ಬಸವಣ್ಣ ಹಾಗು ಮಾರ್ಟಿನ್ ಲೂಥರ್ ಚಿಂತನೆಗಳ ತೌಲನಿಕ ಅಧ್ಯಯನ

Author : ಅಲ್ಲಮಪ್ರಭು ಸ್ವಾಮಿ

Pages 312

₹ 300.00




Year of Publication: 2019
Published by: ವಚನ ಅಧ್ಯಯನ ಕೇಂದ್ರ
Address: ನಾಗನೂರು ರುದ್ರಾಕ್ಷಿಮಠ, ಬೆಳಗಾವಿ
Phone: 08312407157

Synopsys

‘ಬಸವಣ್ಣ ಹಾಗು ಮಾರ್ಟಿನ್ ಲೂಥರ್’ ಚಿಂತನೆಗಳ ತೌಲನಿಕ ಅಧ್ಯಯನ ಕೃತಿಯು ಅಲ್ಲಮಪ್ರಭು ಸ್ವಾಮಿಗಳ ಅಧ್ಯಯನ ಕೃತಿಯಾಗಿದೆ. ಕೆಲವೊಂದು ವಿಚಾರಗಳು ಹೀಗಿವೆ;ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಬಸವಣ್ಣನವರು ಹಾಗೂ ಮಾರ್ಟಿನ್ ಲೂಥರ್ ಈರ್ವರೂ ಧರ್ಮಗುರುಗಳು: ಸಮಾಜ ಸುಧಾರಕರು: ದೇವರು ಮತ್ತು ಧರ್ಮದ ಹೆಸರಿನಲ್ಲಿ ನಡೆಯುವ ಅಂಧಶ್ರದ್ಧೆ ಹಾಗೂ ಶೋಷಣೆಗಳನ್ನು ವಿರೋಧಿಸಿದವರು. ಇಬ್ಬರ ಕಾಲ-ದೇಶಗಳು ಬೇರೆ ಬೇರೆಯಾಗಿದ್ದರೂ ಸಮಾಜೋ-ಧಾರ್ಮಿಕ ಅಭಿವೃದ್ಧಿಯ ಧ್ಯೇಯ ಧೋರಣೆಗಳು ಒಂದೇ ಆಗಿವೆ. ಇಬ್ಬರೂ ಸಮಾಜೋ-ಧಾರ್ಮಿಕ ಚಳುವಳಿಯ ಪ್ರಭಾವಿ ನಾಯಕರು: ವಿಚಾರವಾದಿಗಳು: ಸಾರ್ವಕಾಲಿಕ ಗುಣವುಳ್ಳವರು. ಪ್ರವೃತ್ತಿ ಮಾರ್ಗದ ಪ್ರವರ್ತಕರು: ಹಾಗೆಯೇ, ಚಿಂತನಶೀಲ ಪರಂಪರೆಯನ್ನೇ ಸೃಷ್ಟಿಸಿದವರು. ಡಾ.ಅಲ್ಲಮಪ್ರಭು ಸ್ವಾಮಿಗಳು ಅಧ್ಯಯನಶೀಲರು, ಚಿಕಿತ್ಸಕ ದೃಷ್ಟಿಯುಳ್ಳವರು; ಹಾಗೆಯೇ ಲೋಕಹಿತ ಸಾಧಕರು. ಬಸವಣ್ಣ ಹಾಗೂ ಮಾರ್ಟಿನ್ ಲೂಥರ್ ಚಿಂತನೆಗಳನ್ನು ಕುರಿತು ತಲಸ್ಪರ್ಶಿ ಅಧ್ಯಯನ ಕೈಗೊಂಡು ಈ ಪ್ರೌಢ ಪ್ರಬಂಧವನ್ನು ರಚಿಸಿದ್ದಾರೆ. ಅವರ ಕುತೂಹಲ ಪ್ರಶ್ನಾತೀತ, ಕೃತಿಯುದ್ಧಕ್ಕೂ ಅವರ ಪ್ರಾಮಾಣಿಕತೆ, ಪ್ರತಿಭೆ ಮತ್ತು ಕ್ರಿಯಾಶೀಲತೆಗಳು ಚಲ್ಲುವರಿದಿವೆ. ಅವರು ಸಂಶೋಧನೆಗಾಗಿ ಸಂಶೋಧನೆಯ ಕಾರ್ಯ ಕೈಕೊಂಡವರಲ್ಲ: ಅಗತ್ಯದ ತಳಹದಿಯೊಂದಿಗೆ ಸಂಶೋಧನೆ ನಡೆಸಿದವರು. ಹಾಗಾಗಿ, ಕೃತಿ ಅರ್ಥಪೂರ್ಣವಾಗಿದೆ: ಸ್ಮೃತಿಯಲ್ಲಿ ಚಿರಕಾಲ ಉಳಿಯುವಂತಿದೆ. ಅದರ ಪ್ರಯೋಜನವೂ ವ್ಯಾಪಕವಾಗಿದೆ. ಸೂಕ್ತಮಾಹಿತಿ, ಸೂಕ್ತ ಕ್ರಮದಿಂದಾಗಿ ನಿರ್ಣಯವೂ ಕ್ರಮಬದ್ಧವಾಗಿದೆ; ವಸ್ತುನಿಷ್ಠವಾಗಿದೆ. ನಿರೂಪಣೆಯಲ್ಲಿ ಸರಳತೆ, ಸ್ಪಷ್ಟತೆ, ಸ್ವತಂತ್ರ ಚಿಂತನೆಗಳಿವೆ. ಇಬ್ಬರೂ ಮಾನವತಾವಾದಿಗಳ ಸಾಮ್ಯ-ವೈಷಮ್ಯಗಳ ತೂಕಬದ್ಧ ಹೋಲಿಕೆಯಿಂದ ಕೃತಿಯು ಪರಿಪೂರ್ಣವಾಗಿದೆ. ಹಾಗೆಯೇ, ಮಾನವತಾವಾದ ಹಾಗೂ ಸಮಾಜವಾದಗಳ ಹಿನ್ನೆಲೆಯಲ್ಲಿ, ಇನ್ನೂ ಹೆಚ್ಚಿನ ಸಂಶೋಧನೆ ಕೈಗೊಳ್ಳುವುದಕ್ಕೆ ದಿಕ್ಸೂಚಿಯಾಗಿದೆ’ ಎಂದಿದೆ.

About the Author

ಅಲ್ಲಮಪ್ರಭು ಸ್ವಾಮಿ

ಡಾ. ಅಲ್ಲಮಪ್ರಭು ಸ್ವಾಮಿ ಅವರು ಬೆಳಗಾವಿಯ ಶಿವಬಸವನಗರದ ನಾಗನೂರು ಶ್ರೀ ರುದ್ರಾಕ್ಷಿಮಠದವರು. ಅಧ್ಯಯನಶೀಲರು. ಅನೇಕ ವಿಚಾರದಲ್ಲಿ ಪ್ರಬಂಧಗಳನ್ನು - ಉಪನ್ಯಾಸಗಳನ್ನು ಮಂಡಿಸಿದ್ದಾರೆ.   ಕೃತಿಗಳು : ಬಸವಣ್ಣ ಹಾಗೂ ಮಾರ್ಟಿನ್ ಲೂಥರ್ ಚಿಂತನೆಗಳ ತೌಲನಿಕ ಅಧ್ಯಯನ. ...

READ MORE

Related Books