ಜಾಂಬವತಿ ಕಲ್ಯಾಣ

Author : ಬಿದರಹಳ್ಳಿ ನರಸಿಂಹಮೂರ್ತಿ

Pages 60

₹ 5.00




Year of Publication: 1996
Published by: ಅನಿಮಿಪ ಪ್ರಕಾಶನ
Address: ದುರ್ಗಿಗುಡಿ, ಹೊನ್ನಾಳಿ, ಶಿವಮೊಗ್ಗ - 577217

Synopsys

‘ಜಾಂಬವತಿ ಕಲ್ಯಾಣ’ ಲೇಖಕ ಬಿದರಹಳ್ಳಿ ನರಸಿಂಹಮೂರ್ತಿ ಅವರು ಸಂಪಾದಿಸಿರುವ ಯಕ್ಷಗಾನ ಪ್ರಸಂಗ. ಜಾನಪದ ಸಾಹಿತ್ಯವನ್ನು ಬೆಳಕಿಗೆ ತರುವಾಗ ಮೂಲಕ್ಕೆ ಚ್ಯುತಿಬಾರದಂತೆ ಸಂಪಾದಿಸುವುದು ಅಗತ್ಯ. ಆದರೆ ಇಷ್ಟರಿಂದಲೇ ಜನಪದ ಸಾಹಿತ್ಯ ಸಾರ್ಥಕಗೊಳ್ಳುವುದಿಲ್ಲ. ಅದರ ಮೂಲ ಸತ್ವವನ್ನು ಹಿಡಿದಿಡುವುದು ಜೊತೆಗೆ ಅದರಂತಾರ್ಥವನ್ನು ಇಂಗಿತವನ್ನು ಇವತ್ತಿನ ತುರ್ತಿಗೆ ಒಗ್ಗಿಸಿಕೊಳ್ಳುವುದು ಆಧುನಿಕ ಯುಗದ ಅವಶ್ಯಕತೆ ಆಗಿದೆ. ಹಾಗೇ ಮಾಡಿದಾಗ ಜನಪದ ಸಾಹಿತ್ಯ ಸಾರ್ಥಕ ಪಡೆಯುತ್ತದೆ. ಆಧುನಿಕ ಬದುಕಿಗೆ ಸೌಂದರ್ಯ ಲಭಿಸುತ್ತದೆ. ಅಂತಹ ಸೌಂದರ್ಯ ಒದಗಿಸುವ ನಿಟ್ಟಿನಲ್ಲಿ ಲೇಖಕ ಬಿದರಹಳ್ಳಿ ನರಸಿಂಹಮೂರ್ತಿ ಅವರು ಜಾಂಬವತಿ ಕಲ್ಯಾಣವೆಂಬ ಯಕ್ಷಗಾನ ಪ್ರಸಂಗವನ್ನು ಸುಂದರವಾಗಿ ಸಂಪಾದಿಸಿದ್ದಾರೆ.

About the Author

ಬಿದರಹಳ್ಳಿ ನರಸಿಂಹಮೂರ್ತಿ
(05 February 1950)

ಕವಿ, ಕತೆಗಾರ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ, ಸಂಪಾದಕ, ಅನುವಾದಕ ಹೀಗೆ ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಬಿದರಹಳ್ಳಿ ನರಸಿಂಹಮೂರ್ತಿ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನಲ್ಲಿ. ಇಂಗ್ಲಿಷ್ ಉಪನ್ಯಾಸಕರಾಗಿ ಸರ್ಕಾರಿ ಸೇವೆಗೆ ಸೇರಿ ಪ್ರಿನ್ಸಿಪಲ್ ಆಗಿ ನಿವೃತ್ತರಾಗಿ ಹೊನ್ನಾಳಿಯಲ್ಲೇ ನೆಲೆಸಿದ್ದ ಬಿದರಹಲ್ಳಿಯವರು ಹೆಚ್ಚೂ ಕಡಿಮೆ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೃಷಿಮಾಡಿದ್ದಾರೆ. ಅವರ ಪ್ರಕಟಿತ ಕೃತಿಗಳು:  ಕಾವ್ಯ: ಕಾಡಿನೊಳಗಿದೆ ಜೀವ(1979), ಸೂರ್ಯದಂಡೆ(1996), ಅಕ್ಕಿಕಾಳು ನಕ್ಕಿತಮ್ಮ(2001),  ಭಾವಕ್ಷೀರ(2006), ಅಕ್ಕನೆಂಬ ಅನುಭಾವಗಂಗೆ(2017) ಕಥಾಸಂಕಲನ: ಶಿಶು ಕಂಡ ಕನಸು(1993, 2005), ಹಂಸೆ ಹಾರಿತ್ತು(2000, 2010), ನೀರಾಳ ಸೊಲ್ಲು(2017), ಸಸಿಯ ...

READ MORE

Related Books