ವಿಷ್ಣಶರ್ಮನ ಪಂಚತಂತ್ರ ಕಥೆಗಳ ಕನ್ನಡ ಸಾರಸಂಗ್ರಹ

Author : ವೀರೇಶ ಬಡಿಗೇರ

Pages 190

₹ 120.00




Year of Publication: 2015
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ-583 276
Phone: 08022372388

Synopsys

ಕನ್ನಡದಲ್ಲಿ ದುರ್ಗ ಸಿಂಹನ ಪಂಚತಂತ್ರವೇ ಹೆಚ್ಚು ಬಳಕೆಯಲ್ಲಿದೆ. ಆದರೆ, ವಿಷ್ಣುಶರ್ಮನ ಸಂಪ್ರದಾಯಕ್ಕೆ ಸೇರಿದ ಈ ಕೃತಿಯು ಕನ್ನಡದಲ್ಲಿ ಮೊದಲ ಬಾರಿಗೆ ಪ್ರಕಟವಾಗುತ್ತಿದೆ. ಕನ್ನಡದ ಜನ-ಮನ-ಮಾತಿನ ಉಳಿಕೆ-ಬೆಳಕೆ, ಆತಂಕ ಅನುಭವಗಳಾಗಿ ಇಲ್ಲಿಯ ಕಥಾಜಗತ್ತು ಕಾಣುತ್ತದೆ. ಬಳ್ಳಾರಿ ಜಿಲ್ಲೆಯ ಕುರುಗೋಡು ಸಮೀಪದ ಮಿಂಚೇರಿ ಗ್ರಾಮದ ಬಸವನೆಂಬ ಲಿಪಿಕಾರ ಇದನ್ನು ಲಿಪೀಕರಿಸಿದ್ದು, ಉತ್ತರ ಕರ್ನಾಟಕದ ಭಾಷೆ ಹಾಗೂ ಸೊಗಡು ಇಲ್ಲಿಯ ಕಥೆಗಳಲ್ಲಿ ನಲಿದಾಡುತ್ತಿದೆ. ಪ್ರತಿ ಕಥೆಯೂ ಚಲನಶೀಲ ಪಠ್ಯವಾಗಿ ಕಾಣುತ್ತದೆ. ಗ್ರಂಥ ಸಂಪಾದನೆಯ ಶುದ್ಧ-ಅಶುದ್ಧ ಕಲ್ಪನೆಗಳನ್ನು ಮೀರಿ ಹೆಚ್ಚು ಸೃಜನಾತ್ಮಕವಾಗಿ ದೇಸೀಯತೆಯನ್ನು ಎತ್ತಿ ಹಿಡಿಯುವ ಸಂಪಾದಕರ ಕ್ರಮವೂ ಹೊಸ ಪ್ರಯೋಗಗಳನ್ನು ಗರ್ಭೀಕರಿಸಿಕೊಂಡಿದೆ.

About the Author

ವೀರೇಶ ಬಡಿಗೇರ
(04 April 1966)

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ವೀರೇಶ ಬಡಿಗೇರ, ಕನ್ನಡದ ಹಸ್ತಪ್ರತಿ ತಜ್ಞರಲ್ಲಿ ಒಬ್ಬರು. 1966 ಏಪ್ರಿಲ್‌ 4 ರಂದು ಜನಿಸಿದರು. ಎಂ. ಎ., ಪಿಎಚ್.ಡಿ. ಹಾಗೂ ಬಿ.ಇಡ್, ಡಿಪ್ಲೊಮಾ ಇನ್ ಎಪಿಗ್ರಾಫಿ ಮಾಡಿದ್ದು, ಕನ್ನಡ ಸಾಹಿತ್ಯ, ಸಂಸ್ಕೃತಿ, ಜಾನಪದ, ಸಂಗೀತ, ತಂತ್ರಜ್ಞಾನ ಆಸಕ್ತಿ ಕ್ಷೇತ್ರಗಳು. 28 ವರ್ಷ ಕಾಲ ಬೋಧನೆ ಹಾಗೂ ಸಂಶೋಧನೆಯ ಅನುಭವ ಇದೆ. ಬಾಗಲಕೋಟೆಯ  ಪಿ. ಎಂ. ನಾಡಗೌಡಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ  ಅರೆಕಾಲಿಕ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದರು. 1992 ರಿಂದ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಶೋಧನ ಸಹಾಯಕರಾಗಿ ಕೆಲಸಕ್ಕೆ ಸೇರಿದರು. 1996 ಆಗಸ್ಟನಿಂದ ಹಸ್ತಪ್ರತಿಶಾಸ್ತ್ರ ವಿಭಾಗದಲ್ಲಿಉಪನ್ಯಾಸಕರಾದರು. 1996ರಲ್ಲಿ ಉತ್ತರ ಕರ್ನಾಟಕದ ಜಾನಪದ ...

READ MORE

Related Books