ಗೋಜಗಾಮೃತ

Author : ಸೃಜನ್ ಗಣೇಶ್ ಹೆಗಡೆ

Pages 55

₹ 46.00




Year of Publication: 2013
Published by: ಶ್ರೀರಾಮಾರ್ಪಣ ಪ್ರಕಾಶನ
Address: ಮಾರುತಿಪುರ (ಅಂ), ಹೊಸನಗರ (ತಾ) ಶಿವಮೊಗ್ಗ (ಜಿ)-577412
Phone: 9448814257

Synopsys

ಲೇಖಕ ಸೃಜನ್ ಗಣೇಶ್ ಹೆಗಡೆ ಅವರ ಯಕ್ಷಗಾನ ಪ್ರಸಂಗದ ಕೃತಿ-ಗೋಜಗಾಮೃತ.   ತಾಯಿಯಂತೆಯೆ ಜಗತ್ತಿಗೆ ಹಾಲನ್ನೀವ ಗೋವಿನ ಅಮೃತ ಸವಿಯ ಅರ್ಥದಲ್ಲಿ ಈ ಯಕ್ಷಗಾನ ಪ್ರಸಂಗವು ಮೂಡಿದ್ದು, ಇಡೀ ಕಥನವು ನವರಸಗಳನ್ನೂ ಮೇಳೈಸಿಕೊಂಡು ರೂಪುಗೊಂಡಿದೆ. 
  ಮಾನುಷ ಪ್ರಜ್ಞೆಯು ಮೂಕ ಪ್ರಾಣಿಯೊಂದಿಗೆ ಹೊಂದಿದ ಮೂಕ ಸಂವೇದನೆಯ ಒಳನೋಟದಲ್ಲಿ ಈ ಕಥನವು ತೆರೆಯುತ್ತಲೆ ಇಡೀ  ಕಥನದಲ್ಲಿ ಮೌನದ ದನಿಯೂ ವಿಶೇಷವಾಗಿ ಕಾಣಸಿಗುತ್ತದೆ. ಗೋವಿನ ಮಹಿಮೆಯನ್ನೂ ಲೋಕಪ್ರಜ್ಞೆಯೊಂದಿಗೆ ಮೇಳೈಸಿ ರಚನೆಗೊಂಡ ಈ ಪ್ರಸಂಗದ ಕಥಾ ಸಂವಿಧಾನ ಸಹೃದಯಿಗಳ ಮನ ಮುಟ್ಟುತ್ತದೆ. 200ಕ್ಕೂ ಮಿಕ್ಕಿ ಇರುವ ಶುದ್ಧ ಯಕ್ಷಗಾನ ಮಟ್ಟಿನ ಪದ್ಯಗಳು ಇಲ್ಲಿ ಮೇಳೈಸಿವೆ.

About the Author

ಸೃಜನ್ ಗಣೇಶ್ ಹೆಗಡೆ
(26 September 1997)

ಸೃಜನ್ ಗಣೇಶ ಹೆಗಡೆ ಅವರ ಕಾವ್ಯನಾಮ -ಸೃಜನಾಲೋಚನ. ತಂದೆ- ಶ್ರೀಧರ್ ಹೆಗಡೆ ತಾಯಿ- ಜಯಲಕ್ಷ್ಮಿ ಹೆಗಡೆ.  ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾರುತಿಪುರ ಸಮೀಪದ ಗುಬ್ಬಿಗ ಗ್ರಾಮದವರು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು.ಯಕ್ಷಗಾನ ಭಾಗವತಿಕೆ, ತತ್ವಶಾಸ್ತ್ರ, ಅಧ್ಯಾತ್ಮ ವೈಚಾರಿಕತೆ, ವಿಮರ್ಶೆ ಕ್ಷೇತ್ರದಲ್ಲಿ ಆಸಕ್ತಿ. ಇದೆ.  ಕೃತಿಗಳು- ಗೊಂಬೆಯ ಸಂಕಟ, ರಾಧಾಸ್ನೇಹಿ, ಅನಂತ ಸೋಪಾನ(ಕವನ ಸಂಕಲನ) ಆಪ್ತ ಬಂಧನ, ಗೋಜಗಾಮೃತ (ಯಕ್ಷಗಾನ ಪ್ರಸಂಗಗಳು) . ...

READ MORE

Related Books