Poem

ಅಮೃತ ಬಿಂದು

ಸಿಂಧೂರ ಬಿಂದು ಮೈ ಮರೆತು
ಕಣ್ಣಂಚಿನ ಕಾಡಿಗೆಯಲಿ ಸೆಳೆಯುತಿದೆ
ನಿ ತೊಟ್ಟ ಓಲೆಯೂ ನನ್ನ
ಪದೆ ಪದೆ ಕೆರಳಿಸುತಿದೆ

ಬಳಕುವ ನಡುವು
ಒಯ್ಯಾರದಿ ಸೇಳೆಯುತಿದೆ
ಒಮ್ಮೆಯಾದರೂ ನಯವಾಗಿ
ಮದ್ಯಮ ಚಂದ್ರಿಕೆಯ ಸ್ಪರ್ಶಿಸೆನ್ನುತಿದೆ

ನೀಳ ಕೇಶವದು ಮೆಲ್ಲನೆ ಸರಿದು
ಹುಸಿ ನಗೆಯ ಬಿರುತಿದೆ
ಮುಂಗೊಪವ ತೋರುತಲಿ ಮೂಗುತಿ
ಮತ್ತೆ ಮತ್ತೆ ಕೆದಕಿ ಯುದ್ದ ಸಾರುತಿದೆ

ತಿಲೊತ್ತಮೆಯರು ಹಿಗಳೆವರು
ನಿನ್ನ ನಗುವ ಕಂಡು
ಸಂಗೀತದ ಅಮೃತವ ನೀಡಲು
ಚೈತನ್ಯದ ಹಾದಿ ಹಿಡಿದಿವೆ


- ಕಿರಣ ಡಿ ಕೆ

ಕಿರಣ ಡಿ. ಕಳಸ

ಕವಿ ಕಿರಣ ಡಿ. ಕಳಸ ಅವರು ಮೂಲತಃ ಬಾಗಲಕೋಟ ಜಿಲ್ಲೆಯ ಗುಡೂರ ಗ್ರಾಮದವರು. ಪ್ರಸ್ತುತ ಕೋ ಅಪ್ ಕ್ರೆಡಿಟ್ ಸೊಸೈಟಿ ಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಕವಿತೆ, ಬರಹಗಳು ವಿವಿಧ ಪತ್ಕಾರಿಕೆಗಳಲ್ವ್ಯಲಿ ಬೆಳಕು ಕಂಡಿವೆ. 

 

More About Author