ಸಾಹಿತ್ಯ ಮತ್ತು ತತ್ವಜ್ಞಾನ

Author : ಕೆ. ಕೇಶವ ಶರ್ಮ

Pages 424

₹ 400.00




Year of Publication: 2021
Published by: ದೇಸಿ ಪ್ರಕಾಶನ
Address: , # 121,13ನೇ ಮುಖ್ಯರಸ್ತೆ, ಎಂ.ಸಿ.ಲೇಔಟ್, ವಿಜಯನಗರ, ಬೆಂಗಳೂರು-560040

Synopsys

ಲೇಖಕ ಡಾ. ಕೆ. ಕೇಶವ ಶರ್ಮ ಅವರ ಕೃತಿ-ಸಾಹಿತ್ಯ ಮತ್ತು ತತ್ವಜ್ಞಾನ. ಎಲ್ಲ ಜ್ಞಾನಶಾಖೆಗಳಿಗೆ ತತ್ವಶಾಸ್ತ್ರವೇ ಮೂಲ. ತತ್ವಶಾಸ್ತ್ರದ ವಿಷಯ ವಸ್ತು ತತ್ವಜ್ಞಾನ. ಸಾಹಿತ್ಯವು ಸಹ ತತ್ವಜ್ಞಾನದ ಪ್ರಮುಖ ಭಾಗವೆ. ತತ್ವಜ್ಞಾನವು ಬದುಕಿನ ವಾಸ್ತವತೆ, ಬದುಕಿನ ವಿಧಾನ, ಮೌಲ್ಯಗಳನ್ನು, ಬದುಕಿನ ಸಾರ್ಥಕತೆ, ಅದರ ಸಿದ್ಧಿ ಇತ್ಯಾದಿ ಕುರಿತು ಚರ್ಚಿಸುತ್ತದೆ. ಆದರೆ, ಸಾಹಿತ್ಯವು ಬದುಕಿನ ರಂಜನೆಯೂ, ಸಂದೇಶವಾಗಿಯೂ, ಸಾಮಾಜಿಕ ವಿದ್ಯಮಾನಗಳ ಬಿಂಬವೂ ಆಗುತ್ತದೆ. ಇಂತಹ ಚಿಂತನೆಯ ಎಳೆಗಳ ಮೂಲಕ ಚರ್ಚಿಸಿರುವ ಬರಹಗಳನ್ನು ಈ ಕೃತಿ ಒಳಗೊಂಡಿದೆ. ಸಾಹಿತ್ಯ ಹಾಗೂ ತತ್ವಜ್ಞಾನದ ಸಾಮಿಪ್ಯ, ವಿರೋಧಾಭಾಸಗಳನ್ನು ಸ್ಪಷ್ಟಪಡಿಸಿದೆ. ತೌಲನಿಕ ಅಧ್ಯಯನವು ಈ ಕೃತಿಯ ವಿಷಯ ವಸ್ತು. 

About the Author

ಕೆ. ಕೇಶವ ಶರ್ಮ

ಲೇಖಕ ಕೇಶವ ಶರ್ಮ ಕೆ. ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಡ್ಯನಡ್ಕದ ಹತ್ತಿರವಿರುವ ಕೋಡಂದೂರಿನವರು. ತಂದೆ ದಿವಂಗತ ಕೆ.ಕೆ. ನರಸಿಂಹಭಟ್ಟ, ತಾಯಿ ಕೆ.ಎನ್.ಸೀತಾ. ಲೇಖಕಿ ಸಬಿತಾ ಬನ್ನಾಡಿ ಕೇಶವ ಶರ್ಮ ಅವರ ಬಾಳ ಸಂಗಾತಿ. ಯಕ್ಷಗಾನದತ್ತ ಒಲವಿದ್ದ ಕೇಶವ ಶರ್ಮ ಅವರು ಹವ್ಯಾಸಿ ಯಕ್ಷಗಾನದ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದಾರೆ. ಸದ್ಯ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸಿಂಗನ ಮನೆ ಗ್ರಾಮ ಶಾಂತಿನಗರದಲ್ಲಿ ನೆಲೆಸಿದ್ದಾರೆ. ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಕೇಶವ ಶರ್ಮ ಅವರು ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಹೆಣ್ಣಿನ ಪರಿಕಲ್ಪನೆ ವಿಷಯದಡಿ ಪಿಎಚ್.ಡಿ ...

READ MORE

Related Books