Poem

ಅವಳು ಬರೆದ ಅವನ ಚಿತ್ರ

ಅವಳು ಬರೆದ ಅವನ ಚಿತ್ರಕ್ಕೆ
ಕಿವಿ ಇರಲಿಲ್ಲ
ಅವನು ಚಿತ್ರಿಸಿದ ಅವಳ ಚಿತ್ರಕ್ಕೆ
ಬಾಯಿ ಇರಲಿಲ್ಲ.

ಸಮುದ್ರದ ದಂಡೆಯಲ್ಲಿ
ಎರಡೂ ಚಿತ್ರಗಳು ಕೂಡಿ
ಕಟ್ಟಿಕೊಂಡ ಮನೆಗೆ
ಬಾಗಿಲಿರಲಿಲ್ಲ.

ದೊಡ್ಡ ಅಲೆಯೊಂದು
ಮನೆಯತ್ತ ಧಾವಿಸಿದಾಗ
ಅವಳ ಚಿತ್ರ ಕೂಗಿತು
ಅವನ ಚಿತ್ರ ಎದ್ದು ಬಂದು
ಬಾಗಿಲು ಮುಚ್ಚಿಕೊಂಡಿತು.

ದೇವರಿಗೆ ಅರ್ಥವಾಗಲಿಲ್ಲ
ಮನುಷ್ಯರಲ್ಲಿ ಇದು ಸಹಜ.

ವಿಡಿಯೋ

ಚಿದಂಬರ ನರೇಂದ್ರ

ಚಿದಂಬರ ನರೇಂದ್ರ ಅವರು ಮೂಲತಃ ಧಾರವಾಡದವರು. ವೃತ್ತಿಯಿಂದ ಮೆಕಾನಿಕಲ್ ಇಂಜಿನಿಯರ್, ಪ್ರಸ್ತುತ ಬೆಂಗಳೂರಿನ ಕಂಪನಿಯೊಂದರಲ್ಲಿ ಡಿಸೈನ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಿನಿಮಾ, ಸಾಹಿತ್ಯದ ಓದು-ಬರಹ, ಕಾವ್ಯಾನುವಾದ ಅವರ ಹವ್ಯಾಸಗಳು. ಝೆನ್, ಸೂಫಿ ಕಾವ್ಯಮಾರ್ಗ ಮತ್ತು ಪಾಶ್ಚಿಮಾತ್ಯ-ಪೌರಸ್ತ್ಯ ಕವಿತೆಗಳ ಅನುವಾದದಲ್ಲಿ ಆಸಕ್ತರು. ‘ಚುಕ್ಕಿ ತೋರಸ್ತಾವ ಚಾಚಿ ಬೆರಳ’ ಅವರ ಮೊದಲ ಪ್ರಕಟಿತ ಕವನ ಸಂಕಲನ.

More About Author