ವಿರೂಪಣ್ಣ ಕವಿಯ ಭದ್ರಕಾಳಿ ವಿವಾಹ

Author : ವೀರೇಶ ಬಡಿಗೇರ

Pages 184

₹ 120.00




Year of Publication: 2017
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ-583276
Phone: 08022372388

Synopsys

’ಭದ್ರಕಾಳಿ ವಿವಾಹ’ ಅಥವಾ ’ವೀರಭದ್ರ ಕಲ್ಯಾಣ’ ಕೃತಿಯು ಪ್ರಾದೇಶಿಕ ಭಾಷೆ. ಸಾಹಿತ್ಯ ಹಾಗೂ ಸಂವೇದನೆ ದೃಷ್ಟಿಯಿಂದ ಮಹತ್ವದ್ದು. ಶಿಷ್ಟ ಕಾವ್ಯಗಳ ರಚನೆ ಹಾಗೂ ಅವುಗಳ ಚರ್ಚೆಯ ಭರಾಟೆಯಲ್ಲಿ ಪ್ರಾದೇಶಿಕವಾದ ಇಂತಹ ರಚನೆಗಳು ಅಲಕ್ಷ್ಯಕ್ಕೆ ಒಳಗಾಗಿವೆ. ಕೃತಿಯ ಕರ್ತೃ ವಿರೂಪಣ್ಣ, ಕವಿ ಹರಿಹರನಿಂದ ಪ್ರೇರಣೆ ಪಡೆದಿದ್ದರೂ, ತನ್ನ ಕಾಲದ ಸೂಕ್ಷ್ಮ ಸಂವೇದನೆಯನ್ನು ಕಾವ್ಯವಾಗಿಸಿದ್ದಾನೆ. ವಸ್ತು, ರಚನೆ, ವಸ್ತು, ಕಥನ, ಶೈಲಿ ದೃಷ್ಟಿಯಿಂದ ಈ ಕೃತಿಯು ವಿಶಿಷ್ಟತೆ ಪಡೆದಿದೆ. ಗಿರಿಜಾ ಕಲ್ಯಾಣ ಕೃತಿಯಲ್ಲಿ ಶಿವ ಹಾಗೂ ವೀರಭದ್ರ ಅವರು ಗಿರಿಜೆಯ ಸಾವಿಗೆ ಉತ್ತರ ನೀಡಿದ್ದರೆ, ಭದ್ರಕಾಳಿ ಹಾಗೂ ವೀರಭದ್ರರ ಮೂಲಕ ವಿರೂಪಣ್ಣ ಕವಿಯು ಪ್ರತ್ಯುತ್ತರ ನೀಡುತ್ತಾನೆ. ಸ್ಥಳೀಯ ಸಾಂಸ್ಕೃತಿಕ ಅನನ್ಯತೆಯ ದೃಷ್ಟಿಯಿಂದ ಈ ಕೃತಿ ಮಹತ್ವದ್ದು.

About the Author

ವೀರೇಶ ಬಡಿಗೇರ
(04 April 1966)

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ವೀರೇಶ ಬಡಿಗೇರ, ಕನ್ನಡದ ಹಸ್ತಪ್ರತಿ ತಜ್ಞರಲ್ಲಿ ಒಬ್ಬರು. 1966 ಏಪ್ರಿಲ್‌ 4 ರಂದು ಜನಿಸಿದರು. ಎಂ. ಎ., ಪಿಎಚ್.ಡಿ. ಹಾಗೂ ಬಿ.ಇಡ್, ಡಿಪ್ಲೊಮಾ ಇನ್ ಎಪಿಗ್ರಾಫಿ ಮಾಡಿದ್ದು, ಕನ್ನಡ ಸಾಹಿತ್ಯ, ಸಂಸ್ಕೃತಿ, ಜಾನಪದ, ಸಂಗೀತ, ತಂತ್ರಜ್ಞಾನ ಆಸಕ್ತಿ ಕ್ಷೇತ್ರಗಳು. 28 ವರ್ಷ ಕಾಲ ಬೋಧನೆ ಹಾಗೂ ಸಂಶೋಧನೆಯ ಅನುಭವ ಇದೆ. ಬಾಗಲಕೋಟೆಯ  ಪಿ. ಎಂ. ನಾಡಗೌಡಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ  ಅರೆಕಾಲಿಕ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದರು. 1992 ರಿಂದ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಶೋಧನ ಸಹಾಯಕರಾಗಿ ಕೆಲಸಕ್ಕೆ ಸೇರಿದರು. 1996 ಆಗಸ್ಟನಿಂದ ಹಸ್ತಪ್ರತಿಶಾಸ್ತ್ರ ವಿಭಾಗದಲ್ಲಿಉಪನ್ಯಾಸಕರಾದರು. 1996ರಲ್ಲಿ ಉತ್ತರ ಕರ್ನಾಟಕದ ಜಾನಪದ ...

READ MORE

Related Books