Poem

ಅರಳಿಯ ಅರಿವು

ಉಪ್ಪರಿಗೆಯ ಹೂವಾದೆ
ಕೇರಿಯಲ್ಲಿ ಅರಳಿದೆ
ಸರಪಳಿಗಳ ಸೀಳಿ ಬಂದು
ಎದೆ ತುಂಬಿ ಹಾಡಿದೆ

ಮೋಹದಲೆಗೆ ತೇಲದೆ
ಬಗೆದಷ್ಟು ಬಯಲಿಗೆ ಬಂದೆ
ಪ್ರತಿ ಪಾಪದ ಪೊರೆಯ ತೊಳೆದೆ
ಪಾಪ ಪುಣ್ಯದ ಪ್ರಭೆ

ಕೀಚ ಕೊಳಕ ತೊಡದೆ
ಅರಳಿ ಅರಳಿಯ ಅರಿವಾದೆ
ಉರಿದ ಹಸಿ ಹುಸಿಯ ಉರಿದೆ
ಒಳಗೊರಗೂ ಒಲವಾದೆ

ಕೊಂಕಿನೊಡಲ ಖೋಡಾಗದೆ
ಧರಣಿಯ ಭರಣಿಯಾದೆ
ಒಡಕಿನ ಒಳ ಉಡುಕ ಹೊಡೆದೆ
ಪ್ರೀತಿ ಪಥಕೆ ಪರ್ವವಾದೆ

ನಿಜದೆದೆಗೆ ನಂಜಾಗದೆ
ಹನಿ ಜೇನಿಗೂ ಜಿನುಗಿದೆ
ಸರ್ವೈಕ್ಯತೆ ಸೌಖ್ಯತೆಗೆ
ನೆಲಮುಗಿಲ ನೌಕೆಯಾದೆ

- ಕ.ಗಂ.ಶಶಿಕುಮಾರ್(ಕವಿವರ್ಮ)

ಕ.ಗಂ.ಶಶಿಕುಮಾರ್

ಕ.ಗಂ.ಶಶಿಕುಮಾರ್(ಕವಿವರ್ಮ) ಮೂಲತಃ ರಾಮನಗರ ಜಿಲ್ಲೆಯ ಕರೇಹನುಮಯ್ಯನ ಪಾಳ್ಯದವರು. ಕವಿ ಹಾಗೂ ಕನ್ನಾಡ ಉಪನ್ಯಾಸಕರಾಗಿದ್ದಾರೆ.

More About Author