗಳ ದಾರಿಯಲ್ಲಿ (ಪ್ರವಾಸ ಕಥನ), ನಾದಸೇತು ಮತ್ತು ಇತರ ...

READ MORE

Related Books