ಯಕ್ಷಗಾನ ಪಂಚರಾತ್ರ

Author : ಬಿ.ಎಚ್. ಶ್ರೀಧರ

Pages 34

₹ 40.00




Year of Publication: 2020
Published by: ಕರ್ನಾಟಕ ಯಕ್ಷಗಾನ ಅಕಾಡೆಮಿ
Address: ಬೆಂಗಳೂರು.

Synopsys

ʼಯಕ್ಷಗಾನ ಪಂಚರಾತ್ರ’ ಎಂಬುದು  ಭಾಸನ ಪಂಚರತ್ನ ನಾಟಕದ ಯಕ್ಷಗಾನ ರೂಪವಾಗಿದೆ. ಲೇಖಕ ಪ್ರೊ. ಬಿ.ಎಚ್‌ ಶ್ರೀಧರ ರಚಿಸಿದ್ದಾರೆ. ಕೃತಿಯಲ್ಲಿ ಉಪೋದ್ಘಾತ, ಪ್ರಸ್ತಾವನೆ. ಪಂಚರಾತ್ರ ಪ್ರಸಂಗ ಹಾಗೂ ಅದರಡಿಯಲ್ಲಿ ಅಂಕ ಒಂದು, ಅಂಕ ಎರಡು ಮತ್ತು ಅಂಕ ಮೂರು ಅಧ್ಯಾಯಗಳನ್ನು ಹೊಂದಿದೆ. ಭಾಸನ ನಾಟಕಗಳೆಂದು ಪ್ರಸಿದ್ಧವಾಗಿರುವ ನಾಟಕಗಳು ಯಕ್ಷಗಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ, ಈ ಕೃತಿಯು ಮಹತ್ವಪೂರ್ಣ ಪಾತ್ರ ವಹಿಸುತ್ತದೆ. ಗೀತ, ನೃತ್ಯ, ಅಂಗಾಭಿನಯ, ವೇಷ, ವಾದ್ಯ, ಸಂವಾದಗಳು ಸಮಕಾಲೀನವಾಗಿ ಬುಡದಿಂದ ತುದಿಯವರೆಗೆ ಭಾವಾಭಿವ್ಯಕ್ತಿಯನ್ನು ಮಾಡುತ್ತಾ ಹೋಗುವ ಅದ್ವಿತೀಯ ರಸರಚನೆ ಎನಿಸಿದ ಯಕ್ಷನಾಟಕವು ಭರತಹೃದಯದ ಸಾರಭೂತ ‘ಕಲಾಯೋಜನೆ’ ಎಂದು ಕೃತಿಯ ಪ್ರಸ್ತಾವನೆಯಲ್ಲಿ ಗ್ರಂಥಕರ್ತರು ವಿವರಿಸಿದ್ದಾರೆ.

About the Author

ಬಿ.ಎಚ್. ಶ್ರೀಧರ
(24 April 1918 - 24 April 1990)

ಕವಿ, ಅನುವಾದಕ, ಪ್ರಬಂಧಕಾರ ಶ್ರೀಧರರು ಹುಟ್ಟಿದ್ದು ದ. ಕನ್ನಡ ಜಿಲ್ಲೆಯ ಬಿಜೂರು ಗ್ರಾಮದ ಬವಲಾಡಿಯಲ್ಲಿ. ತಂದೆ ಸೀತಾರಾಮ ಹೆಬ್ಬಾರರು, ತಾಯಿ ನಾಗಮ್ಮ. ಬಾರ್ಕೂರಿನಿಂದ ಬವಲಾಡಿಗೆ ಬಂದು ನೆಲೆಸಿದ ವಂಶಸ್ಥರು. ಪ್ರಾಥಮಿಕದಿಂದ ಹೈಸ್ಕೂಲು ವರೆಗೆ ಸೊರಬ, ಸಾಗರದಲ್ಲಿ ವಿದ್ಯಾಭ್ಯಾಸ, ಇಂಟರ್ ಮೀಡಿಯೆಟ್‌ಗೆ ಸೇರಿದ್ದು ಮೈಸೂರು. ಊಟಕ್ಕೆ ವಾರಾನ್ನ, ಪುಸ್ತಕಗಳಿಗೆ ಗ್ರಂಥಾಲಯ, ಫೀಸಿಗೆ ಸ್ಕಾಲರ್‌ಶಿಪ್, ಇಂಟರ್ ಮೀಡಿಯೆಟ್ ಮುಗಿಸಿದರು. ದೊರೆತ ಶಿಷ್ಯ ವೇತನ, ಮನೆ ಪಾಠ ಹೇಳಿ ತಂದೆಗೂ ಹಣ ಸಹಾಯ. ಬಿ.ಎ. ಆನರ್ಸ್‌ ಪಾಸು. ಹಲವಾರು ಪದಕ ಬಹುಮಾನ ಗಳಿಕೆ ಸಂತಸ. ಆದರೆ ಎಂ.ಎ. ಓದಲು ಹಣದ ಅಡಚಣೆಯಿಂದ ಬೆಂಗಳೂರಿನ ಪ್ರೆಸ್ ...

READ MORE

Related Books