ಕಾಳಿದಾಸನ ಮೇಘದೂತ

Author : ಟಿ.ಎನ್. ವಾಸುದೇವ ಮೂರ್ತಿ

₹ 200.00




Year of Publication: 2022
Published by: ಸಾಹಿತ್ಯಲೋಕ ಪಬ್ಲಿಕೇಷನ್ಸ್
Address: # 745, 12 ನೇ ಮುಖ್ಯ ರಸ್ತೆ, 3 ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು - 560 010
Phone: 9945939436

Synopsys

ಲೇಖಕ ಟಿ.ಎನ್.ವಾಸುದೇವಮೂರ್ತಿ ಅವರ ‘ಕಾಳಿದಾಸನ ಮೇಘದೂತ’ ಕೃತಿಯು ಒಂದು ತೌಲನಿಕ ವಿಶ್ಲೇಷಣೆಯಾಗಿದೆ. ಕಾಳಿದಾಸನ ಮೇಘದೂತ ಶಾಪಗ್ರಸ್ತನಾದ ಒಬ್ಬ ಯಕ್ಷ ತನ್ನ ಮಡದಿಯಿಂದ ದೂರವಾಗಿ ಅವಳ ನೆನಪನ್ನು ನಿವೇದಿಸಿಕೊಳ್ಳುವ ಮತ್ತು ಮೇಘದ ಮೂಲಕ ಅವಳಿಗೆ ಸಂದೇಶವನ್ನು ಕಳುಹಿಸುವ ಒಂದು ಶೃಂಗಾರ ಕಾವ್ಯವಾಗಿದೆ. ಈ ಪ್ರಸಂಗವನ್ನು ತಮ್ಮ ಕನ್ನಡ ಮೇಘದೂತದಲ್ಲಿ ಒಂದು ರೂಪಕವನ್ನಾಗಿ ಬಳಸಿಕೊಳ್ಳುವ ಬೇಂದ್ರೆ ಇದಕ್ಕೊಂದು ಅಧ್ಯಾತ್ಮಿಕ ಆಯಾಮವನ್ನು ನೀಡಿದ್ದಾರೆ. ಪ್ರತಿಯೊಬ್ಬ ಮನುಷ್ಯನೂ ತನ್ನ ಅಂತರಂಗದ ಆನಂದದಿಂದ, ತನ್ನ ನಿಜಸ್ವರೂಪದಿಂದ ದೂರವಾಗಿ ದುಃಖಿಯಾಗಿದ್ದಾನೆ. ಯಕ್ಷ ತನ್ನ ಇನಿಯಳನ್ನು ಕೂಡಲು ಬಯಸುವಂತೆ ಪ್ರತಿಯೊಬ್ಬ ಮನುಷ್ಯನೂ ತನ್ನ ಅಂತರಾತ್ಮನಲ್ಲಿ, ತನ್ನ ನಿಜಸ್ವರೂಪದಲ್ಲಿ ಒಂದಾಗಲು ಹಾತೊರೆಯುತ್ತಿದ್ದಾನೆ. ಮನುಷ್ಯನಷ್ಟೇ ಅಲ್ಲ, ಸೃಷ್ಟಿಯಲ್ಲಿ ಸಕಲ ಚರಾಚರ ವಸ್ತುಗಳೂ, ಸಕಲ ಜೀವರಾಶಿಗಳೂ ಪರಮಾತ್ಮನಲ್ಲಿ ಒಂದಾಗಲು ಹಾತೊರೆಯುತ್ತಿವೆ ಎಂಬ ಧ್ವನಿ ಬೇಂದ್ರೆಯವರ ಕನ್ನಡ ಮೇಘದೂತದಲ್ಲಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಮೇಘದೂತ ಕೇವಲ ಒಂದು ಅನುವಾದವಲ್ಲ, ಕಾಳಿದಾಸನ ಅನುಸೃಷ್ಟಿಯೂ ಅಲ್ಲ. ಇದು ಕನ್ನಡದ ನುಡಿಯಲ್ಲಿ ಕಾಳಿದಾಸನಿಗೆ ಮರುಜನ್ಮವನ್ನು ದಯಪಾಲಿಸುವ, ಹೊಸ ಧ್ವನಿಯನ್ನು ನೀಡುವ ಪ್ರಯತ್ನವಾಗಿದೆ.

About the Author

ಟಿ.ಎನ್. ವಾಸುದೇವ ಮೂರ್ತಿ
(30 December 1974)

ಟಿ.ಎನ್.ವಾಸುದೇವ ಮೂರ್ತಿ ಅವರು ಕಿ.ರಂ.ನಾಗರಾಜ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ಅಲ್ಲಮ ಪ್ರಭುವಿನ ವಚನಗಳ ದಾರ್ಶನಿಕ ಮರುಚಿಂತನೆಯ ವಿಭಿನ್ನ ಸ್ವರೂಪಗಳು ಎಂಬ ಮಹಾಪ್ರಬಂಧಕ್ಕೆ ಹಂಪಿ ಕನ್ನದ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪ್ರಶಸ್ತಿ ಸಂದಿದೆ. ಬೆಂಗಳೂರು ವಿವಿಯಲ್ಲಿ ಕನ್ನಡ ಎಂ.ಎ (ತೌಲನಿಕ ಸಾಹಿತ್ಯ) ಪದವಿಯನ್ನು ಪಡೆದ ಮೇಲೆ ಬೆಂಗಳೂರಿನ ಹಲವು ಪ್ರಮುಖ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು. ನ್ಯಾಷನಲ್  ಕಾಲೇಜು, ಜೈನ್ ವಿಶ್ವವಿದ್ಯಾಲಯ ಕಾವ್ಯಮಂಡಲ ಮೊದಲಾದ ಕನ್ನಡ ಸ್ನಾತಕೋತ್ತರ ಕೇಂದ್ರಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಎಂ.ಎ. ಹಾಗೂ ಎಂ.ಫಿಲ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಓಶೋ ನೇರ ಶಿಷ್ಯರಾದ ಸ್ವಾಮಿ ಆನಂದ್ ಪ್ರಭಾವದಿಂದ ದೀಕ್ಷೆ ...

READ MORE

Related Books