ನಾನಾನಿಂದ ನೇತಾಜಿವರೆಗೆ ಸ್ವಾತಂತ್ರ್ಯ ಸಂಗ್ರಾಮ 1857-1947

Author : ಚಂದ್ರಶೇಖರ ಭಂಡಾರಿ

Pages 130

₹ 50.00




Year of Publication: 2007
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

ನಾನಾನಿಂದ ನೇತಾಜಿವರೆಗೆ ಸ್ವಾತಂತ್ರ್ಯ ಸಂಗ್ರಾಮ 1857-1947 ಇತಿಹಾಸ ಬರಹದ ಕೃತಿಯನ್ನು ಲೇಖಕ ಚಂದ್ರಶೇಖರ ಭಂಡಾರಿ ರಚಿಸಿದ್ದಾರೆ. ಈ ಕೃತಿಯಲ್ಲಿ ಭಾರತದಲ್ಲಿ 19-20ನೇ ಶತಮಾನಗಳಲ್ಲಿ ನಡೆದ ಸ್ವಾತಂತ್ರ್ಯಸಂಘರ್ಷ ಜಗತ್ತಿನ ಇತಿಹಾಸದಲ್ಲಿಯೇ ಅಪೂರ್ವವಾದುದ್ದು ಮತ್ತು ರೋಮಾಂಚಕಾರಿಯಾದುದ್ದು. ಒಂದು ಕಡೆ ವಿಶುದ್ಧ ರಾಷ್ಟ್ರದರ್ಶನ ಬೋಧೆಯ ಮೂಲಕ ಸ್ವಾತಂತ್ರ್ಯಾಭಿಮುಖವಾಗಿ ಜನಮಾನಸದ ನಿರ್ಮಾಣ, ಇನ್ನೊಂದು ಕಡೆ ನೇರವಾಗಿ ವಿದೇಶೀ ಪ್ರಭುತ್ವಕ್ಕೆ ಸವಾಲೆಸೆದ ಸಶಸ್ತ್ರ ಹೋರಾಟ, ಮತ್ತೊಂದು ಕಡೆ ಗಲ್ಲುಕಂಬಕ್ಕೂ ಬ್ರಿಟಿಷರ ಪಾಶವೀಶಕ್ತಿಗೂ ಎದೆಯೊಡ್ಡಿದ ಕ್ರಾಂತಿಕಾರಿಗಳ ಬಲಿದಾನದ ದೀರ್ಘಸರಣಿ, ಅಂತಿಮ ಹಂತದಲ್ಲಿ ಸ್ವತಂತ್ರ ಬೃಹತ್ ಸೇನೆಯನ್ನು ಸಜ್ಜುಗೊಳಿಸಿ ಆಂಗ್ಲ ಸರ್ಕಾರದ ಮುಖ್ಯ ಅವಲಂಬವಾಗಿದ್ದ ಸೇನಾಶಕ್ತಿಯನ್ನು ನಿರರ್ಥಕಗೊಳಿಸಿ ಸ್ವಾತಂತ್ರ್ಯಪ್ರಾಪ್ತಿಯನ್ನು ತೀವ್ರಗೊಳಿಸಿದು ; – ಇಂತಹ ವಿವಿಧಮುಖ ಅಭಿಯಾನಗಳ ಫಲವಾಗಿ 1947ರಲ್ಲಿ ಭಾರತ ದಾಸ್ಯಮುಕ್ತಗೊಂಡಿತು. ಈಗಿನ ಪೀಳಿಗೆಗೆ ಪ್ರೇರಣಾದಾಯಿಯಾಗಿರುವ ಹೀಗೆ ಇತಿಹಾಸದ ಹಲವು ಮುಖಗಳ ಚಿತ್ರಣವನ್ನು ಈ ಪುಸ್ತಕದಲ್ಲಿ ಕಾಣಬಹುದು.

About the Author

ಚಂದ್ರಶೇಖರ ಭಂಡಾರಿ

ಲೇಖಕ ಚಂದ್ರಶೇಖರ ಭಂಡಾರಿ ಅವರನ್ನು ‘ಸ್ಟಾಲ್‌ ಆಫ್‌ ದಿ ಅರ್ತ್‌’ ಎಂದು ಕೂಡ ಕರೆಯುತ್ತಾರೆ. ಅನೇಕ ಸಮಾಜದ ಏಳಿಗೆಗಾಗಿ ಕೃತಿಗಳನ್ನು ರಚಿಸಿದ ಇವರಿಗೆ ಕುವೆಂಪು ಭಾಷಾ ಪ್ರಾಧಿಕಾರದ ಪುಸ್ತಕ ಬಹುಮಾನ (2011ರಲ್ಲಿ) ಲಭಿಸಿದೆ. ಕೃತಿಗಳು; ಕುಟುಂಬ- ಒಂದು ಚಿಂತನೆ. ಜನಮನ ಶಿಲ್ಪಿ, ರಾಷ್ಟ್ರನಾಯಕ ಡಾ. ಅಂಬೇಡ್ಕರ್, ನಾನಾನಿಂದ ನೇತಾಜಿವರೆಗೆ ಸ್ವಾತಂತ್ಯ್ರ ಸಂಗ್ರಾಮ 1857-1957.ಪ್ರಕ್ಷುಬ್ಧ ಕಾಶ್ಮೀರ  ...

READ MORE

Related Books