ಬಂಡಾಯ ಕಾವ್ಯ ಮತ್ತು ಜಾನಪದ

Author : ಬಸವರಾಜ ಸಬರದ

Pages 113

₹ 25.00




Year of Publication: 1997
Published by: ಕರ್ನಾಟಕ ಜನಪದ ಮತ್ತು ಯಕ್ಷಗಾನ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು

Synopsys

ಬಂಡಾಯ ಕಾವ್ಯ ಮತ್ತು ಜಾನಪದ-ಎಂಬುದು ಡಾ. ಬಸವರಾಜ ಸಬರದ ಅವರ ತೌಲನಿಕ ಅಧ್ಯಯನದ ಕೃತಿ. ಬಂಡಾಯ ಕಾವ್ಯ ಪರಂಪರೆಯ ಹುಟ್ಟು, ಬೆಳವಣಿಗೆ, ಅಭಿವೃದ್ಧಿಯ ಕುರಿತ ಚಿತ್ರಣವಿದೆ. ಇದರಲ್ಲಿ ಬಂಡಾಯ ಕಾವ್ಯ ಪರಂಪರೆ, ಜನಪದ ಹಾಡುಗಬ್ಬಗಳ ಪ್ರಭಾವ, ಜನಪದ ಗೇಯತೆ-ಆಡು ನುಡಿಗಳು, ಭೂಮಿ ಜಾನಪದ, ಆಕಾಶ ಜಾನಪದ, ಸಸ್ಯ ಜಾನಪದ, ಪ್ರಾಣಿ ಜಾನಪದ, ಗ್ರಾಮ ದೇವತೆಗಳು, ಹಬ್ಬಗಳು ಮತ್ತು ಬರಗಾಲ ಮತ್ತು ಮಳೆರಾಯನ ಕುರಿತು ಈ ಕೃತಿಯು ಚಿತ್ರಣ ನೀಡಿದೆ.

About the Author

ಬಸವರಾಜ ಸಬರದ
(20 June 1954)

ಬಸವರಾಜ ಸಬರದ ಅವರು ಮೂಲತಃ ಕೊಪ್ಪಳ ಜಿಲ್ಲೆ ಯಲಬುರ್ಗ ತಾಲ್ಲೂಕಿನ ಕುಕನೂರಿನವರು. ಹುಟ್ಟಿದ್ದು 1954 ಜೂನ್‌ 20ರಂದು. ತಾಯಿ ಬಸಮ್ಮ, ತಂದೆ ಬಸಪ್ಪ ಸಬರದ. ಹುಟ್ಟೂರು ಕುಕನೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಪದವಿ ಪಡೆದರು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಇವರು ಹಲವಾರು ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ.  ಶೈಕ್ಷಣಿಕವಾಗಿ ಮಾತ್ರವಲ್ಲದೇ ದೇವದಾಸಿ ವಿಮೋಚನಾ ಹೋರಾಟ, ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ, ಅಸ್ಪೃಶ್ಯತಾ ನಿವಾರಣೆ, ದಲಿತ-ಬಂಡಾಯ ಚಳವಳಿ ಮುಂತಾದ ಸಾಮಾಜಿಕ ಹೋರಾಟಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.   ನನ್ನವರ ಹಾಡು, ಹೋರಾಟ, ...

READ MORE

Related Books