ಬೇಂದ್ರೆ ಮತ್ತು ಕಂಬಾರರ ಕಾವ್ಯದಲ್ಲಿ ಪುರಾಣಪ್ರಜ್ಞೆ ಮತ್ತು ಸಮಕಾಲೀನತೆ

Author : ನರಸಿಂಹಮೂರ್ತಿ ಹೂವಿನಹಳ್ಳಿ

Pages 216

₹ 200.00




Year of Publication: 2020
Published by: ಪ್ರೇರಣ ಪ್ರಕಾಶನ
Address: ನಂ- 2393/ಎಂ. ಒಂದನೇ ‘ಎ’ ಮುಖ್ಯರಸ್ತೆ, ಆರ್.ಪಿ.ಸಿ ಲೇಔಟ್, ವಿಜಯನಗರ, ಬೆಂಗಳೂರು- 40
Phone: 9480583913

Synopsys

‘ಬೇಂದ್ರೆ ಮತ್ತು ಪುರಾಣಪ್ರಜ್ಞೆ ಮತ್ತು ಸಮಕಾಲೀನತೆ’ ಲೇಖಕ ನರಸಿಂಹಮೂರ್ತಿ ಹೂವಿನಹಳ್ಳಿ ಅವರ ತೌಲನಿಕ ಅಧ್ಯಯನದ ಕೃತಿ. ಆಧುನಿಕ ಕನ್ನಡ ಕಾವ್ಯ ಕಂಡ ಶ್ರೇಷ್ಠ ಕವಿಗಳಾದ ದ.ರಾ.ಬೇಂದ್ರೆ ಹಾಗೂ ಚಂದ್ರಶೇಖರ ಕಂಬಾರ ದೇಶೀ ಹಾಗೂ ಜನಪದ ಸತ್ವವನ್ನು ಅದ್ಭುತವಾಗಿ ಬಳಸಿಕೊಂಡವರು. ಜನಪದ ಸತ್ವವನ್ನು ತಮ್ಮ ಕಾವ್ಯದಲ್ಲಿ ಅತ್ಯಂತ ಸೃಜನಶೀಲವಾಗಿ ವಿಸ್ತರಿಸಿದ ಈ ಕವಿಗಳು ಕನ್ನಡ ಕಾವ್ಯದ ದಿಗಂತವನ್ನು ವಿಸ್ತರಿಸಿದರು. ದೇಶೀ ಪುರಾಣ ಲೋಕದ ಜೊತೆಗೆ ವಿಶಿಷ್ಟ ಸಂಬಂಧಗಳನ್ನು ಸ್ಥಾಪಿಸಿಕೊಂಡ ಈ ಇಬ್ಬರೂ ಕವಿಗಳಲ್ಲಿ ಪುರಾಣ ಪ್ರಜ್ಞೆ ಕೆಲಸ ಮಾಡಿರುವ ಕ್ರಮವನ್ನು ಈ ಅಧ್ಯಯನವು ಆಳವಾಗಿ ಶೋಧಿಸಲೆತ್ನಿಸಿದೆ.

About the Author

ನರಸಿಂಹಮೂರ್ತಿ ಹೂವಿನಹಳ್ಳಿ

ಡಾ. ನರಸಿಂಹಮೂರ್ತಿ ಹೂವಿನಹಳ್ಳಿ ಅವರು ಹುಟ್ಟಿದ್ದು ತುಮಕೂರು ಜಿಲ್ಲೆ, ಮಧುಗಿರಿ ತಾಲ್ಲೂಕು, ಐ.ಡಿ.ಹಳ್ಳಿ ಹೋಬಳಿಯ ಹೂವಿನಹಳ್ಳಿಯಲ್ಲಿ. ಕನ್ನಡದಲ್ಲಿ ಎಂ.ಎ ಪದವಿ ಪಡೆದು, ಬೇಂದ್ರೆ ಮತ್ತು ಕಂಬಾರರ ಕಾವ್ಯದಲ್ಲಿ ಪುರಾಣಪ್ರಜ್ಞೆ ಮತ್ತು ಸಮಕಾಲೀನತೆ ಎಂಬ ವಿಷಯದಲ್ಲಿ ಮಹಾ ಪ್ರಬಂಧ ರಚಿಸಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಕನ್ನಡ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ವರಕವಿ ಬೇಂದ್ರೆ ಕಾವ್ಯಗಳ ಅಧ್ಯಯನ(ಲೇಖನಗಳು), ಮೌನದ ಸೆರಗು(ಕವಿತೆಗಳು), ಬೇಂದ್ರೆ ಮತ್ತು ಕಂಬಾರರ ಕಾವ್ಯದಲ್ಲಿ ಪುರಾಣಪ್ರಜ್ಞೆ ಮತ್ತು ಸಮಕಾಲೀನತೆ(ತೌಲನಿಕ ಅಧ್ಯಯನ), ಕನಕದಾಸರ ಕೃತಿಗಳಲ್ಲಿ ಸಮಾನತಾ ಸಮಾಜ (ವಿಮರ್ಶಾ ಲೇಖನಗಳು), ದೇವರ ಜಾತ್ರೆ(ಕಾದಂಬರಿ), ಅರಿವಿನ ಕನ್ನಡಿ(ವಿಮರ್ಶಾ ಸಂಕಲನ), ...

READ MORE

Related Books