ನಾನು ಹಡೆದ ಮಗುವ ತೆರದೆ ಕವಿತೆ ತೊದಲನು ನುಡಿದಿದೆ ನೋವ ಬಿಕ್ಕುಗಳಲ್ಲಿ ಎಂದೂ ನನ್ನ ಕೈಯನು ಹಿಡಿದಿದೆ
ಮನದ ಮೂಲೆಯ ಆಸೆ ಮಲ್ಲಿಗೆ ಕವಿತೆ ಸಾಲಲಿ ಘಮ್ಮಿಸಿ ನಲಿವ ನಾಳೆಯ ಎಲ್ಲ ಕನಸನು ಹೆಕ್ಕಿ ಪದದಲಿ ಜೋಡಿಸಿ
ಪೊರೆವ ಬಯಲದು ಕವಿತೆ ಎಂದೂ ಭಾವಬೀಜವ ಬಿತ್ತಿದೆ... ಭರವಸೆಯ ಟಿಸಿಲದು ಮೊಳಕೆಯೊಡೆಯುತ ಚಿಗುರಿ ಮನದಲಿ ಹಬ್ಬಿದೆ
ಮಬ್ಬು ಬೆಳಕಲಿ ದಾರಿತೋರುವ ಗುರುವಿನಂದದಿ ಕವಿತೆಯೂ ಇದ್ದೂ ಇರದ ಮಂದಿ ನಡುವಲಿ ಆತ್ಮ ಸಾರಥಿ ಕವಿತೆಯೂ
ವಿದ್ಯಾಶ್ರೀ ಅಡೂರ್ ಮುಂಡಾಜೆ
ಲೇಖಕಿ ವಿದ್ಯಾಶ್ರೀ ಅಡೂರ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆಯವರು. ಬಿ.ಎ ಪದವೀಧರರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರ.
ಕೃತಿಗಳು: ಸ್ವಯಂ ದೀಪ
Daily Column View All
ಹಿಂದಿನ ನಿಲ್ದಾಣದಲ್ಲಿ...
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಚನ್ನಪ್ಪ ಅಂಗಡಿ - ಬೆಳ್ಳಿಚುಕ್ಕಿ
Avalokana
Punch Line
Gandhada Beedu
©2024 Book Brahma Private Limited.