ಮಂಜಯ್ಯ ಗಣಪತಿ ಶೇಣ್ವಿಯವರ ಎರಡು ಪ್ರಸಂಗಗಳು

Author : ಶಾ.ಮಂ. ಕೃಷ್ಣರಾಯ

Pages 96

₹ 80.00




Year of Publication: 2019
Published by: ಕರ್ನಾಟಕ ಯಕ್ಷಗಾನ ಅಕಾಡೆಮಿ
Address: 2ನೇ ಮಹಡಿ, ಕನ್ನಡ ಭವನ, ಜೆ.ಸಿ ರಸ್ತೆ, ಬೆಂಗಳೂರು- 560002.

Synopsys

ʼಮಂಜಯ್ಯ ಗಣಪತಿ ಶೇಣ್ವಿಯವರ ಎರಡು ಪ್ರಸಂಗಗಳುʼ ಪ್ರಸಂಗ ಕೃತಿಯನ್ನು ಲೇಖಕ ಶಾ, ಮಂ. ಕೃಷ್ಣರಾಯ ರಚಿಸಿದ್ದಾರೆ. ಈ ಕೃತಿಯು ರತ್ನಾವತಿ ಕಲ್ಯಾಣ ಮತ್ತು ಉಷಾ ಪರಿಣಯ ಎಂಬ ಎರಡು ಪ್ರಸಂಗಗಳನ್ನು ಹೊಂದಿದೆ. ಇವುಗಳಲ್ಲಿ ರತ್ನಾವತಿ ಕಲ್ಯಾಣವು ಕರ್ಣ- ರತ್ನಾವತಿಯೆಂದು ಹಿಂದೆ ಪ್ರಸಿದ್ದವಾದ ಪ್ರಸಂಗವೊಂದರ ಕಥೆಯನ್ನು ಆಧರಿಸಿದೆ. ಕರ್ಣನ ವಿವಾಹ ವೃತ್ತಾಂತವನ್ನು ರಂಜಕವಾಗಿ ಹೇಳುತ್ತದೆ. ಉಷಾಪರಿಣಯ ಪ್ರಸಂಗವು ಹರಿವಂಶ ಪುರಾಣದ ಪ್ರಸಿದ್ದ ಕಥೆಯನ್ನು ಆಧರಿಸಿದೆ. ಸಹಜವಾದ ಕವಿತ್ವಶಕ್ತಿಯಿದ್ದು ಗಾಮ್ಯ ಸೊಗಡಿದೆ. ಕನ್ನಡ ಸಾಹಿತ್ಯ ನಂದನದಲ್ಲಿ ವಿಕಸನಗೊಂಡ ವಿವಿಧ ಛಂದೋಕುಸುಮಗಳ ಗ್ರಹಿಕೆಯಿಂದ ಸಿದ್ದಗೊಂಡ ಪದ್ಯಗಳ ಚೌಕಟ್ಟನಲ್ಲೇ ಇಲ್ಲಿನ ಆಶುಸಂಭಾಷಣೆಗಳು ನಡೆಯುತ್ತವೆ.

About the Author

ಶಾ.ಮಂ. ಕೃಷ್ಣರಾಯ
(01 June 1942)

ಶಾ.ಮಂ. ಕೃಷ್ಣರಾವ್ ಮೂಲತಃ ಬೆಳಗಾವಿಯವರು. ತಂದೆ- ಮಂಜುನಾಥ ಶ್ಯಾನಭಾಗ, ತಾಯಿ- ಗಂಗಾದೇವಿ. ಪ್ರಾಥಮಿಕ -ಪ್ರೌಢಶಿಕ್ಷಣವನ್ನು ಸಿದ್ಧಾಪುರದಲ್ಲಿಪಡೆದರು. ಉದ್ಯೋಗದ ನಿಮಿತ್ತ ತಂದೆಯವರು ಗೋವಾಗೆ ವಾಸ್ತವ್ಯ ಬದಲಿಸಿದ್ದರಿಂದ ಇವರ ಕಾಲೇಜು ಶಿಕ್ಷಣ ಗೋವಾದಲ್ಲಿ ಮುಂದುವರೆಯಿತು. ಸಿದ್ದಾಪುರ ತಾಲೂಕಿನ ಅಳವಳ್ಳಿ ಶಾಲೆಯಲ್ಲಿ  ಶಿಕ್ಷಕರಾಗಿ ಕೆಲಕಾಲ ಸೇವೆ ಸಲ್ಲಿಸಿದ್ದರು.  ಬಾಹ್ಯವಿದ್ಯಾರ್ಥಿಯಾಗಿ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ, ಬಿ.ಎಡ್ ಪದವಿ ಪೂರ್ಣಗೊಳಿಸಿದರು. ಗೋವಾದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾಗಿ ಸೇರಿ ಜ್ಯೂನಿಯರ್ ಕಾಲೇಜು ಮಟ್ಟದ ತರಗತಿಗಳಿಗೂ ಬೋಧಿಸಿ, 41 ವರ್ಷಗಳ ಸೇವೆಯ ನಂತರ ನಿವೃತ್ತಿಯಾದರು. ಗೋವಾದಲ್ಲಿ ಕನ್ನಡ ಕಟ್ಟುವ ಕೆಲಸವನ್ನು ಒಂದು ದೀಕ್ಷೆ ಎಂಬಂತೆ ಸ್ವೀಕರಿಸಿದ್ದು, ಅಲ್ಲಿದ್ದ ಕೇವಲ 813 ಕನ್ನಡಿಗರಿಗೆ (1961 ಜನಗಣತಿ ...

READ MORE

Related Books